Powered By Blogger

Tuesday 31 December 2013

36 ಬಾಲ್'ಗೆ ಆಂಡರ್ಸನ್ ಶತಕ; ಹೊಸ ವಿಶ್ವದಾಖಲೆ

36 ಬಾಲ್'ಗೆ ಆಂಡರ್ಸನ್ ಶತಕ; ಹೊಸ ವಿಶ್ವದಾಖಲೆ


ಕ್ವೀನ್ಸ್'ಟೌನ್(ಜ.01): ನ್ಯೂಜಿಲೆಂಡ್ ದೇಶದ ಉದಯೋನ್ಮುಖ ಆಲ್'ರೌಂಡರ್ ಕೋರೀ ಆಂಡರ್ಸನ್ ಹೊಸ ಅಂತಾರಾಷ್ಟ್ರೀಯ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಂಡರ್ಸನ್ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ ಹೆಸರಿನಲ್ಲಿದ್ದ 17 ವರ್ಷದ ಹಿಂದಿನ ದಾಖಲೆಯನ್ನ ಆಂಡರ್ಸನ್ ಅಳಿಸಿಹಾಕಿದ್ದಾರೆ.

ಕೇವಲ 7ನೇ ಪಂದ್ಯ ಆಡುತ್ತಿದ್ದ ಕೋರೀ ಆಂಡರ್ಸನ್ ಮತ್ತು ಜೆಸ್ಸಿ ರೈಡರ್ ಇಬ್ಬರೂ ಕೆರಿಬಿಯನ್ನರ ದಾಳಿಯನ್ನ ಅಕ್ಷರಶಃ ಧೂಳೀಪಟ ಮಾಡಿದರು. ಆಂಡರ್ಸನ್ ಅತೀ ವೇಗದ ಶತಕ ಸಿಡಿಸಿದಷ್ಟೇ ಅಲ್ಲ ಕೇವಲ 47 ಎಸೆತಗಳಲ್ಲಿ ಅಜೇಯ 131 ರನ್ ಚಚ್ಚಿದರು.

ರೋಹಿತ್ ಶರ್ಮಾ ದಾಖಲೆ ಬಚಾವ್...
ಕೋರೀ ಆಂಡರ್ಸನ್ ಆಡುತ್ತಿದ್ದ ಪರಿ ನೋಡಿದರೆ ಇನ್ನಷ್ಟು ದಾಖಲೆಗಳು ಅಳಿಸಲ್ಪಡುತ್ತವೆಂಬ ನಿರೀಕ್ಷೆಗಳಿದ್ದವು. ಆಂಡರ್ಸನ್ ಅವರ ಇನಿಂಗ್ಸಲ್ಲಿ ಬರೋಬ್ಬರಿ 14 ಸಿಕ್ಸರ್ ಹಾಗೂ 6 ಬೌಂಡರಿಗಳಿದ್ದವು. ಇನ್ನು 3 ಸಿಕ್ಸರ್ ಸಿಡಿಸಿದಿದ್ದರೆ ರೋಹಿತ್ ಶರ್ಮಾ ಅವರ ದಾಖಲೆಯನ್ನ ಅಳಿಸುವ ಅವಕಾಶ ಸಿಗುತ್ತಿತ್ತು...

ಜೆಸ್ಸಿ ರೈಡರ್ ಅಬ್ಬರ...
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೋರೀ ಆಂಡರ್ಸನ್ ಜೊತೆ ಜೆಸ್ಸಿ ರೈಡರ್ ಕೂಡ ಅಬ್ಬರಿಸಿ ಬೊಬ್ಬಿರಿದರು. ಆರಂಭಿಕ ಆಟಗಾರನಾಗಿ ಬಂದ ರೈಡರ್ 51 ಚೆಂಡುಗಳಲ್ಲಿ 104 ರನ್ ಸಿಡಿಸಿ ಕೆರಿಬಿಯನ್ನರ ಗಾಯದ ಮೇಲೆ ಬರೆ ಎಳೆದರು. 21 ಓವರುಗಳಿಗೆ ಮೊಟಕುಗೊಂಡ ಈ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 283 ರನ್ ಪೇರಿಸಿತು. 20 ಓವರುಗಳ ಪಂದ್ಯದಂತೆ ಪರಿಗಣಿಸಿದರೆ ಈ ಮೊತ್ತವೂ ವಿಶ್ವದಾಖಲೆಯೇ...!

ಏಕದಿನ ಕ್ರಿಕೆಟ್'ನಲ್ಲಿ ಅತೀ ವೇಗದ ಶತಕಗಳ ಸರದಾರರು...
1) ಕೋರೀ ಆಂಡರ್ಸನ್(ನ್ಯೂಜಿಲೆಂಡ್) 36 ಎಸೆತ -  2013
2) ಶಾಹಿದ್ ಅಫ್ರಿದಿ(ಪಾಕಿಸ್ತಾನ) 37 ಎಸೆತ - 1996
3) ಮಾರ್ಕ್ ಬೌಷರ್(ದ.ಆಫ್ರಿಕಾ) 44 ಎಸೆತ - 2006
4) ಬ್ರಿಯಾನ್ ಲಾರಾ(ವೆಸ್ಟ್ ಇಂಡೀಸ್) 45 ಎಸೆತ - 2006
5) ಶಾಹಿದ್ ಅಫ್ರಿದಿ(ಪಾಕಿಸ್ತಾನ) 45 ಎಸೆತ - 2005

Source: Suvarna News 

Saturday 21 December 2013

200 Labor Law violations in Yanbu detected- ARAB NEWS

Labor inspectors have detected over 200 violations by a number of companies and contractors dealing with them.
Labor office director in Yanbu Omar Al-Sinani said the cases are related to violations of articles 38 and 39 of the Labor Law and that each case will be dealt with individually in accordance with regulations.
He said the labor inspections are open-ended and inspectors could visit company premises at all locations at any hour according to a predetermined plan in coordination with the police.
The labor law violators have been slapped with fines.

Source: ARAB NEWS 


Expats see relief in new Labor Law- ARAB NEWS

The new Labor Law, which has been amended by the Shoura Council recently, offers a range of incentives to both Saudi and foreign workers in the private sector. 
The amended law insists that an employer should obtain written permission from the worker before transferring him to another place. 
The draft law, however, allows an employer to ask an employee to work in a different place in emergency situations. But the duration should not exceed 30 days in a year. The employer should also meet the worker’s transfer and residency expenditure during that period, the law said.
It also stressed that a worker should be given a written notice by the employer, before firing him from job, after an absence of 20 days if he remained off work for more than 30 days during a one-year contract period (it was 10 days in the previous law). 
If he/she is absent for 15 days continuously, a written notice should be given after 10 days (instead of 5).
An employer can fire a worker, nullifying his contract and without paying him any compensation if he/she remains absent for 30 days (earlier it was 20) in a year or more than 15 days (in place of 10 days).
“An employee should not be asked to work more than 40 hours weekly and more than eight hours daily. Working hours during Ramadan shall be reduced to not more than 35 hours per week for Muslims and not more than seven hours daily,” the law said.
 Source: ARAB NEWS 

