Powered By Blogger

Sunday 18 September 2011

NRI Secular Voice: Gujarat Secular activists and 2002 riot victims ar...

NRI Secular Voice: Gujarat Secular activists and 2002 riot victims ar...: From The Hindu Social activist and dancer Mallika Sarabhai being detained along with some Gujarat riot victims in Ahmedabad ahead of ...

ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ಪ್ರಧಾನ ಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ ಮಾಯಾವತಿ


ಲಕ್ನೋ ( ಉತ್ತರ ಪ್ರದೇಶ ) : ದೇಶದ ಪ್ರಮುಖ ಅಲ್ಪ ಸಂಖ್ಯಾತ ಸಮುದಾಯವಾದ ಮುಸ್ಲಿಂ ಜನಾಂಗಕ್ಕೆ ಅವರ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಕುಮಾರಿ ಮಾಯಾವತಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸ್ವಾತಂತ್ರ್ಯ ಬಂದು ಅರವತ್ತನಾಲ್ಕು ವರ್ಷಗಳು ಕಳೆದಿದ್ದರೂ ಈ ಸಮುದಾಯ ಇನ್ನೂ ಹಲವು ಕ್ಷೇತ್ರಗಳಲ್ಲಿ ಪ್ರಗತಿಯನ್ನೇ ಕಂಡಿಲ್ಲ. ಈ ಸಮುದಾಯದ ಅಭಿವೃದ್ಧಿಗೆ ಮೀಸಲಾತಿ ನೀಡುವುದೊಂದೇ ಸೂಕ್ತ ಪರಿಹಾರವಾಗಿದ್ದು ಈ ನಿಟ್ಟಿನಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಯುಪಿಎ ಸರ್ಕಾರ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

Saturday 17 September 2011

YOUR NAME BEGINS WITH ANY CHARACTER...???


Your name begins with any character??

A You like to draw laughter on the faces
B to have a hard time to trust people
Crazy C
... D fun
E loved
F People admire your
G to gentle and understanding
H to your personal appearance and Jamilan
I love Tumen
Join J
K likes to try everything new
L smile makes around you smiling
M successful
N Wise
O love to play
P sexy and attractive
Q hypocrite
R affectionate and cream
S arrogant
T and one of the best people to make mistakes
U cool
V You do not have opinion
W your imagination and a broad
X Do not tell people that you work Bahei
Y all learn from the experience of witnessing
Z likes to be the focus of the talk around you

ಕ್ರೀಡೆ @ ವಿಶ್ವ ಕನ್ನಡಿಗ ನ್ಯೂಸ್: ಸುವರ್ಣ ನ್ಯೂಸ್ 24x7

ಕ್ರೀಡೆ @ ವಿಶ್ವ ಕನ್ನಡಿಗ ನ್ಯೂಸ್: ಸುವರ್ಣ ನ್ಯೂಸ್ 24x7

ಇಸ್ಲಾಮ್. ಹೆಸರೇ ಹೇಳುವಂತೆ ಇಸ್ಲಾಮ್ ಶಾಂತಿಯ ಧರ್ಮವಾಗಿದೆ.


ಇಸ್ಲಾಮ್ ಎಂಬ ಅರಬಿ ಪದದ ಅರ್ಥ ಶಾಂತಿ, ಸಮರ್ಪಣೆ ಎಂದಾಗಿದೆ. ಒಬ್ಬ ವ್ಯಕ್ತಿ ತನ್ನನ್ನು ತಾನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಮೂಲಕ ಪಡೆಯುವ ಮನಃಶಾಂತಿಯಾಗಿದೆ ಇಸ್ಲಾಮ್. ಹೆಸರೇ ಹೇಳುವಂತೆ ಇಸ್ಲಾಮ್ ಶಾಂತಿಯ ಧರ್ಮವಾಗಿದೆ. ಹೆಚ್ಚಿನವರೂ ಅಪಾರ್ಥ ಮಾಡಿಕೊಂಡಿರುವಂತೆ ಇಸ್ಲಾಮ್ ಎಂದರೆ ಪ್ರವಾದಿ ಮುಹಮ್ಮದ್‌(ಸ)ರವರು ಹುಟ್ಟುಹಾಕಿದ ಹೊಸ ಧರ್ಮವಲ್ಲ. ಭೂಮಿಯ ಮೇಲೆ ಮೊಟ್ಟ ಮೊದಲು ಕಾಲೂರಿದ ಆದಿ ಮನುಷ್ಯ ಆದಮರಿಂದ ತೊಡಗಿ ಕೊನೆಯ ಪ್ರವಾದಿ ಮುಹಮ್ಮದ್‌(ಸ)ರವರ ತನಕ ಎಲ್ಲ ಪ್ರವಾದಿಗಳೂ ಬೋಧಿಸಿದ ಏಕೈಕ ದೈವಿಕ ಧರ್ಮವಾಗಿದೆ ಇಸ್ಲಾಮ್.

  

ಇಸ್ಲಾಮಿನ ಮೂಲಭೂತ ಆಧಾರ ಗ್ರಂಥಗಳು:

 

ಕುರ್‌ಆನ್ ಇಸ್ಲಾಮ್ ಧರ್ಮದ ಮೂಲಭೂತ ಆಧಾರ ಗ್ರಂಥವಾಗಿದೆ. ಸೃಷ್ಟಿಕರ್ತನಾದ ಅಲ್ಲಾಹು ಮುಹಮ್ಮದ್‌(ಸ)ರವರ ಮೇಲೆ ಜಿಬ್ರೀಲ್ (gabriel) ಎಂಬ ದೇವದೂತರ ಮೂಲಕ ಅವತೀರ್ಣಗೊಳಿಸಿದ ಅವನ ವಚನಗಳಾಗಿವೆ ಕುರ್‌ಆನ್. ಕುರ್‌ಆನ್ ಇಸ್ಲಾಮ್ ಧರ್ಮದ ಮೂಲಭೂತ ಪ್ರಮಾಣ ಗ್ರಂಥವಾಗಿದೆ. ಇದರ ನಂತರ ಪ್ರವಾದಿ ಮುಹಮ್ಮದ್‌(ಸ)ರವರ ವಚನಗಳು, ಪ್ರವೃತ್ತಿಗಳು ಮತ್ತು ಅಂಗೀಕಾರಗಳನ್ನೊಳಗೊಂಡಿರುವ ಸುನ್ನತ್ ಇಸ್ಲಾಮಿನ ಎರಡನೇ ಪ್ರಮಾಣ ಗ್ರಂಥವಾಗಿದೆ. ಇವೆರಡರ ಹೊರತು ಇಸ್ಲಾಮ್ ಧರ್ಮದಲ್ಲಿ ಮೂಲಭೂತವಾಗಿ ಆಶ್ರಯಿಸಬಹುದಾದ ಬೇರೆ ಪ್ರಮಾಣ ಗ್ರಂಥಗಳಿಲ್ಲ. ಒಬ್ಬ ವ್ಯಕ್ತಿಗೆ ಅವನ ಜನನದಿಂದ ತೊಡಗಿ ಮರಣದ ತನಕ ಪ್ರಾಯೋಗಿಕ ತತ್ವಗಳ ಆಧಾರದ ಮೇಲೆ ದೈವಿಕ ಮಾರ್ಗದರ್ಶನ ನೀಡುವ ಗ್ರಂಥಗಳಾಗಿವೆ ಕುರ್‌ಆನ್ ಮತ್ತು ಸುನ್ನತ್.

