Powered By Blogger

Saturday 15 October 2011

ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದವರನ್ನು ಅಭಿನಂದಿಸಿದ ಬಾಳಾ ಠಾಕ್ರೆ


ಮುಂಬೈ : ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ , ಟೀಮ್ ಅಣ್ಣಾ ಹಜಾರೆ ಸದಸ್ಯ ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಶಿವಸೇನೆಯ ಮುಖ್ಯಸ್ಥ ಬಾಳಾ ಠಾಕ್ರೆ ಅಭಿನಂದಿಸಿದ್ದಾರೆ. ಶುಕ್ರವಾರ ಪಕ್ಷದ ಮುಖವಾಣಿ ದೊಪಹರ್ ಕಾ ಸಾಮ್ನಾ ಪತ್ರಿಕೆಯಲ್ಲಿ ಈ ದಾಳಿಯ ವಿಷಯ ಪ್ರಸ್ತಾಪಿಸಿರುವ ಅವರು ಶಹಬ್ಬಾಸ್ ! ನಿಮ್ಮ ಕೃತ್ಯ ಸರಿಯಾಗಿದೆ . ಯಾರು ದೇಶ ವಿಭಜಿಸುವ ಮಾತುಗಳನ್ನು ಆಡುತ್ತಾರೋ ಅವರಿಗೆ ಇದೇ ರೀತಿ ಪಾಠ ಕಲಿಸಬೇಕಿದೆ ಎಂದಿದ್ದಾರೆ.
ದೇಶ ವಿಭಜನೆ ಕುರಿತು ಮಾತನಾಡುವ ಜನಗಳಿಗೆ ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯದಿಂದ ಹೆದರಿಕೆ ಉಂಟಾಗಲಿದೆ . ಈ ರೀತಿಯ ಮಾತುಗಳನ್ನು ಆಡುವ ಜನರಿಗೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಪಾಠ ಕಲಿಸಲು ಜನರು ಮುಂದಾಗಬೇಕಿದೆ ಎಂದಿದ್ದಾರೆ. ಕಾಶ್ಮೀರ ಕುರಿತ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಒಬ್ಬ ಶ್ರೀರಾಮ ಸೇನೆ ಮತ್ತು ಇಬ್ಬರು ಭಗತ್ ಸಿಂಗ್ ಕ್ರಾಂತಿ ಸೇನೆಯ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಆವರಣದಲ್ಲಿರುವ ಭೂಷಣ್ ಕಚೇರಿಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದರು.

No comments:

Post a Comment