Monday 16 December 2013

ಸ್ಥಿಮಿತ ಕಳಕೊಳ್ಳುವ ಹೆತ್ತವರು ಮತ್ತು ನಂಬಿಕೆ ಕಳಕೊಳ್ಳದ ಮಕ್ಕಳು

ಸ್ಥಿಮಿತ ಕಳಕೊಳ್ಳುವ ಹೆತ್ತವರು ಮತ್ತು ನಂಬಿಕೆ ಕಳಕೊಳ್ಳದ ಮಕ್ಕಳು

ಈ ಸುದ್ದಿಗಳನ್ನು ಓದಿ
1. 14 ವರ್ಷದ ಮಗಳು ಅರುಷಿಯನ್ನು ಕೊಂದ ಅಪರಾಧಕ್ಕಾಗಿ ಆಕೆಯ ಹೆತ್ತವರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ 10 ಮತ್ತು 14 ವರ್ಷದ ಮಕ್ಕಳನ್ನು ಕೊಂದ ಬ್ಯಾಂಕ್ ಮ್ಯಾನೇಜರ್ ರಮೇಶ್ ನಾಯ್ಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
3. ಮೂರನೇ ಹೆರಿಗೆಯಲ್ಲೂ ಅವಳಿ ಹೆಣ್ಣು ಮಕ್ಕಳಾದ ದುಃಖದಿಂದ ಬಡ ಕುಟುಂಬವೊಂದು ನವಜಾತ ಶಿಶುಗಳನ್ನು ಪರಭಾರೆ ಮಾಡಿ ಬಂಧನಕ್ಕೀಡಾಗಿದ್ದಾರೆ..  
ಕಳೆದೆರಡು ವಾರಗಳಲ್ಲಿ ಪ್ರಕಟವಾದ ಈ ಮೂರೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆ ಯಿದೆ. ಅದೇನೆಂದರೆ, ಈ ಮೂರರಲ್ಲೂ ಮಕ್ಕಳೇ ನಾಯಕರು. ಹೆತ್ತವರೇ ಖಳನಾಯಕರು. ನಿಜವಾಗಿ, ಇನ್ನೂ ಪ್ರೌಢಾವಸ್ಥೆಗೆ ತಲುಪದ ಪುಟ್ಟ ಮಕ್ಕಳು ಈ ಜಗತ್ತಿನಲ್ಲಿ ಖಳರಾದದ್ದು ಇಲ್ಲವೇ ಇಲ್ಲ. ಹಾಗಂತ ಖಳರಾಗುವುದಕ್ಕೆ ಬೇಕಾದ ಅವಕಾಶ ಅಥವಾ ಉಪಕರಣಗಳು ಅವರ ಮುಂದೆ ಇರಲಿಲ್ಲ ಎಂದಲ್ಲ. ಎಲ್ಲವೂ ಇತ್ತು. ಚೂರಿ, ಕತ್ತಿ, ಕಲ್ಲು.. ಮತ್ತಿತರ ಅಪಾಯಕಾರಿ ವಸ್ತುಗಳು ಮನೆಯಲ್ಲಿ ಮಕ್ಕಳ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಅಪ್ಪ ಸಿಟ್ಟಿನಿಂದ ಥಳಿಸಿದಾಗ ಮಕ್ಕಳು ಚೂರಿಯ ಮೂಲಕ ಪ್ರತಿಕ್ರಿಯಿಸುವುದಕ್ಕೆ ಅವಕಾಶ ಇರುತ್ತದೆ. ತಾಯಿಯ ಬೈಗುಳ, ಗದರಿಕೆಗೆ ಪ್ರತಿಕ್ರಿಯೆಯಾಗಿ ಮಕ್ಕಳು ಕಲ್ಲೆಸೆಯುವುದಕ್ಕೂ ಅವಕಾಶ ಇದೆ. ಅಲ್ಲದೇ ಅನೇಕ ಬಾರಿ ಹೆತ್ತವರು ಮಕ್ಕಳನ್ನು ತಪ್ಪಾಗಿಯೇ ದಂಡಿಸುತ್ತಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವುದು ಅವರಿಗೆ ಗೊತ್ತೇ ಹೊರತು, ದೊಡ್ಡವರಂತೆ ಅದನ್ನು ಜಾಣ್ಮೆಯಿಂದ ಸಮರ್ಥಿಸಿಕೊಳ್ಳುವುದು ಗೊತ್ತಿರುವುದಿಲ್ಲ. ತಮ್ಮ ಕೃತ್ಯವನ್ನು ಮನದಟ್ಟಾಗುವಂತೆ ವಿವರಿಸುವ ಕಲೆಯೂ ಅವರಿಗೆ ಕರಗತವಾಗಿರುವುದಿಲ್ಲ. ಆದರೂ, ಮಕ್ಕಳು ತಮ್ಮ ಹೆತ್ತವರನ್ನು ದ್ವೇಷಿಸುವುದಿಲ್ಲ. ಅಪಾಯಕಾರಿ ಅಸ್ತ್ರಗಳನ್ನು ಎತ್ತಿಕೊಂಡು ಹಗೆ ಸಾಧಿಸುವುದಿಲ್ಲ. ಯಾಕೆ ಹೀಗೆ ಅಂದರೆ, ಮಕ್ಕಳಿಗೆ ಹೆತ್ತವರ ಮೇಲೆ ಅಪಾರ ನಂಬಿಕೆಯಿರುತ್ತದೆ. ಹೆತ್ತವರು ಎಂದೂ ತಮ್ಮ ಜೊತೆಗಿರುತ್ತಾರೆ ಅನ್ನುವ ಭರವಸೆಯೊಂದಿಗೆ ಅವು ಬದುಕುತ್ತವೆ. ಹೀಗಿರುವಾಗ ಹೆತ್ತವರೇ ಮಕ್ಕಳ ಹಂತಕರಾಗುವುದನ್ನು ಹೇಗೆ ವ್ಯಾಖ್ಯಾನಿಸುವುದು? ಯಾರಾದರೂ ತಂಟೆ ಮಾಡಿದರೆ ಮಕ್ಕಳು ಓಡೋಡಿ ಬರುವುದು ಹೆತ್ತವರ ಬಳಿಗೆ. ಶಾಲೆಯಲ್ಲಿ ಶಿಕ್ಷಕರು ಗದರಿಸಿದರೆ, ಗೆಳೆಯರು ಜಗಳ ಕಾಯ್ದರೆ, ಟಿಫಿನ್ ತಿನ್ನಲಾಗದಿದ್ದರೆ.. ಎಲ್ಲವನ್ನೂ ಮಕ್ಕಳು ಹೆತ್ತವರ ಜೊತೆಯೇ ಹಂಚಿಕೊಳ್ಳುತ್ತಾರೆ. ಇಂಥದ್ದೊಂದು ಪ್ರೀತಿ, ನಂಬಿಕೆಯ ಸಂಬಂಧವೊಂದು ಬಿರುಕು ಬಿಡುತ್ತಿರುವುದೇಕೆ? ಇವತ್ತಿನ ದಿನಗಳಲ್ಲಿ ಇಂಥ ಪ್ರಕರಣಗಳು ತೀರಾ ಅಪರೂಪದ್ದಾಗಿಯೂ ಉಳಿದಿಲ್ಲ. ಯಾವ ಊರಲ್ಲೂ ಯಾವ ಸಂದರ್ಭದಲ್ಲೂ ಘಟಿಸಬಹುದಾದ ಮಾಮೂಲಿ ಪ್ರಕರಣದ ಸ್ಥಿತಿಗೆ ಇವು ತಲುಪಿ ಬಿಟ್ಟಿವೆ. ಕಚೇರಿಯಲ್ಲೋ ವ್ಯವಹಾರದಲ್ಲೋ ಆಗಿರುವ ಆಘಾತದ ಸಿಟ್ಟನ್ನು ಎಷ್ಟೋ ಹೆತ್ತವರು ತಮ್ಮ ಮಕ್ಕಳ ಮೇಲೆ ತೀರಿಸಿಕೊಳ್ಳುವುದಿದೆ. ಮಕ್ಕಳಿಗೆ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಇಲ್ಲದಿರುವುದರಿಂದಷ್ಟೇ ಹೆಚ್ಚಿನವು ಸುದ್ದಿಗೊಳಗಾಗುವುದಿಲ್ಲ.  