 

ಮುಹಮ್ಮದ್(ಸ):

 

ಮುಹಮ್ಮದ್‌(ಸ)ರವರು ಅಲ್ಲಾಹನ ದಾಸರೂ ಅವನ ಸಂದೇಶವಾಹಕರೂ ಆಗಿದ್ದಾರೆ. ಅವರು ಇಸ್ಲಾಮ್ ಧರ್ಮದ ಕಟ್ಟಕಡೆಯ ಪ್ರವಾದಿಯಾಗಿದ್ದಾರೆಯೇ ಹೊರತು ಏಕೈಕ ಪ್ರವಾದಿಯಲ್ಲ. ಮುಹಮ್ಮದ್‌(ಸ)ರವರಿಗಿಂತ ಮುಂಚೆ ನಿಯೋಗಿಸಲಾದ ಅಬ್ರಹಾಮ್, ಮೋಶೆ, ಯೇಸು ಮೊದಲಾದ ಸಹಸ್ರಾರು ಸಂಖ್ಯೆಯ ಪ್ರವಾದಿಗಳ ಪೈಕಿ ಮುಹಮ್ಮದ್‌(ಸ)ರವರೂ ಒಬ್ಬರಾಗಿದ್ದಾರೆ. ಮುಹಮ್ಮದ್‌(ಸ)ರವರನ್ನು ಪ್ರವಾದಿಯೆಂದು ಒಪ್ಪಿಕೊಳ್ಳುವಂತೆಯೇ ಅಬ್ರಹಾಮ್, ಮೋಶೆ, ಯೇಸು ಮೊದಲಾದವರನ್ನೂ ಪ್ರವಾದಿಗಳೆಂದು ಒಪ್ಪಿಕೊಳ್ಳುವುದು ಮತ್ತು ಅವರನ್ನು ಪ್ರೀತಿಸುವುದು ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಮುಹಮ್ಮದ್‌(ಸ)ರವರನ್ನು ಪ್ರವಾದಿಯೆಂದು ಅಂಗೀಕರಿಸುವ ವ್ಯಕ್ತಿ ಮೋಶೆ ಅಥವಾ ಯೇಸುವನ್ನು ಪ್ರವಾದಿಯೆಂದು ಅಂಗೀಕರಿಸದಿದ್ದರೆ ಅವನು ಮುಸ್ಲಿಮನಾಗುವುದು ಸಾಧ್ಯವಿಲ್ಲ.

 

ಇಸ್ಲಾಮ್ ಧರ್ಮದ ಆಧಾರ ಸ್ಥಂಭಗಳು:

 

ಇಸ್ಲಾಮ್ ಧರ್ಮಕ್ಕೆ ಐದು ಆಧಾರ ಸ್ಥಂಭಗಳಿವೆ. ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್‌(ಸ)ರವರು ಅವನ ಸಂದೇಶವಾಹಕರಾಗಿದ್ದಾರೆ ಎಂಬ ಸಾಕ್ಷ್ಯವಚನ ಇಸ್ಲಾಮ್ ಧರ್ಮದ ಮೊಟ್ಟಮೊದಲ ಮತ್ತು ಅತಿಪ್ರಮುಖ ಆಧಾರ ಸ್ಥಂಭವಾಗಿದೆ. ಈ ಆಧಾರ ಸ್ಥಂಭದ ಮೇಲೆ ಅವಲಂಬಿತವಾಗಿರುವ ಇತರ ನಾಲ್ಕು ಆಧಾರ ಸ್ಥಂಭಗಳಾಗಿವೆ ದಿನನಿತ್ಯ ನಿಗದಿತ ಐದು ವೇಳೆಗಳಲ್ಲಿ ನಮಾಝ್ ನಿರ್ವಹಿಸುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ಕಡ್ಡಾಯ ದಾನ (ಝಕಾತ್) ನೀಡುವ ಅರ್ಹತೆಯಿರುವವರು ಅದನ್ನು ನೀಡುವುದು ಮತ್ತು ಮಕ್ಕಕ್ಕೆ ತೆರಳಿ ಹಜ್ ಯಾತ್ರೆ ನಿರ್ವಹಿಸಲು ದೈಹಿಕ ಮತ್ತು ಆರ್ಥಿಕವಾಗಿ ಸಾಧ್ಯವಿರುವವರು ಅದನ್ನು ನಿರ್ವಹಿಸುವುದು. ಇಸ್ಲಾಮ್ ಧರ್ಮದ ಈ ಐದು ಆಧಾರ ಸ್ಥಂಭಗಳನ್ನೂ ತನ್ನ ಜೀವನದಲ್ಲಿ ಪಾಲಿಸಬೇಕಾದುದು ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಇವುಗಳ ಪೈಕಿ ಯಾವುದಾದರೂ ಒಂದು ಸ್ಥಂಭವನ್ನು ತೊರೆದರೂ ಅವನ ಇಸ್ಲಾಮ್ ಸ್ವೀಕಾರಾರ್ಹವಲ್ಲ ಮತ್ತು ಅವನು ಮುಸ್ಲಿಮನಾಗಿ ಉಳಿಯುವುದಿಲ್ಲ.

 

ಇಸ್ಲಾಮೀ ವಿಶ್ವಾಸ (ಈಮಾನ್)ದ ಆಧಾರ ಸ್ಥಂಭಗಳು:

 

ಇಸ್ಲಾಮೀ ವಿಶ್ವಾಸಕ್ಕೆ ಆರು ಆಧಾರ ಸ್ಥಂಭಗಳಿವೆ. ಅಲ್ಲಾಹನಲ್ಲಿ ವಿಶ್ವಾಸವಿಡುವುದು, ಅವನ ಮಲಕ್ (angel)ಗಳಲ್ಲಿ ವಿಶ್ವಾಸವಿಡುವುದು, ಅವನ ಗ್ರಂಥಗಳಲ್ಲಿ ವಿಶ್ವಾಸವಿಡುವುದು, ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು, ಅಂತ್ಯದಿನದಲ್ಲಿ ವಿಶ್ವಾಸವಿಡುವುದು ಮತ್ತು ವಿಧಿಯಲ್ಲಿ -ಅದರ ಒಳಿತು ಮತ್ತು ಕೆಡುಕುಗಳಲ್ಲಿ- ವಿಶ್ವಾಸವಿಡುವುದು. ಈ ಮೇಲಿನ ಆರು ಸ್ಥಂಭಗಳಲ್ಲೂ ವಿಶ್ವಾಸವಿಡುವುದು ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಇವುಗಳ ಪೈಕಿ ಕೇವಲ ಒಂದರ ಮೇಲಿನ ವಿಶ್ವಾಸವನ್ನು ತೊರೆದರೂ ಅವನು ಮುಸ್ಲಿಮನಾಗಿ ಉಳಿಯುವುದಿಲ್ಲ.

 

ಇಸ್ಲಾಮ್ ಧರ್ಮದಲ್ಲಿ ಬಲಾತ್ಕಾರವಿಲ್ಲ:

 

ತನ್ನ ನಂಬಿಕೆಯನ್ನು ಜನರ ಮೇಲೆ ಬಲಾತ್ಕಾರವಾಗಿ ಹೇರಬೇಕೆಂದು ಇಸ್ಲಾಮ್ ಬೋಧಿಸುವುದಿಲ್ಲ. ವಸ್ತುತಃ ಪ್ರತಿಯೊಬ್ಬ ವ್ಯಕ್ತಿಗೂ ಅವನಿಗೆ ಇಷ್ಟವಾದ ಧರ್ಮವನ್ನು ಆರಿಸುವ ಸ್ವಾತಂತ್ರ್ಯವನ್ನು ಇಸ್ಲಾಮ್ ನೀಡುತ್ತದೆ. ಇಸ್ಲಾಮೀ ಚರಿತ್ರೆಯಲ್ಲಿ ನಡೆದ ಯಾವುದೇ ಯುದ್ಧವೂ ಜನರ ವಿಶ್ವಾಸ ಸ್ವಾತಂತ್ರ್ಯವನ್ನು ಹರಣ ಮಾಡುವುದಕ್ಕಾಗಿರಲಿಲ್ಲ. ಬದಲಾಗಿ ಇಸ್ಲಾಮ್ ಧರ್ಮವನ್ನು ಬಾಹ್ಯ ಆಕ್ರಮಣಗಳಿಂದ ಸಂರಕ್ಷಿಸುವ ಸಲುವಾಗಿತ್ತು. ಘಝ್ನಿ, ಘೋರಿ ಮೊದಲಾದ ದೊರೆಗಳು ನಡೆಸಿದ ಆಕ್ರಮಣಗಳು ಅವರ ಸಾಮ್ರಾಜ್ಯ ವಿಸ್ತರಣೆಯ ಸಲುವಾಗಿತ್ತೇ ಹೊರತು ಇಸ್ಲಾಮ್ ಧರ್ಮಕ್ಕಾಗಿರಲಿಲ್ಲ. ಹಾಗೆಯೇ ಇಂದು ಕೆಲವು ಜನರು ಇಸ್ಲಾಮಿನ ಹೆಸರಲ್ಲಿ ನಡೆಸುವ ಭಯೋತ್ಪಾದನಾ ಕೃತ್ಯಗಳು ಅವರ ಸ್ವಹಿತಾಸಕ್ತಿಗಳ ಸಂರಕ್ಷಣೆಗಾಗಿದೆಯೇ ಹೊರತು ಇಸ್ಲಾಮಿನ ಏಳಿಗೆಗಲ್ಲ. ಯಾಕೆಂದರೆ ಇಸ್ಲಾಮ್ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ನಾಲ್ಕು ಕಾಲುಗಳ ಮೇಲೆ ಚಲಿಸುವ ಮೂಕ ಪ್ರಾಣಿಗಳ ಮೇಲೂ ದಯೆ ತೋರಿಸಬೇಕೆಂದು ಹೇಳಿದ ಇಸ್ಲಾಮ್ ವಿಶ್ವಾಸದ ಹೆಸರಲ್ಲಿ ಜನರ ಮಾರಣ ಹೋಮ ಮಾಡುವುದನ್ನು ಖಂಡಿತ ಸಹಿಸುವುದಿಲ್ಲ. ಆದ್ದರಿಂದ ಮುಸ್ಲಿಮರಾದ ಕೆಲವರು ತಮ್ಮ ಹಿತಕ್ಕಾಗಿ ಮಾಡುವ ಯಾವುದೇ ಕಾರ್ಯವನ್ನು ಇಸ್ಲಾಮಿನ ಮೇಲೆ ಎತ್ತಿಕಟ್ಟಿ ಶಾಂತಿಯ ಧ್ವಜವಾಹಕ ಧರ್ಮವಾದ ಇಸ್ಲಾಮನ್ನು ಅವಹೇಳನ ಮಾಡುವುದು ಖಂಡಿತ ಸಲ್ಲದು.

 

ವಿಶ್ವಾಸ ಮತ್ತು ಕರ್ಮ:

 

ಇಸ್ಲಾಮಿನಲ್ಲಿ ವಿಶ್ವಾಸ ಮತ್ತು ಕರ್ಮವು ಅವಿನಾಭಾವ ಸಂಬಂಧವನ್ನು ಹೊಂದಿವೆ. ಒಂದು ಮತ್ತೊಂದಕ್ಕೆ ಪೂರಕವಾಗಿರಬೇಕಾಗಿದೆ. ಅಂದರೆ ವಿಶ್ವಾಸವಿಲ್ಲದ ಕರ್ಮ ಅಥವಾ ಕರ್ಮವಿಲ್ಲದ ವಿಶ್ವಾಸ ಇಸ್ಲಾಮಿನಲ್ಲಿ ಸ್ವೀಕೃತವಲ್ಲ.  ಇಸ್ಲಾಮೀ ವಿಶ್ವಾಸವನ್ನು ಹೊಂದಿರುವ ವ್ಯಕ್ತಿ ಅಲ್ಲಾಹನ ಎಲ್ಲ ಆದೇಶಗಳನ್ನೂ ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ಪಾಲಿಸಬೇಕಾಗಿದೆ ಮತ್ತು ಅಲ್ಲಾಹನ ಎಲ್ಲ ನಿಷೇಧಗಳಿಂದಲೂ ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ದೂರಸರಿಯಬೇಕಾಗಿದೆ. ಅಲ್ಲಾಹು ಮನುಷ್ಯರ ವಿಚಾರಣೆ ಮಾಡುವುದು ಅವರ ವಿಶ್ವಾಸ ಮತ್ತು ಕರ್ಮಗಳ ಆಧಾರದಲ್ಲಾಗಿದೆ. ನಿಷ್ಕಳಂಕವಾದ ವಿಶ್ವಾಸವನ್ನು ಹೊಂದಿದರೆ ಮಾತ್ರ ಅವನ ಕರ್ಮಗಳು ಸ್ವೀಕೃತವಾಗುತ್ತವೆ. ತೋರಿಕೆಗಾಗಿ ಮಾಡುವ ಯಾವ ಕರ್ಮಗಳೂ ಇಸ್ಲಾಮಿನಲ್ಲಿ ಸ್ವೀಕೃತವಲ್ಲ.