ಕೌಟುಂಬಿಕ ಕಲಹಗಳು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ದಿನಗಳಿವು. ದೊಡ್ಡ ಕುಟುಂಬಗಳು ಅಣು ಕುಟುಂಬಗಳಾಗಿ ಬದಲಾಗುತ್ತಿವೆ. ಒಂದು ಕಡೆ ಬದುಕು ತುಟ್ಟಿಯಾಗುತ್ತಿದ್ದರೆ ಇನ್ನೊಂದೆಡೆ ಆಧುನಿಕ ಜೀವನ ಕ್ರಮಗಳು ಬಲವಾಗಿ ಆಕರ್ಷಿಸುತ್ತಿವೆ. ಅವುಗಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಬದುಕಲಾಗದಷ್ಟು ಅವು ಅನಿವಾರ್ಯ ಅನ್ನಿಸಿಕೊಳ್ಳುತ್ತಿವೆ. ಇವುಗಳ ನಡುವೆ ಸಮ ತೋಲನ ಕಾಯ್ದುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಪತಿ-ಪತ್ನಿಯರ ನಡುವೆ ಜಗಳ, ವಿವಾಹ ವಿಚ್ಛೇದನ, ಅನಾಥ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿವೆ. ಪತಿ ಮತ್ತು ಪತ್ನಿಯ ಮೇಲೆ ಇವತ್ತಿನ ಜೀವನ ಕ್ರಮಗಳು ಹೆಚ್ಚುವರಿ ಹೊರೆಯನ್ನು ಹೊರಿಸುತ್ತಿರುವುದರಿಂದ ಮನಶ್ಶಾಂತಿ ಕಡಿಮೆಯಾಗುತ್ತಿದೆ. ತೀರಾ ಸಹನೆಯಿಂದ ಪ್ರತಿಕ್ರಿಯಿಸಬಹುದಾದ ಸಣ್ಣ ಪ್ರಕರಣಗಳೂ ರಾದ್ಧಾಂತಕ್ಕೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೆಮ್ಮದಿಯ ಮನೆಗಳನ್ನು ನಿರ್ಮಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯಲ್ಲಿ ಪತಿಯ ಜವಾಬ್ದಾರಿ, ಪತ್ನಿಯ ಹೊಣೆಗಾರಿಕೆ, ಮಕ್ಕಳ ತರಬೇತಿ, ಹಿರಿಯರ ಸ್ಥಾನ-ಮಾನ.. ಎಲ್ಲವುಗಳನ್ನೂ ಅವಲೋಕನಕ್ಕೆ ಒಳಪಡಿಸುವ ವಾತಾವರಣವನ್ನು ಬೆಳೆಸಬೇಕಿದೆ. ಯಾಕೆಂದರೆ, ಇವತ್ತು ಹೊಟ್ಟೆಗೆ ಮತ್ತು ಬಟ್ಟೆಗೆ ತೊಂದರೆ ಇಲ್ಲದ ಮನೆಗಳಿಂದಲೇ ಹೆಚ್ಚೆಚ್ಚು ಆಘಾತಕಾರಿ ಸುದ್ದಿಗಳು ಕೇಳಿಬರುತ್ತಿವೆ. ನೆಮ್ಮದಿ ಕಳಕೊಳ್ಳುತ್ತಿರುವ ಮನೆಗಳಲ್ಲಿ ಹೆಚ್ಚಿನವು ಮಧ್ಯಮ ಮತ್ತು ಶ್ರೀಮಂತವಾದವೇ. ಒಂದು ರೀತಿಯಲ್ಲಿ, ಟಿ.ವಿ. ಮತ್ತು ಇಂಟರ್‍ನೆಟ್‍ಗಳು ನವಪೀಳಿಗೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿವೆ. ಹೊಸ ಹೊಸ ವಿಚಾರಗಳನ್ನು ರೂಪಿಸುತ್ತಿವೆ. ಅವುಗಳಿಂದ ಪ್ರಭಾವಿತಗೊಳ್ಳುವ ಪೀಳಿಗೆಯು ತಪ್ಪು ಹೆಜ್ಜೆಯಿರಿಸುವುದಕ್ಕೂ ಅವಕಾಶ ಇದೆ. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತು ತಿದ್ದಬೇಕಾದ ಹೆತ್ತವರು ಅದು ಬಿಟ್ಟು ಜೀವನ ಸೌಲಭ್ಯವನ್ನು ಹೆಚ್ಚಿಸುವ ಭರದಲ್ಲಿ ಬಿಝಿಯಾಗಿರುತ್ತಾರೆ. ಹೀಗೆ ತಾಳ ತಪ್ಪಿದ ವಾತಾವರಣದಲ್ಲಿ ಕೊನೆಗೆ ಅಸಹನೆ, ಆಕ್ರೋಶಗಳೇ ಮೇಲುಗೈ ಪಡೆಯುವ ಸಾಧ್ಯತೆಯೂ ಇರುತ್ತದೆ.  
- ಎ.ಕೆ ಕುಕ್ಕಿಲ, (ಸಂಪಾದಕೀಯ, ಸನ್ಮಾರ್ಗ ವಾರಪತ್ರಿಕೆ)
ಮಕ್ಕಳು ಮತ್ತು ಹೆತ್ತವರು ಎರಡು ಬೇರೆ ಬೇರೆ ಧ್ರುವಗಳಲ್ಲ. ಪರಸ್ಪರ ಅವಲಂಬಿತರು. ಮಕ್ಕಳಿಲ್ಲದ ಬದುಕನ್ನು ನಿರೀಕ್ಷಿಸಲು ಹೇಗೆ ಒಂದು ಕುಟುಂಬಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಹೆತ್ತವರು ಇಲ್ಲದಿರುವ ಒಂದು ಬದುಕನ್ನು ನಿರೀಕ್ಷಿಸಲು ಮಕ್ಕಳಿಗೂ ಸಾಧ್ಯವಿಲ್ಲ. ಇಲ್ಲಿಯ ಸಂಬಂಧ ಭಾವಪೂರ್ಣವಾದದ್ದು. ಪರಸ್ಪರ ಭರವಸೆ, ನಂಬಿಕೆ, ಪ್ರೀತಿಯ ತಳಹದಿಯಲ್ಲಿ ಕಟ್ಟಲಾದದ್ದು. ಅಂಥ ಸಂಬಂಧಗಳು ಬಿರುಕು ಬಿಡದಂತೆ ಕಾಪಾಡಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಹೆತ್ತವರನ್ನು ಹಂತಕರಂತೆ ಭೀತಿಯಿಂದ ನೋಡುವ ಮಕ್ಕಳು ಮತ್ತು ಮಕ್ಕಳನ್ನು ಕೊಲೆಗೆ ಅರ್ಹರೆಂಬಂತೆ ನೋಡುವ ಹೆತ್ತವರು ಸಮಾಜದಲ್ಲಿ ಬೆಳೆಯತೊಡಗಿದರೆ ಅದಕ್ಕಿಂತ ಭೀತಿಯ ಸನ್ನಿವೇಶ ಇನ್ನೊಂದಿಲ್ಲ. ಆದ್ದರಿಂದ ಬದುಕಿನ ಜಂಜಾಟದ ಮಧ್ಯೆಯೂ ಸ್ಥಿಮಿತವನ್ನು ಕಳಕೊಳ್ಳದ ಕುಟುಂಬಗಳು ನಿರ್ಮಾಣಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳು, ಹೆತ್ತವರು, ಹಿರಿಯರು ನೆಮ್ಮದಿಯಾಗಿ ಬದುಕುವ ‘ಮನೆಗಳ’ ನಿರ್ಮಾಣಕ್ಕೆ ಒತ್ತು ಸಿಗಬೇಕಿದೆ. ಇಲ್ಲದಿದ್ದರೆ, ಹಂತಕ ಹೆತ್ತವರಂತೆ ಹಂತಕ ಮಕ್ಕಳೂ ಸೃಷ್ಟಿಯಾದಾರು.