 

ವಿಶ್ವಭಾತೃತ್ವ:

 

ಇಸ್ಲಾಮ್ ವಿಶ್ವಭಾತೃತ್ವವನ್ನು ಪ್ರೋತ್ಸಾಹಿಸುತ್ತದೆ. ಜಗತ್ತಿನ ಒಂದು ಮೂಲೆಯಲ್ಲಿರುವ ಒಬ್ಬ ಮುಸ್ಲಿಮ್ ಜಗತ್ತಿನ ಇನ್ನೊಂದು ಮೂಲೆಯಲ್ಲಿರುವ ಇನ್ನೊಬ್ಬ ಮುಸ್ಲಿಮನ ಸಹೋದರನಾಗಿದ್ದಾನೆ. ಜಾತಿ, ಕುಲ, ವರ್ಣ, ದೇಶ, ಭಾಷೆ ಮೊದಲಾದ ಬೇಧಗಳು ಇಸ್ಲಾಮ್ ಧರ್ಮದಲ್ಲಿಲ್ಲ. ಕಷ್ಟದಲ್ಲಿರುವ ಯಾವುದೇ ವ್ಯಕ್ತಿಗೂ ಅವನ ಧರ್ಮ, ವರ್ಣ, ಭಾಷೆ, ದೇಶವನ್ನು ನೋಡದೆ ನೆರವೀಯಬೇಕೆಂದು ಇಸ್ಲಾಮ್ ಬೋಧಿಸುತ್ತದೆ. ಮಾನವೀಯ ನೆಲೆಯಲ್ಲಿ ತನ್ನ ಶತ್ರುವಿಗೂ ಉಪಕಾರ ಮಾಡಬೇಕೆಂದು ಇಸ್ಲಾಮ್ ಹೇಳುತ್ತದೆ.

 

ಸಮಾನತೆ:

 

ಇಸ್ಲಾಮ್ ಸಮಾನತೆಯನ್ನು ಬೋಧಿಸುವ ಧರ್ಮವಾಗಿದೆ. ಉಚ್ಛ ನೀಚವೆಂಬ ಬೇಧ ಇಸ್ಲಾಮಿನಲ್ಲಿಲ್ಲ. ಬಡವ ಬಲ್ಲಿದ, ಕರಿಯ ಬಿಳಿಯ ಎಂಬ ಬೇಧವೂ ಇಲ್ಲ. ಮನುಷ್ಯರೆಲ್ಲರೂ ಆದಮನ ಮಕ್ಕಳು ಎಂದು ಇಸ್ಲಾಮ್ ಹೇಳುತ್ತದೆ. ಆರಾಧನಾ ಕರ್ಮಗಳಲ್ಲಾಗಲಿ, ವ್ಯಾವಹಾರಿಕ ರಂಗಗಳಲ್ಲಾಗಲಿ ಅಥವಾ ಶಿಕ್ಷಾನಿಯಮಗಳಲ್ಲಾಗಲಿ ಇಸ್ಲಾಮ್ ಯಾರ ಮಧ್ಯೆಯೂ ಬೇಧ ಕಲ್ಪಿಸುವುದಿಲ್ಲ. ಮನುಷ್ಯನಿಗಿರುವ ದೇವಭಕ್ತಿಗೆ ಅನುಗುಣವಾಗಿ ಇಸ್ಲಾಮ್ ಅವನಿಗೆ ಶ್ರೇಷ್ಠತೆಯನ್ನು ಕಲ್ಪಿಸುತ್ತದೆ. ಇಸ್ಲಾಮಿನಲ್ಲಿ ಗಂಡು ಮತ್ತು ಹೆಣ್ಣಿನ ಮಧ್ಯೆಯೂ ಸಮಾನತೆಯಿದೆ. ಆದರೆ ಹೆಣ್ಣಿನ ದೈಹಿಕ ಪ್ರಕೃತಿಗೆ ಅನುಗುಣವಾಗಿ ಇಸ್ಲಾಮ್ ಆಕೆಗೆ ಕೆಲವು ನಿರ್ಬಂಧಗಳನ್ನು ಹೇರಿದೆ. ಆದರೆ ಹೆಣ್ಣಿನ ಮೇಲೆ ಹೇರುವ ಪುರುಷ ದಬ್ಬಾಳಿಕೆಯನ್ನು ಇಸ್ಲಾಮ್ ವಿರೋಧಿಸುತ್ತದೆ.

 

ಸಮಾನ ನ್ಯಾಯ:

 

ಇಸ್ಲಾಮ್ ಸಮಾನ ನ್ಯಾಯವನ್ನು ಎತ್ತಿಹಿಡಿಯುತ್ತದೆ. ಒಬ್ಬ ವ್ಯಕ್ತಿ ಬಡವನಾಗಿರುವ ಕಾರಣದಿಂದಲೋ ಅಥವಾ ಅವನು ಕರಿಯನಾಗಿರುವ ಕಾರಣದಿಂದಲೋ ಅವನಿಗೆ ನ್ಯಾಯ ನಿರಾಕರಿಸುವುದನ್ನು ಇಸ್ಲಾಮ್ ಬಲವಾಗಿ ವಿರೋಧಿಸುತ್ತದೆ. ನ್ಯಾಯ ಪಾಲನೆಯನ್ನು ಕಠಿಣವಾಗಿ ಬೋಧಿಸುವ ಧರ್ಮವಾಗಿದೆ ಇಸ್ಲಾಮ್. ನ್ಯಾಯ ತನ್ನ ಹೆತ್ತವರಿಗೆ, ಆಪ್ತಸಂಬಂಧಿಕರಿಗೆ ಅಥವಾ ಸ್ವತಃ ತನಗೇ ವಿರುದ್ಧವಾಗಿದ್ದರೂ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಇಸ್ಲಾಮ್ ಹೇಳುತ್ತದೆ. ಯುದ್ಧ ಮೊದಲಾದ ವಿಷಮ ಸ್ಥಿತಿಗಳಲ್ಲೂ ನ್ಯಾಯ ಪಾಲಿಸಬೇಕೆಂದು ಇಸ್ಲಾಮ್ ಬೋಧಿಸುತ್ತದೆ.