Sunday 24 November 2013

ಗಂಡ ಹೆಂಡತಿ ವಿರಸಕ್ಕೆ ಐದು ಕಾರಣಗಳು

ಲಂಡನ್(ಜೂ.01): ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲ ಅಲ್ಲವೇ? ಹಾಗೆಯೇ, ಜಗಳವಾಡದ ದಂಪತಿ ಈ ಪ್ರಪಂಚದಲ್ಲೇ ಇಲ್ಲ. ಹಲವು ವರ್ಷ ಒಟ್ಟಿಗೆ ಬದುಕು ಸವೆಸುವಾಗ ಸಣ್ಣಪುಟ್ಟ ಘರ್ಷಣೆಗಳಾಗುವುದು ತೀರಾ ಸಹಜ. ಮನೆಯ ಕೆಲಸದ ವಿಷಯದಿಂದ ಹಿಡಿದು, ಮಕ್ಕಳು, ಟಿವಿ, ದುಡ್ಡು ಮೊದಲಾದ ವಿಷಯಗಳಿಗೆ ಗಂಡ ಮತ್ತು ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಮತ್ತು ಮುನಿಸು-ಜಗಳಗಳು ನಡೆಯುತ್ತಲೇ ಇರುತ್ತವೆ...

ಸಂಗಾತಿಯ ಯಾವ ಗುಣಗಳು ಇಷ್ಟವಾಗುವುದಿಲ್ಲ ಎಂಬ ಬಗ್ಗೆ ಡಾ| ಬೆಕ್ಮನ್ ಎಂಬುವವರು ಒಂದು ದೊಡ್ಡ ಸಮೀಕ್ಷೆಯನ್ನೇ ಮಾಡಿದ್ದಾರೆ. ಸುಮಾರು 2 ಸಾವಿರ ಜನರ ಅಭಿಪ್ರಾಯ ಕಲೆಹಾಕಿ ಕೆಲವು ಮಹತ್ವದ ವಿಷಯಗಳನ್ನ ಹೊರಗೆಡವಿದ್ದಾರೆ. ಆ ಮಾಹಿತಿ ನಮ್ಮ ಭಾರತೀಯರಿಗೂ ಮಹತ್ವದ್ದೇ ಆಗಿದೆ.

ಮೊದಲಿಗೆ, ಹೆಣ್ಣಿನ ಯಾವ ಗುಣಗಳು ಗಂಡಿಗೆ ಕಿರಿಕಿರಿಯಾಗುತ್ತದೆ ಎಂಬುದನ್ನ ನೋಡೋಣ.....

1) ಚೆನ್ನಾಗೇ ಇದ್ದೀನಿ
ಮಹಿಳೆಯರು ಮುಚ್ಚಿಡುವುದರಲ್ಲಿ ಸಿದ್ಧಹಸ್ತರು... ಮನಸಿಗೆ ಬೇಜಾರಾದಾಗ ಅದು ಅವರ ಮುಖದಲ್ಲಿ ವ್ಯಕ್ತವಾಗುತ್ತಿರುತ್ತದೆ. ಆದರೆ, ಏನು ಸಮಸ್ಯೆ ಎಂದು ಗಂಡ ಕೇಳಿದಾಗ ಆಕೆ, ಏನೂ ಸಮಸ್ಯೆ ಇಲ್ಲ ಎಂದೇ ಉತ್ತರಿಸುತ್ತಾಳೆ. ಇದು, ಗಂಡಿಗೆ ತೀರಾ ಕಿರಿಕಿರಿಯಾಗುತ್ತದೆ.. ಹೆಣ್ಣಿನ ಈ ಗುಣವನ್ನ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.40ರಷ್ಟು ಗಂಡಸರು ಇಷ್ಟಪಡುವುದಿಲ್ಲ.

ಹೆಂಗಸರಿಗೆ ತಮ್ಮ ಭಾವನೆಗಳನ್ನ ನೇರಾನೇರವಾಗಿ ಹೊರಹಾಕಲು ಕಷ್ಟಸಾಧ್ಯ. ಹೀಗಾಗಿ, ಅವರು ಇಂಥ ನಿರ್ಲಕ್ಷ ಧೋರಣೆಯನ್ನ ಅನುಸರಿಸುತ್ತಾರಂತೆ. ಅಷ್ಟೇ ಅಲ್ಲ, ತನ್ನ ಸಂಗಾತಿಯು ಅವರಾಗೇ ಮನಸನ್ನ ಅರಿತುಕೊಳ್ಳಲಿ ಎಂದು ಹೆಣ್ಣು ಬಯಸುತ್ತಾಳೆ. ಹೀಗಾಗಿ, ಅವಳು ನೇರವಾಗಿ ತನ್ನ ಭಾವನೆಯನ್ನ ವ್ಯಕ್ತಪಡಿಸುವುದಿಲ್ಲ ಎಂದನ್ನುತ್ತಾರೆ ಮನಃಶಾಸ್ತ್ರಜ್ಞೆ ಕೋರಿನ್ ಸ್ವೀಟ್....

2) ಮಾತು, ಮಾತು, ಮಾತು...
ನಮ್ಮಲ್ಲಿ ಎಲ್ಲರೂ ಅಂದುಕೊಂಡಿರುವುದು ಹೆಂಗಸರು ಹೆಚ್ಚು ಮಾತಾಡುತ್ತಾರೆ, ಗಂಡಸರು ಕಡಿಮೆ ಮಾತಾಡುತ್ತಾರೆ ಎಂದು. ಗಂಡ ಮತ್ತು ಹೆಂಡತಿಯ ನಡುವಿನ ಸಂವಾದದಲ್ಲಿ ಹೆಂಡತಿಯ ಮಾತೇ ಹೆಚ್ಚು ಎಂಬುದನ್ನ ಒಪ್ಪಲೇ ಬೇಕು. ಹೆಂಡತಿ ಹೆಚ್ಚು ಮಾತಾಡುತ್ತಾಳೆ, ಗಂಟೆಗಟ್ಟಲೆ ತಲೆಕೊರೆಯುತ್ತಾಳೆ ಎಂಬುದು ಬಹುತೇಕ ಎಲ್ಲಾ ಗಂಡಂದಿರ ಅಭಿಪ್ರಾಯವಾಗಿದೆ...