 

ವಿವಾಹ ಮತ್ತು ದಾಂಪತ್ಯ:

 

ಇಸ್ಲಾಮಿನಲ್ಲಿ ವಿವಾಹವೆಂದರೆ ಅದೊಂದು ಬಲವಾದ ಕರಾರಾಗಿದೆ. ವಿವಾಹವಾಗುವಾಗ ವರದಕ್ಷಿಣೆ ಪಡೆಯುವುದನ್ನು ಇಸ್ಲಾಮ್ ವಿರೋಧಿಸಿದೆ. ಆದರೆ ವಧುದಕ್ಷಿಣೆ (ಮಹ್ರ್) ನೀಡುವುದನ್ನು ಕಡ್ಡಾಯಗೊಳಿಸಿದೆ. ಕನ್ಯೆಯನ್ನು ವಿವಾಹ ಮಾಡಿಕೊಡುವಾಗ ಅದಕ್ಕೆ ಆಕೆ ಅನುಮತಿ ನೀಡುವುದು ಕಡ್ಡಾಯವಾಗಿದೆ. ವಿವಾಹದಲ್ಲಾಗಲಿ ಅಥವಾ ಇತರ ಯಾವುದೇ ವಿಷಯಗಳಲ್ಲಾಗಲಿ ದುಂದುವೆಚ್ಚ ಮಾಡುವುದನ್ನು ಇಸ್ಲಾಮ್ ವಿರೋಧಿಸಿದೆ. ದಂಪತಿಗಳು ಪರಸ್ಪರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕೆಂದು ಮತ್ತು ಒಬ್ಬರನ್ನೊಬ್ಬರು ಅರಿತುಕೊಂಡು ಜೀವನ ನಡೆಸಬೇಕೆಂದು ಇಸ್ಲಾಮ್ ಬೋಧಿಸುತ್ತದೆ. ದಂಪತಿಗಳಲ್ಲಿ ಪರಸ್ಪರ ವಿರಸ ಮೂಡಿಸುವಂತಹ ಎಲ್ಲ ದ್ವಾರಗಳನ್ನು ಇಸ್ಲಾಮ್ ಮುಚ್ಚಿಹಾಕಿದೆ. ತನ್ನ ಪತ್ನಿಯ ಬಾಯಿಯಲ್ಲಿ ಹಾಕುವ ಒಂದು ತುತ್ತು ಅನ್ನಕ್ಕೂ ಪ್ರತಿಫಲವಿದೆಯೆಂದು ಇಸ್ಲಾಮ್ ಘೋಷಿಸುತ್ತದೆ. ಪತ್ನಿಯೊಂದಿಗೆ ಶಿಷ್ಟಾಚಾರದೊಂದಿಗೆ ವರ್ತಿಸುವವನೇ ನಿಜವಾದ ಪುರುಷ ಮತ್ತು ಪತಿಯ ಆಜ್ಞೆಗಳಿಗೆ ಶಿರಸಾವಹಿಸುವುದು ಹೆಣ್ಣಿನ ಮೇಲೆ ಕಡ್ಡಾಯವಾಗಿದೆಯೆಂದು ಇಸ್ಲಾಮ್ ಬೋಧಿಸುತ್ತದೆ.

 

ಕುಟುಂಬ:

 

ಇಸ್ಲಾಮೀ ಕುಟುಂಬದ ಮೇಲೆ ಇಸ್ಲಾಮೀ ಸಮಾಜ ಸ್ಥಾಪನೆಗೊಳ್ಳುವುದರಿಂದ ಕುಟುಂಬಕ್ಕೆ ಇಸ್ಲಾಮ್ ಮಹತ್ವವಾದ ಸ್ಥಾನವನ್ನು ನೀಡಿದೆ. ಕುಟುಂಬ ಸಂಬಂಧ ಕಡಿಯುವುದನ್ನು ಇಸ್ಲಾಮ್ ಘೋರ ಪಾಪವಾಗಿ ಪರಿಗಣಿಸುತ್ತದೆ. ಗಂಡು ಮತ್ತು ಹೆಣ್ಣು ಕುಟುಂಬದ ಪಾಲುದಾರರಾಗಿದ್ದರೂ ಕುಟುಂಬದ ನಾಯಕ ಸ್ಥಾನದ ಹೊಣೆಯನ್ನು ಇಸ್ಲಾಮ್ ಪುರುಷನ ಮೇಲೆ ವಹಿಸಿಕೊಟ್ಟಿದೆ. ಆದ್ದರಿಂದ ಕುಟುಂಬದ ಪಾಲನೆ ಪೋಷಣೆಯ ಹೊಣೆ ಪುರುಷನ ಮೇಲಿದೆ. ಕುಟುಂಬದ ವಿಷಯದಲ್ಲಿ ತೆಗೆಯಲಾಗುವ ಯಾವುದೇ ನಿರ್ಣಯವೂ ಗಂಡು ಮತ್ತು ಹೆಣ್ಣಿನ ಪಾಲುದಾರಿಕೆಯಲ್ಲಿರಬೇಕೇ ಹೊರತು ಗಂಡಿನ ಏಕಸ್ವಾಮ್ಯ ಮತ್ತು ದಬ್ಬಾಳಿಕೆಯನ್ನು ಇಸ್ಲಾಮ್ ಅಂಗೀಕರಿಸುವುದಿಲ್ಲ.

 

ಹೆತ್ತವರು ಮತ್ತು ಮಕ್ಕಳು:

 

ಹೆತ್ತವರನ್ನು ಪ್ರೀತಿಸುವುದು ಮತ್ತು ಅವರ ವೃದ್ಧಾಪ್ಯದಲ್ಲಿ ಅವರಿಗೆ ಆಸರೆಯಾಗಿ ನಿಲ್ಲುವುದು ಇಸ್ಲಾಮಿನಲ್ಲಿ ಕಡ್ಡಾಯವಾಗಿದೆ. ಹೆತ್ತವರ ಮಾತಿಗೆ ಎದುರುತ್ತರ ಕೊಡುವುದು ಅಥವಾ ಕನಿಷ್ಟ ಛೇ ಎಂಬ ಮಾತನ್ನು ಬಳಸುವುದು ನಿಷಿದ್ಧವಾಗಿದೆ. ಮಾತೆಯ ಕಾಲಡಿಯಲ್ಲಿ ಸ್ವರ್ಗವಿದೆಯೆಂದು ಇಸ್ಲಾಮ್ ಬೋಧಿಸುತ್ತದೆ. ಹೆತ್ತವರ ತೃಪ್ತಿಯ ವಿನಾ ಸ್ವರ್ಗಪ್ರವೇಶ ಸಾಧ್ಯವಿಲ್ಲವೆಂದು ಇಸ್ಲಾಮ್ ಹೇಳುತ್ತದೆ. ಮಕ್ಕಳನ್ನು ಪ್ರೀತಿಸಬೇಕು ಮತ್ತು ಅವರ ಮಧ್ಯೆ ಸಮಾನ ನ್ಯಾಯ ಪಾಲಿಸಬೇಕೆಂದು ಇಸ್ಲಾಮ್ ಹೇಳುತ್ತದೆ. ಬಡತನವನ್ನು ಭಯಪಟ್ಟು ಮಕ್ಕಳನ್ನು ಹತ್ಯೆ ಮಾಡುವುದನ್ನು ಇಸ್ಲಾಮ್ ಘೋರ ಪಾಪವಾಗಿ ಪರಿಗಣಿಸುತ್ತದೆ. ಭ್ರೂಣಹತ್ಯೆಯನ್ನು ಇಸ್ಲಾಮ್ ನಿಷಿದ್ಧಗೊಳಿಸಿದೆ. ಇಬ್ಬರು ಹೆಣ್ಮಕ್ಕಳನ್ನು ಚೆನ್ನಾಗಿ ಬೆಳೆಸಿ, ಅವರಿಗೆ ಗೌರವಾರ್ಹವಾದ ವಿದ್ಯೆಯನ್ನು ನೀಡಿ, ವಿವಾಹ ಮಾಡಿಕೊಡುವಾತನಿಗೆ ಸ್ವರ್ಗವಿದೆಯೆಂದು ಇಸ್ಲಾಮ್ ಘೋಷಿಸುತ್ತದೆ.