ಹೆಂಗಸರಷ್ಟೇ ಮಾತಾಡುವುದಿಲ್ಲ: ಹೆಂಗಸರೇ ಹೆಚ್ಚು ಮಾತಾಡುತ್ತಾರೆ ಎಂಬುದು ವಾಸ್ತವದಲ್ಲಿ ಸತ್ಯ ಅಲ್ಲವಂತೆ. ಮಾತಿನಲ್ಲಿ ಹೆಂಗಸಿಗಿಂತ ಗಂಡಸೇನೂ ಕಡಿಮೆ ಇಲ್ಲ. ವ್ಯತ್ಯಾಸ ಇರುವುದು ಇಬ್ಬರ ಮಾತಿನ ವಿಷಯದಲ್ಲೇ... ಗಂಡಸರು ಕ್ರಿಕೆಟು, ಬ್ಯುಸಿನೆಸ್ಸು, ಕೆಲಸ ಹೀಗೆ ಇಂಥ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿಯಿಂದ ಮಾತನಾಡುತ್ತಾರೆ. ಅದೇ, ಹೆಂಗಸರಾದರೆ ಗಾಸಿಪ್ಪು, ಮನೆ, ಮಕ್ಕಳು, ಭಾವನೆ ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೀಗಾಗಿ, ಹೆಂಡತಿ ಮಾತನಾಡುವ ವಿಷಯ ಗಂಡನಿಗೆ ಇಷ್ಟವಾಗದೇ ಇರುವುದರಿಂದ ಪತ್ನಿಯ ಮಾತು ಅತಿಯಾಯಿತು ಎಂದನಿಸುತ್ತದಂತೆ...

ಈ ನಿಟ್ಟಿನಲ್ಲಿ ಮನಃಶಾಸ್ತ್ರಜ್ಞರು ಹೆಂಗಸರಿಗೆ ಒಂದು ಪರಿಹಾರ ನೀಡುತ್ತಾರೆ. ಹೆಣ್ಣು ತನಗಿಷ್ಟವಾದ ವಿಷಯಗಳ ಬಗ್ಗೆ ತನ್ನ ಸ್ನೇಹಿತೆಯರೊಂದಿಗೆ ಸಂಪೂರ್ಣವಾಗಿ ಹಂಚಿಕೊಂಡು, ಬಳಿಕ ಅದರ ಸಾರಾಂಶವನ್ನಷ್ಟೇ ಗಂಡನಿಗೆ ತಿಳಿಸುವುದನ್ನ ಅಭ್ಯಾಸ ಮಾಡಿಕೊಳ್ಳಬೇಕಂತೆ....

3) ನಿಮ್ಮ ಮನಸ್ಸಲ್ಲೇನಿದೆ?
ಈ ಪ್ರಶ್ನೆಯನ್ನ ಪತ್ನಿ ತನ್ನ ಗಂಡನಿಗೆ ಪದೇ ಪದೇ ಕೇಳುತ್ತಲೇ ಇರುತ್ತಾಳೆ. "ನಿಮಗೆ ಏನನಿಸುತ್ತೆ", "ನಾನು ಹೀಗೆ ಮಾಡಿದ್ರೆ ಚೆನ್ನಾಗಿ ಕಾಣುತ್ತೀನಾ", "ಯಾರ ಬಗ್ಗೆ ಯೋಚನೆ ಮಾಡುತ್ತಿದ್ದೀರಿ"... ಹೀಗೆ ನಾನಾ ಥರದಲ್ಲಿ ಗಂಡನ ಮನಸಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಕೆದಕುತ್ತಲೇ ಇರುತ್ತಾಳೆ... ಆಕೆಗೆ ಇದೊಂದು ಚಾಳಿ. ಗಂಡನಿಗೋ ಅದು ಕಿರಿಕಿರಿ...

ಹೆಂಗಸರ ಈ ಗುಣ ಆಕೆಯ ದೌರ್ಬಲ್ಯ... ತನ್ನ ಬಗ್ಗೆ ಸ್ವಲ್ಪಮಟ್ಟಿಗೆ ಇರುವ ಕೀಳರಿಮೆಯಿಂದ ಆಕೆ ಈ ರೀತಿ ವರ್ತಿಸುತ್ತಾಳಂತೆ. ಬೇರೆಯವರು ತನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂಬುದನ್ನ ತಿಳಿದುಕೊಳ್ಳುವ ಆಸಕ್ತಿ ಹೆಣ್ಣಿನದ್ದು. ಹೀಗಾಗಿ, ತನ್ನ ಸಂಗಾತಿಯ ಮನಸನ್ನ ಅರಿಯಲು ಯಾವಾಗಲು ಪ್ರಯತ್ನಿಸುತ್ತಿರುತ್ತಾಳೆ...

4) ಅಳು, ಅಳು, ಅಳು... ಕಣ್ಣೀರು
ಮಾತುಮಾತಿಗೂ ಹೆಂಗಸರು ಅಳುವುದನ್ನ ಕಂಡರೆ ಗಂಡಸರಿಗೆ ಅಸಾಧ್ಯ ಕಿರಿಕಿರಿ... ಏನಾದರೂ ಸ್ವಲ್ಪ ಮನಸ್ತಾಪವಾದರೂ ಸಾಕು ಹೆಂಗಸರ ಅಳುವಿನಲ್ಲಿ ಅದು ಸಮಾಪ್ತಿಯಾಗುತ್ತದೆ. ಕೆಲ ಹೆಂಗಸರು ತಮ್ಮ ಭಾವನೆಗಳಿಗೆ ಧಕ್ಕೆಯಾದರೆ ಅತ್ತುಬಿಡುತ್ತಾರೆ. ಅದು ಸಹಜವೇ... ಆದರೆ, ಇನ್ನೂ ಕೆಲ ಹೆಂಗಸರು ಬೇಕಂತಲೇ ಕಣ್ಣೀರು ಸುರಿಸಿ ಜಗಳದ ಜಯವನ್ನ ತಮ್ಮದಾಗಿಸಿಕೊಳ್ಳುತ್ತಾರೆ. ಹೆಣ್ಣಿನ ಕಣ್ಣೀರು ಗಂಡಸನ್ನ ಹತಾಶೆಗೊಳಿಸುತ್ತದೆ. ವಿಧಿಯಿಲ್ಲದೇ, ಬಲವಂತವಾಗಿ ಸೋಲೊಪ್ಪಿಕೊಳ್ಳುತ್ತಾನೆ. ಹೆಣ್ಣು ಕಣ್ಣೀರು ಹಾಕಿ ಗೆಲ್ಲುತ್ತಾಳೆ...

5) ಮಾತು ಕೇಳಿಸಿಕೊಳ್ಳೋದೇ ಇಲ್ಲ....
ಇದು, ಗಂಡಸರ ವಿರುದ್ಧ ಹೆಂಗಸರು ಮಾಡುವ ಪ್ರಮುಖ ಕಂಪ್ಲೇಂಟು... ಹೆಂಡತಿ ಮಾತಾನಾಡುತ್ತಲೇ ಇದ್ದರೂ ಗಂಡ ಅನ್ಯಮನಸ್ಕನಾಗಿ ಕೇಳಿಸಿಕೊಳ್ಳುತ್ತಿರುತ್ತಾನೆ. ಹೀಗಾಗಿ, ಹೆಂಡತಿಗೆ ನೀರಿನ ಮೇಲೆ ಹೋಮ ಮಾಡಿದ ಅನುಭವವಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ, ಹೆಂಗಸರಂತೆ ಗಂಡಸರು ಬಹುಕಾರ್ಯಗಳನ್ನ ಮಾಡಲು ಸಾಧ್ಯವಿಲ್ಲ. ಹೆಂಗಸರು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸ ಮಾಡಬಲ್ಲರು. ಟಿವಿ ನೋಡುತ್ತಿರುವಾಗಲೇ ಅಡುಗೆ ಮಾಡಬಲ್ಲರು, ಓದಬಲ್ಲರು, ಮಾತನಾಡಬಲ್ಲರು... ಆದರೆ, ಗಂಡಸರು ಹಾಗಲ್ಲ, ಅವರು ಏಕಕಾಲದಲ್ಲಿ ಒಂದೇ ಕೆಲಸ ಮಾಡಬಲ್ಲರು. ಆಸಕ್ತಿಯಿಂದ ಟಿವಿ ನೋಡುವಾಗ ಯಾರೊಂದಿಗೂ ಮಾತನಾಡಲು ಆಗುವುದಿಲ್ಲವಂತೆ. ಹೀಗಾಗಿ, ಗಂಡಸರೊಂದಿಗೆ ಮಾತನಾಡುವ ಮುಂಚೆ ಆತ ಮಾಡುತ್ತಿರುವ ಕೆಲಸ ಮುಗಿಯುವವರೆಗೂ ಕಾಯುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು....