 

ಸಮಾಜ:

 

ಸಮಾಜದ ನೆಮ್ಮದಿಯನ್ನು ಕೆಡಿಸುವ ಮತ್ತು ಸಾಮಾಜಿಕ ಅಧಃಪತನಕ್ಕೆ ಕಾರಣವಾಗುವ ಎಲ್ಲ ಅನೈತಿಕ ಪ್ರವೃತ್ತಿಗಳನ್ನು ಇಸ್ಲಾಮ್ ನಿಷಿದ್ಧಗೊಳಿಸಿದೆ. ಮದ್ಯಪಾನ ಮೊದಲಾದ ಅಮಲು ಪದಾರ್ಥಗಳ ಸೇವನೆ, ವ್ಯಭಿಚಾರ, ವಿವಾಹಪೂರ್ವ ಲೈಂಗಿಕತೆ, ಸಲಿಂಗರತಿ, ಅನ್ಯರನ್ನು ದೂಷಣೆ ಮಾಡುವುದು, ಚಾಡಿ ಹೇಳುವುದು ಮುಂತಾದ ಎಲ್ಲ ದುರ್ಗುಣಗಳನ್ನೂ ಇಸ್ಲಾಮ್ ನಿಷಿದ್ಧಗೊಳಿಸಿದೆ. ಇವೆಲ್ಲವೂ ಕುಟುಂಬವನ್ನು ಛಿದ್ರಗೊಳಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಹಾಗೆಯೇ ಸಾಮಾಜಿಕ ಪಿಡುಗುಗಳಾದ ಕಳ್ಳತನ, ದರೋಡೆ, ದಬ್ಬಾಳಿಕೆ, ಅನ್ಯಾಯ, ಅಕ್ರಮ ಇತ್ಯಾದಿಗಳನ್ನು ನಿರ್ನಾಮಗೊಳಿಸುವ ಮಾರ್ಗಗಳನ್ನು ಕಲಿಸಿಕೊಡುತ್ತದೆ. ಸಮಾಜದ ಆರೋಗ್ಯಪೂರ್ಣ ನೆಲೆನಿಲ್ಲುವಿಕೆಗಾಗಿ ಅಗತ್ಯವಿರುವ ಎಲ್ಲ ಮಾರ್ಗನಿರ್ದೇಶನಗಳನ್ನು ಇಸ್ಲಾಮ್ ನೀಡಿದೆ. ಸಾಮಾಜಿಕ ಹಿತಕ್ಕಾಗಿ ಮಾಡುವ ಯಾವುದೇ ಕರ್ಮಗಳು ಇಸ್ಲಾಮಿನಲ್ಲಿ ಪ್ರತಿಫಲಾರ್ಹವಾಗಿವೆ.

 

ನೆರೆಹೊರೆ:

 

ನೆರೆಹೊರೆ ಸಂಬಂಧಕ್ಕೆ ಇಸ್ಲಾಮ್ ಬಹಳ ಮಹತ್ವ ನೀಡಿದೆ. ನೆರೆಯಲ್ಲಿರುವ ವ್ಯಕ್ತಿ ಯಾವ ಜಾತಿಗೆ ಸೇರಿದವನಾದರೂ ಅವನೊಂದಿಗೆ ಪಾಲಿಸಬೇಕಾದ ಶಿಷ್ಟಾಚಾರಗಳು, ತನ್ನಿಂದ ಅವನಿಗೆ ದೊರೆಯಬೇಕಾದ ಸುರಕ್ಷತೆಯನ್ನು ದೃಢೀಕರಿಸುವುದು, ಅವನ ಕಷ್ಟಸುಖಗಳಲ್ಲಿ ಪಾಲ್ಗೊಳ್ಳುವುದು ಮೊದಲಾದ ನಿಯಮ ನಿರ್ದೇಶನಗಳನ್ನು ಇಸ್ಲಾಮ್ ನೀಡಿದೆ. ನೆರೆಮನೆಯಾತ ಹಸಿದಿರುವಾಗ ಅವನ ಕಷ್ಟವನ್ನು ವಿಚಾರಿಸದೆ ನೆಮ್ಮದಿಯಾಗಿರುವುದನ್ನು ಇಸ್ಲಾಮ್ ವಿರೋಧಿಸುತ್ತದೆ.

 

ಆರ್ಥಿಕತೆ:

 

ಆರ್ಥಿಕ ಸಂಪಾದನೆಗಾಗಿ ವಕ್ರ ಮಾರ್ಗಗಳ ಮೊರೆ ಹೋಗುವುದನ್ನು ಇಸ್ಲಾಮ್ ನಿಷಿದ್ಧಗೊಳಿಸಿದೆ. ಕಳ್ಳತನ, ಬಡ್ಡಿ, ಜುಗಾರಿ, ಕಾಳಸಂತೆ, ಮೋಸ, ವಂಚನೆ ಇತ್ಯಾದಿಗಳನ್ನು ಇಸ್ಲಾಮ್ ವಿರೋಧಿಸಿದೆ. ನ್ಯಾಯಸಮ್ಮತ ಮಾರ್ಗಗಳ ಮೂಲಕ ಸಂಪಾದಿಸಿದ ಹಣದಿಂದ ಉಣ್ಣುವ ಆಹಾರವೇ ಶ್ರೇಷ್ಠ ಆಹಾರವೆಂದು ಇಸ್ಲಾಮ್ ಹೇಳುತ್ತದೆ. ಅನ್ಯರ ಮುಂದೆ ಕೈಚಾಚುವುದನ್ನು ಇಸ್ಲಾಮ್ ಪ್ರೋತ್ಸಾಹಿಸುವುದಿಲ್ಲ. ಪರಿಶ್ರಮಪಟ್ಟು ಕುಟುಂಬವನ್ನು ಪೋಷಿಸುವುದು ಅನ್ಯರ ಮುಂದೆ ಕೈಚಾಚುವುದಕ್ಕಿಂತಲೂ ಶ್ರೇಷ್ಠವೆಂದು ಇಸ್ಲಾಮ್ ಹೇಳುತ್ತದೆ.

 

ಪರಧರ್ಮ ಸಹಿಷ್ಣುತೆ:

 

ಪರಧರ್ಮ ದೂಷಣೆಯನ್ನು ಇಸ್ಲಾಮ್ ವಿರೋಧಿಸುತ್ತದೆ. ಮಾನವೀಯ ನೆಲೆಯಲ್ಲಿ ಅನ್ಯಧರ್ಮೀಯರ ಕಷ್ಟಸುಖಗಳಲ್ಲಿ ಭಾಗಿಯಾಗುವುದು, ಅವರ ಏಳಿಗೆಯನ್ನು ಬಯಸುವುದು, ಅವರೊಂದಿಗೆ ಆಪ್ತ ಸಂಬಂಧ ಹೊಂದುವುದು ಇತ್ಯಾದಿಗಳನ್ನು ಇಸ್ಲಾಮ್ ವಿರೋಧಿಸುವುದಿಲ್ಲ. ಆದರೆ ಧಾರ್ಮಿಕ ನೆಲೆಯಲ್ಲಿ ಅವರೊಂದಿಗೆ ಬೆರೆಯುವುದು, ಅಂದರೆ ಅವರ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವುದು, ಅವರ ಧಾರ್ಮಿಕ ಉತ್ಸವಗಳಲ್ಲಿ ಭಾಗಿಯಾಗುವುದು, ಅವರ ಸಂಪ್ರದಾಯಗಳನ್ನು ಅನುಕರಿಸುವುದು ಇತ್ಯಾದಿಗಳನ್ನು ಇಸ್ಲಾಮ್ ವಿರೋಧಿಸುತ್ತದೆ. ಧರ್ಮದ ಬಗ್ಗೆ ಪರಸ್ಪರ ಸಂವಾದ ಮಾಡುವುದನ್ನು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ಆದರೆ ಧರ್ಮದ ಹೆಸರಲ್ಲಿ ಜಗಳವಾಡುವುದನ್ನು ವಿರೋಧಿಸುತ್ತದೆ.

 

ಕಾರ್ಮಿಕ ನೀತಿ:

 

ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿದ ಧರ್ಮವಾಗಿದೆ ಇಸ್ಲಾಮ್. ಕೂಲಿಯಾಳಿನ ಬೆವರು ಆರುವುದಕ್ಕೆ ಮೊದಲೇ ಅವನ ವೇತನ ಕೊಟ್ಟುಬಿಡಬೇಕೆಂದು ಇಸ್ಲಾಮ್ ಬೋಧಿಸುತ್ತದೆ. ವೇತನಕ್ಕೆ ಓರ್ವ ವ್ಯಕ್ತಿಯನ್ನು ನಿಶ್ಚಯಿಸಿದರೆ ಅವನಿಗೆ ಸಾಧ್ಯವಾಗದ ಕೆಲಸವನ್ನು ಅವನಿಂದ ಮಾಡಿಸಕೂಡದು, ಹಾಗೆ ಮಾಡಿಸುವುದಾದರೆ ಅವನಿಗೆ ಅದರಲ್ಲಿ ನೆರವೀಯಬೇಕೆಂದು ಇಸ್ಲಾಮ್ ಹೇಳುತ್ತದೆ.

 

ಹೀಗೆ ಇಸ್ಲಾಮ್ ಮನುಷ್ಯನ ಜೀವನದುದ್ದಕ್ಕೂ ಅವನಿಗೆ ದೈವಿಕ ಮಾರ್ಗದರ್ಶನ ನೀಡುತ್ತದೆ. ಇಲ್ಲಿ ಸೂಚಿಸಲಾಗಿರುವುದು ಅವುಗಳ ಪೈಕಿ ಕೆಲವನ್ನು ಮಾತ್ರ. ಮನುಷ್ಯನೆಂಬ ನೆಲೆಯಲ್ಲಿ ಎಲ್ಲರೊಂದಿಗೂ ಆತ್ಮೀಯವಾಗಿ ವರ್ತಿಸಬೇಕೆಂದು ಇಸ್ಲಾಮ್ ಹೇಳುತ್ತದೆ. ಇತರರ ಘನತೆ ಗೌರವಗಳಿಗೆ ಕುಂದುಂಟು ಮಾಡುವ ಎಲ್ಲ ಮಾತು, ಪ್ರವೃತ್ತಿಗಳನ್ನೂ ಇಸ್ಲಾಮ್ ವಿರೋಧಿಸುತ್ತದೆ. ಅಷ್ಟೇ ಅಲ್ಲ, ಮನುಷ್ಯ ಜೀವಿ ಸೇರಿದಂತೆ ಈ ಜಗತ್ತಿನಲ್ಲಿರುವ ಎಲ್ಲ ಜೀವಿಗಳೊಂದಿಗೆ ದಯೆ, ಕರುಣೆ ಮತ್ತು ವಾತ್ಸಲ್ಯ ತೋರಿಸಬೇಕೆಂದು ಇಸ್ಲಾಮ್ ಬೋಧಿಸುತ್ತದೆ.

Sunday 11 September 2011

Ayan'S New Slideshow Slideshow

Ayan'S New Slideshow Slideshow: TripAdvisor™ TripWow ★ Ayan'S New Slideshow Slideshow ★ to Jeddah. Stunning free travel slideshows on TripAdvisor

Ayyu'S Independence Special Slideshow Slideshow

Ayyu'S Independence Special Slideshow Slideshow: TripAdvisor™ TripWow ★ Ayyu'S Independence Special Slideshow Slideshow ★ to Mangalore. Stunning free travel slideshows on TripAdvisor

Saturday 10 September 2011

ಮೂವತ್ತು ಕೋಟಿ ರು. ಬೆಲೆ ಬಾಳುವ ನಟ ದರ್ಶನ್

ನಟ ದರ್ಶನ್ ಈಗ ವಿಚಾರಣಾಧೀರ ಕೈದಿ. ಸದ್ಯಕ್ಕೆ ಅವರು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಗಾಂಧಿನಗರದಲ್ಲಿ ದರ್ಶನ್ ಮೇಲೆ ಸುಮಾರು ರು.30 ಕೋಟಿ ಬಂಡವಾಳ ಹೊಡಲಾಗಿದ್ದು, ನಿರ್ಮಾಪಕರು ಅಂಗೈಯಲ್ಲಿ ಜೀವ ಹಿಡಿದು ಓಡಾಡುವಂತಾಗಿದೆ.

ದರ್ಶನ್ ಪರಿಸ್ಥಿತಿ ಹೀಗಾದ ಹಿನ್ನೆಲೆಯಲ್ಲಿ ತೀರಾ ಆತಂಕಕ್ಕೆ ಒಳಗಾಗಿರುವ ನಿರ್ಮಾಪಕ ಎಂದರೆ ಆನಂದ್ ಅಪ್ಪುಗೋಳ್. ಅವರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಮೇಲೆ ರು.12 ಕೋಟಿ ಬಂಡವಾಳ ಹೂಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಐತಿಹಾಸಿಕ ಚಿತ್ರದ ಚಿತ್ರೀಕರಣ ಶೇ.80ರಷ್ಟು ಮುಗಿದಿದೆ.