Wednesday 23 October 2013

PLEASE CLICK THE BELOW LINK CLICK LIKE BUTTON SUPPORT TO PRINCE

My Dear Loving Friends, please click the below link hit like to my Kid Picture
Support to reach maximum LIKE

https://www.facebook.com/photo.php?fbid=697515383601662&set=a.695858250434042.1073741865.173370349349504&type=1&theater 

Sunday 7 April 2013

ಮುದ್ದು ಮಗುವಿನ ಕೀಟಲೆಗೆ ಮದ್ದೇನು?


ಮುದ್ದು ಮಗುವಿನ ಕೀಟಲೆಗೆ ಮದ್ದೇನು?

ಮಕ್ಕಳಿರಲವ್ವ ಮನೆ ತುಂಬ ಎಂಬುದು ಹಳೆಯ ಮಾತು. ಇರುವ ಒಂದೇ ಒಂದು ಮಗುವನ್ನು ಸಲಹುವುದು ಹೇಗೆ ಎಂಬುದು ಈಗಿನವರ ಮುಂದಿರುವ ಬಹುದೊಡ್ಡ ಸವಾಲು. ಒಂದು ಮನೆಯಾಗಿರಲಿ, ನರ್ಸರಿ, ಪ್ಲೇ ಹೋಂ ಅಥವಾ ಶಾಲೆಯಾಗಿರಲಿ ಮಕ್ಕಳ ನಿರ್ವಹಣೆ ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ.
ಮಕ್ಕಳನ್ನು ದಂಡಿಸುವುದರಿಂದ ಎರಡು ರೀತಿಯ ತೊಂದರೆಗಳು ಎದುರಾಗಬಹುದು. ಇದು ಅವರನ್ನು ಜರ್ಜರಿತರನ್ನಾಗಿ ಮಾಡಿ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು ಅಥವಾ ಅವರಲ್ಲಿ ಮತ್ತಷ್ಟು ಒರಟುತನ, ತಿರುಗಿ ಬೀಳುವ ಮನೋಭಾವದ ಅಪಾಯವನ್ನು ಹೆಚ್ಚಿಸಬಹುದು.
ಹೆತ್ತವರ ಮೇಲೇ ಪೊಲೀಸ್ ದೂರು ನೀಡುವ ಪ್ರವೃತ್ತಿ ವಿದೇಶಗಳಲ್ಲಿ ನಡೆಯುತ್ತಿದ್ದರೆ, ಮಕ್ಕಳನ್ನು ತಿದ್ದಲು ಹೋಗಿ ನೌಕರಿ ಕಳೆದುಕೊಳ್ಳುತ್ತಿರುವ ಶಿಕ್ಷಕರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಹತ್ತಾರು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಮಕ್ಕಳನ್ನು ಹತೋಟಿಯಲ್ಲಿಡಲು, ಶಿಸ್ತು ಕಲಿಸಲು ಪಾಲಕರು/ ಶಿಕ್ಷಕರು ಶಿಕ್ಷೆಯನ್ನೇ ನಂಬಿದ್ದ ಕಾಲ ಅದು. ಆದರೆ ಅಂತಹ ಪಾಲಕರ ವಿರುದ್ಧ ಠಾಣೆಗಳಲ್ಲಿ ದೂರು ದಾಖಲಾಗುತ್ತಿರಲಿಲ್ಲ, ಶಿಕ್ಷಕರು ನೌಕರಿ ಕಳೆದುಕೊಂಡು ಮನೆ ಕಡೆ ಮುಖ ಮಾಡುತ್ತಿರಲಿಲ್ಲ.
ಆದರೆ ಈಗ ಈ ಸಮಸ್ಯೆ ಬೆಳೆದು ನಿಂತಿದೆ. ಹೀಗಾಗಿ, ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಬೇಕು, ತಂತ್ರಗಳನ್ನು ಗುರುತಿಸಬೇಕು, ಮಾರ್ಗಗಳನ್ನು ಹುಡುಕಿಕೊಳ್ಳಲೇಬೇಕು ಎನ್ನುತ್ತಾರೆ ತಜ್ಞರು.
ಪಾಲಕರ ದೋಷ
ಇದನ್ನು  ಪೇರೆಂಟಿಂಗ್ ಪ್ರಾಬ್ಲಮ್ ಎನ್ನುತ್ತೇವೆ. ಅಂದರೆ ಸಮಸ್ಯೆ ಇರುವುದು ಮಕ್ಕಳಲ್ಲಿ ಅಲ್ಲ, ದೊಡ್ಡವರಲ್ಲಿ.
ಮಕ್ಕಳನ್ನು ಒಬ್ಬ ರೋಗಿಯ ಸ್ಥಾನದಲ್ಲಿಟ್ಟು ನೋಡುತ್ತೇವೆ. ಅಂದರೆ ಅವರು ತೊಂದರೆಯಲ್ಲಿರುತ್ತಾರೆ. ಮೊದಲನೆಯದು, ಅವರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿರುವುದಿಲ್ಲ. ತಿಳಿವಳಿಕೆಯೂ ಕಡಿಮೆ. ತಮ್ಮಂದಿಗೆ ಪಾಲಕರು ಮತ್ತು ಶಿಕ್ಷಕರು ಯಾಕೆ ಹೀಗೆ ವರ್ತಿಸುತ್ತಾರೆ ಎಂದು ಅವರು ಆಲೋಚಿಸುತ್ತಿರುತ್ತಾರೆ. ಹಾಗೆಯೇ ದೊಡ್ಡವರನ್ನು ವೈದ್ಯರ ಸ್ಥಾನದಲ್ಲಿ ಇಡುತ್ತೇವೆ. ಮಕ್ಕಳ ಸಮಸ್ಯೆ ಏನು ಎನ್ನುವುದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಏನು ಪರಿಹಾರ ಎನ್ನುವುದನ್ನು ಕಂಡುಕೊಳ್ಳಬೇಕು. ಅವರ ತೊಂದರೆಯನ್ನು ನಿವಾರಿಸುವಲ್ಲಿ ಕಾರ್ಯ ನಿರ್ವಹಿಸಬೇಕು.
ಸಮಸ್ಯೆ ಹುಟ್ಟು ಇಲ್ಲಿದೆ…
ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ಎಲ್ಲವೂ ವಿಭಕ್ತ ಕುಟುಂಬಗಳೇ. ಅಮ್ಮ- ಅಪ್ಪ ಮತ್ತು ಮಗು. ಕುಟುಂಬದ ಆರ್ಥಿಕ ಸುಸ್ಥಿತಿಯನ್ನು ಕಾಪಾಡಲು ಬಹುತೇಕ ಕುಟುಂಬಗಳಲ್ಲಿ ಅಮ್ಮ-ಅಪ್ಪ ಇಬ್ಬರೂ ದುಡಿಯಲು ಹೋಗುತ್ತಾರೆ. ದಿನದ ಕನಿಷ್ಠ 12 ಗಂಟೆಯನ್ನು ಮಗು ಪುಸ್ತಕ, ಆಟಿಕೆ, ಟಿ.ವಿ, ಕಂಪ್ಯೂಟರ್ ಹಾಗೂ ಕೆಲಸದವರ ಜೊತೆ ಕಳೆಯುತ್ತದೆ.
ಆಗ ತಂದೆ-ತಾಯಿಯ ಪ್ರೀತ್ಯಾದರ ಪಡೆಯುವ ವಯೋಸಹಜ ಹಂಬಲ ದಿನ ದಿನವೂ ಸೋಲುತ್ತಾ ಹೋಗುತ್ತದೆ. ಬೇಸರ, ಆತಂಕ, ನಿರಾಸೆಯ ಮನೋಭಾವಗಳು ಬೆಳೆಯುತ್ತವೆ. ಇಂತಹ ಭಾವನೆಗಳನ್ನು ವ್ಯಕ್ತಪಡಿಸುವ ಭಾಷಾ ಜ್ಞಾನವೂ ಇಲ್ಲದ ಮಕ್ಕಳು ಅದನ್ನು ಹೊರಹಾಕಲು ಅನ್ಯ ಮಾರ್ಗಗಳನ್ನು ಹುಡುಕುತ್ತಾರೆ. ಅವರಿಗೆ ಸುಲಭವಾಗಿ ಸಾಧ್ಯವಾಗುವಂತಹ ಹಟ ಮಾಡುವುದು, ರಚ್ಚೆ ಹಿಡಿಯುವುದು, ವಸ್ತುಗಳನ್ನು ನಾಶ ಮಾಡುವುದು ಮುಂತಾದ ವರ್ತನೆಗಳನ್ನು ತೋರುತ್ತಾರೆ.
ನಿಯಂತ್ರಣ ಹೇಗೆ?
ಎಳೆಯ ಮಕ್ಕಳನ್ನು ಯಾವುದೇ ಶಿಕ್ಷೆ ಅಥವಾ ದಂಡನೆಗಳಿಂದ ನಿಯಂತ್ರಿಸುವುದು ಸಾಧ್ಯವಿಲ್ಲ. ಇಂತಹ ಮಕ್ಕಳನ್ನು ಪ್ರೀತಿ- ವಿಶ್ವಾಸ, ಅಕ್ಕರೆಗಳಿಂದಲೇ ಗೆಲ್ಲಬೇಕು.
ತಾಳ್ಮೆಯಿಂದ ವರ್ತಿಸಿ
ಮಕ್ಕಳು ಏನು ಹೇಳಲು ಹೊರಟಿದ್ದಾರೆ, ಅವರಿಗೆ ಯಾವುದರ ಅವಶ್ಯಕತೆ ಇದೆ, ಅದನ್ನು ಹೇಗೆ ಬಗೆಹರಿಸಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಂತಹ ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸುವುದು ಮುಖ್ಯ. ಕಚೇರಿ ಕೆಲಸ ಅಥವಾ ಇನ್ನಾವುದೇ ಬೇಸರವನ್ನು ಮಕ್ಕಳ ಮೇಲೆ ತೋರಿಸುವುದು ಅತ್ಯಂತ ಅಪಾಯಕಾರಿ.
ವರ್ತನೆಯ ಮೋಡಿ
ಋಣಾತ್ಮಕ- ಗುಣಾತ್ಮಕ ವರ್ತನೆಯ ಮೋಡಿಯಿಂದ ಮಕ್ಕಳ ವರ್ತನೆಯಲ್ಲಿ ಹೇಗೆ ಪರಿಣಾಮಕಾರಿ ವ್ಯತ್ಯಾಸವನ್ನು ಗುರುತಿಸಬಹುದು ಎಂಬ ಸೂತ್ರಗಳ ವಿವರ ಇಲ್ಲಿದೆ:
- ಎಲ್ಲದಕ್ಕೂ ಶಿಕ್ಷೆಯೊಂದೇ ಪರಿಹಾರವಲ್ಲ. ನಿಮ್ಮ ಋಣಾತ್ಮಕ ಅಥವಾ ಗುಣಾತ್ಮಕ ಪ್ರತಿಕ್ರಿಯೆಗಳು ಮಕ್ಕಳ ವರ್ತನೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಈ ಸೂತ್ರವನ್ನು ಶಾಲೆಯಲ್ಲಿ ಶಿಕ್ಷಕರು/ ಮನೆಯಲ್ಲಿ ಪಾಲಕರು ಪಾಲಿಸಬಹುದು.
ಹೀಗೆ ಮಾಡಿ: ಮಗುವಿನ ನೋಟ್‌ಬುಕ್‌ನಲ್ಲಿ ಎರಡು ಹಾಳೆಗಳನ್ನು ಇದಕ್ಕೆಂದೇ ಇಡಿ. ಒಂದು ಹಾಳೆಯನ್ನು ಬ್ಲ್ಯಾಕ್ ಸ್ಟಾರ್ (ಕಪ್ಪು ನಕ್ಷತ್ರ  * ) ಹಾಕಲು, ಇನ್ನೊಂದು ಹಾಳೆಯನ್ನು ರೆಡ್ ಸ್ಟಾರ್ (ಕೆಂಪು ನಕ್ಷತ್ರ *) ಹಾಕಲು ಇಡಿ. ಮಗುವಿಗೆ ಅದನ್ನು ತೋರಿಸಿ ಹೀಗೆ ಹೇಳಿ- ನೋಡು ನೀನು ತಪ್ಪು ಮಾಡಿದಾಗ ಈ ಹಾಳೆಯ ಮೇಲೆ ಒಂದು ಕಪ್ಪು ಸ್ಟಾರ್ ಬೀಳುತ್ತದೆ ಮತ್ತು ನೀನು ಉತ್ತಮ ಕೆಲಸ ಮಾಡಿದಾಗೊಮ್ಮೆ ಈ ಹಾಳೆಯ ಮೇಲೆ ಒಂದು ಕೆಂಪು ಸ್ಟಾರ್ ಸಿಗುತ್ತದೆ. ಒಂದು ವಾರದಲ್ಲಿ ನೀನು ಕಪ್ಪು ಸ್ಟಾರ್‌ಗಳನ್ನು ಹೆಚ್ಚು ಪಡೆಯುತ್ತೀಯೋ, ಕೆಂಪು ಸ್ಟಾರ್‌ಗಳನ್ನೋ ನೋಡೋಣ ಎಂದು ಹೇಳಿ.
ಮಗು ಹಟ ಮಾಡಿದಾಗ, ಹೇಳಿದ ಮಾತು ಕೇಳದೇ ಇದ್ದಾಗ, ಹೋಂವರ್ಕ್ ಮಾಡಲು ಸೋಮಾರಿತನ ತೋರಿಸಿದಾಗ ದೈಹಿಕ ಶಿಕ್ಷೆ, ಬೈಗುಳಗಳ ಬದಲು ಅದರ ಮುಂದೆಯೇ ಪುಟದಲ್ಲಿ ಕಪ್ಪು ಸ್ಟಾರ್‌ಗಳನ್ನು ಇಡುತ್ತಾ ಹೋಗಿ. ಹಾಗೆಯೇ ಮಗು ನಿಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸಿದಾಗ ಕೆಂಪು ಸ್ಟಾರ್ ನೀಡಿ, ಭೇಷ್ ಹೇಳುತ್ತಾ ಹೋಗಿ. ಇದರ ಜೊತೆಗೆ ಕಪ್ಪು ಸ್ಟಾರ್ ಕೊಡುವಾಗ ಬೇಸರ, ತಾತ್ಸಾರ ಭಾವನೆಯನ್ನು ವ್ಯಕ್ತಪಡಿಸಿ.
ಇದರ ಜೊತೆಗೆ ಇನ್ನೊಂದು ಚಟುವಟಿಕೆ- ಉತ್ತಮ ವರ್ತನೆ ತೋರಿಸಿದಾಗೆಲ್ಲ ಅವರಿಗೆ ಒಂದು ಸಿಹಿ, ಅವರಿಷ್ಟದ ಆಟಿಕೆ ಏನಾದರೂ ಉಡುಗೊರೆ ಕೊಡಿ. ಅವರು ಇಷ್ಟಪಡುವ ಆಟ ಆಡಿಸುವುದು, ಸಾಧ್ಯವಿದ್ದರೆ ಉದ್ಯಾನಕ್ಕೆ ಕರೆದುಕೊಂಡು ಹೋಗಿ. ಹಾಗೆಯೇ ಕಠಿಣ ವರ್ತನೆ ತೋರಿದಾಗೆಲ್ಲ ಅವರಿಂದ ಅವರಿಷ್ಟದ ವಸ್ತುಗಳನ್ನು ದೂರ ಇಡುವ ಮೂಲಕ, ನೀನು ಹೀಗೆ ಮಾಡಿದ್ದಕ್ಕೆ ಇದುವೇ ಶಿಕ್ಷೆ ಎಂದು ಸಮಾಧಾನದಿಂದಲೇ ತಿಳಿಸಿ ಹೇಳಿ.
ಇದರಿಂದ ಮಕ್ಕಳಿಗೆ ತಮ್ಮ ಉತ್ತಮ ವರ್ತನೆ ಹಾಗೂ ಕೆಟ್ಟ ವರ್ತನೆಗಳ ಫಲಿತಾಂಶ ಅಲ್ಲಿಯೇ ಸಿಗುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸಿದಾಗ ಸಿಗುವ ಪ್ರೀತಿ, ಮೆಚ್ಚುಗೆ, ಲಾಭಗಳು ಅವರನ್ನು ಅಂಥದೇ ವರ್ತನೆಯನ್ನು ತೋರಿಸಲು ಪ್ರೇರೇಪಿಸುತ್ತವೆ. ತಾನು ಕಪ್ಪು ಸ್ಟಾರ್‌ಗಿಂತ ಕೆಂಪು ಸ್ಟಾರ್‌ಗಳನ್ನೇ ಹೆಚ್ಚು ಪಡೆಯಬೇಕು ಎಂಬ ಹಂಬಲ ಬೆಳೆಯುತ್ತದೆ. ಇದರಿಂದ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಾಣಬಹುದು.
ಮಕ್ಕಳ ಪೋಷಣೆಯ ಜವಾಬ್ದಾರಿ ಬಹಳ ದೊಡ್ಡದು. ನಾವು ಎಂತಹ ಪಾಲಕರು ಎಂಬ ಸಂಗತಿ ನಾಳೆ ನಮ್ಮ ಮಕ್ಕಳು ಏನಾಗುತ್ತಾರೆ, ಅವರ ಭವಿಷ್ಯವೇನು, ಎಂತಹ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾರೆ, ಸಮಾಜದಲ್ಲಿ ಎಂತಹ ಸ್ಥಾನ ಪಡೆದುಕೊಳ್ಳುತ್ತಾರೆ ಎಂಬ ಅಂಶಗಳನ್ನು ನಿರ್ಧರಿಸುತ್ತದೆ.
ಇಂದಿನ ಮಕ್ಕಳಿಗೂ ಒತ್ತಡದ ಬದುಕು
ಮಕ್ಕಳಿಗಾಗಿ ನಾವು ರಾತ್ರಿ ಹಗಲೂ ದುಡಿಯುತ್ತೇವೆ. ಲಕ್ಷಾಂತರ ಡೊನೇಶನ್, ತಿಂಗಳು-ತಿಂಗಳೂ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ಉತ್ತಮ ಶಾಲೆಗೆ ಸೇರಿಸುತ್ತೇವೆ. ಪಠ್ಯೇತರ ಚಟುವಟಿಕೆಯೂ ಇರಲಿ ಎಂದು ಮ್ಯೂಸಿಕ್, ಕರಾಟೆ, ಸ್ಕೇಟಿಂಗ್ ಕ್ಲಾಸುಗಳೂ ನಡೆಯುತ್ತವೆ. ನಾವು ಚಿಕ್ಕವರಿದ್ದಾಗ ನಮಗೆ ಇಷ್ಟು ಅನುಕೂಲ ಇರಲಿಲ್ಲ. ಇವರಿಗೆ ಕೇಳಿದ್ದನ್ನೇನೂ ಇಲ್ಲ ಎನ್ನುವುದಿಲ್ಲ, ಆದರೂ ಚೆನ್ನಾಗಿ ಓದಿಕೊಂಡು ಜಾಣರಾಗಿರಲು ಇವರಿಗೇನು ಕಷ್ಟ?
-ವೈದ್ಯರ ಬಳಿ ಬರುವ ಬಹುತೇಕ ಪಾಲಕರ ವಾದ ಇದು. ಆದರೆ ನಿಮಗೆ ತಿಳಿದಿರಲಿ, ಇಂದಿನ ಮಕ್ಕಳಿಗೂ ಅವರದೇ ಆದ ಸಮಸ್ಯೆಗಳಿವೆ. ಎಳೆಯ ಮನಸ್ಸುಗಳು ಹೆಚ್ಚಿನ ಹೊರೆಯಿಂದ ತತ್ತರಿಸುತ್ತಿವೆ. ಅವರಿಗೂ ಒತ್ತಡವಿದೆ, ಕ್ಷಣ ಕ್ಷಣವೂ ಆತಂಕವಿದೆ.
ಅದನ್ನೆಲ್ಲ ಅವರು ನಿಮ್ಮೆದುರಲ್ಲದೇ ಬೇರೆ ಯಾರಲ್ಲಿ ತೋರಿಸಿಕೊಳ್ಳಬೇಕು? ಅವರಿಗೆ ವೈದ್ಯರ ಚಿಕಿತ್ಸೆ, ಔಷಧಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಸಾಂತ್ವನವೇ ಮುಖ್ಯ. ಮಕ್ಕಳು ನಿಮ್ಮನ್ನು ಅರ್ಥಮಾಡಿಕೊಳ್ಳಬೇಕು ಎನ್ನುವುದನ್ನು ಬಿಡಿ. ಮಕ್ಕಳನ್ನು ನೀವು ಎಷ್ಟು ಅರ್ಥ ಮಾಡಿಕೊಂಡಿದ್ದೀರಿ ಎನ್ನುವುದು ಗಮನಿಸಿಕೊಳ್ಳಿ. ನಿಮ್ಮ ಸಾಮೀಪ್ಯವೂ ಅವರಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬಲ್ಲದು ಎಂಬುದನ್ನು ನೆನಪಿನಲ್ಲಿಡಿ.