'ಚಿಂಗಾರಿ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಬಿ ಮಹದೇವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ. ಸದ್ಯಕ್ಕೆ 'ಚಿಂಗಾರಿ' ಚಿತ್ರೀಕರಣ ಮುಂದೂಡಲ್ಪಟ್ಟಿದೆ.

ಇತ್ತೀಚೆಗೆ ಅದ್ದೂರಿಯಾಗಿ ಸೆಟ್ಟೇರಿದ 'ವಿರಾಟ್' ಚಿತ್ರದ ಕತೆ ಕೇಳುವಂತಿಲ್ಲ. ಇದಿಷ್ಟೇ ಅಲ್ಲದೆ ಇನ್ನೂ ಅನೇಕ ನಿರ್ಮಾಪಕರು ದರ್ಶನ್ ಅವರಿಗೆ ಅಡ್ವಾನ್ಸ್ ಹಣ ನೀಡಿದ್ದಾರೆ. ಅವರೆಲ್ಲಾ ಕೈಯಲ್ಲಿ ಜೀವಹಿಡಿದು ಆಕಾಶ ನೋಡುವಂತಾಗಿದೆ. ಅಡ್ವಾನ್ಸ್ ನೀಡಿದವರಲ್ಲಿ ಮಹೇಶ್ ಸುಖಧರೆ ಹೆಸರು ಪ್ರಮುಖವಾಗಿದೆ.

ಇವರೆಲ್ಲಾ ವಿಲವಿಲ ಒದ್ದಾಡುತ್ತಿದ್ದರೆ ಕೇರ್ ಫ್ರೀಯಾಗಿರುವವರು ಮಾತ್ರ ಎಂಡಿ ಶ್ರೀಧರ್. ಅವರ 'ಬುಲ್ ಬುಲ್' ಚಿತ್ರಕ್ಕೆ ದರ್ಶನ್ ಯಾವುದೇ ಸಂಭಾವನೆ ಪಡೆದಿಲ್ಲವಂತೆ. ಅವರೊಬ್ಬರೇ ಸದ್ಯಕ್ಕೆ ಸೇಫ್. ಇನ್ನು ಸುದೀರ್ಘ ಸಮಯದಿಂದ ಸೆಟ್ಸ್‌ನಲ್ಲೇ ಇದ್ದ ಸಾರಥಿ ಚಿತ್ರಕ್ಕೆ ಬಿಡುಗಡೆ ಮೋಕ್ಷ ಸಿಕ್ಕಿದ್ದು ಅವರ ನಿರ್ಮಾಪಕ ಕೆ ಸಿ ಎನ್ ಚಂದ್ರಶೇಖರ್ ತಲೆಮೇಲಿನ ಭಾರ ಇಳಿದಂತಾಗಿದೆ. (ಏಜೆನ್ಸೀಸ್)


ಜನಾರ್ದನ ರೆಡ್ಡಿ ಬಂಗಾರವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತೆ?

ಬಳ್ಳಾರಿ, ಸೆ. 7 : ಸಿಬಿಐನಿಂದ ಬಂಧನಕ್ಕೊಳಗಾಗಿ ಆಂಧ್ರದ ಚಂಚಲಗುಡ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ದಿನತಳ್ಳುತ್ತಿರುವ ಎಂಎಲ್ಸಿ ಜಿ. ಜನಾರ್ದನ ರೆಡ್ಡಿಯ ಮನೆಯಲ್ಲಿ ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಕೂಡ ಶೋಧ ಮುಂದುವರೆಸಿದ್ದಾರೆ. ಬುಧವಾರ ಮೆಟಲ್ ಡಿಟೆಕ್ಟರ್‌ಗಳನ್ನು ಬಳಕೆ ಮಾಡಿ ಬಂಗಾರ, ಪ್ಲಾಟಿನಂ ಮತ್ತು ಬೆಳ್ಳಿಯ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕೃತ ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳು ರೆಡ್ಡಿಯ ಮನೆಯ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಬಂಗಾರ, ನಗದು ಹಣ ಹಾಗೂ ಇನ್ನಿತರೆ ಮಾಹಿತಿಗಳನ್ನು ಅಡಗಿಸಿ ಇಡಲಾಗಿದೆ ಎನ್ನುವ ಮಾಹಿತಿಯನ್ನು ಆಧರಿಸಿ ಮಂಗಳವಾರ ನಡೆಸಿದ ಶೋಧ ಯಾವುದೇ ಫಲವನ್ನು ನೀಡಿರಲಿಲ್ಲ. ಆದ್ದರಿಂದ ಬುಧವಾರಕ್ಕೆ ಮೆಟಲ್ ಡಿಟೆಕ್ಟರ್ ಮೂಲಕವೇ ಮನೆಯಲ್ಲಿ ಶೋಧ ನಡೆಸಿದ್ದಾರೆ.
ಐಷಾರಾಮಿ ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಸಕಲೈಶ್ವರ್ಯಗನ್ನು ಅನುಭವಿಸಿದ ಜನಾರ್ದನ ರೆಡ್ಡಿ, ವಾಸವಿರುವ ಮನೆಯಲ್ಲಿ ನೆಲಮಾಳಿಗೆ ಸಾಮಾನ್ಯರ ಕಣ್ಣಿಗೆ ಕಾಣುತ್ತಿಲ್ಲ. ಆದರೂ ಸಿಬಿಐ ಅಧಿಕಾರಿಗಳು ತಮಗೆ ದೊರೆತ ಮಾಹಿತಿಯನ್ನು ಆಧರಿಸಿ ತನಿಖೆಯನ್ನು ನಡೆಸಿ ಬಂಗಾರದ ಶೋಧ ನಡೆಸಿದ್ದರು.

ಆಗ, ಮೆಟಲ್ ಡಿಟೆಕ್ಟರ್ ಶೌಚಾಲಯ, ಸ್ನಾನದಗೃಹಗಳತ್ತ ಹೋದಾಗ ಬಂಗಾರ ಇರುವುದು ಪತ್ತೆ ಮಾಡಿತು. ಕೂಡಲೇ ಚುರುಕಾದ ಅಧಿಕಾರಿಗಳ ತಂಡ ಮನೆಯ ಸದಸ್ಯರನ್ನು ಸ್ಥಳಕ್ಕೆ ಕರೆಯಿಸಿ ಬಂಗಾರವನ್ನು ಅಡಗಿಸಿ ಇರಿಸಿರುವ ಕುರಿತು ಮಾಹಿತಿ ಪಡೆದರು. ಅಲ್ಲದೇ, ಸ್ನಾನದಗೃಹದಲ್ಲಿ ಅಲಂಕಾರಕ್ಕಾಗಿ, ಶೌಚಾಲಯದಲ್ಲಿ ಭದ್ರತೆಗಾಗಿ ಇರಿಸಿರುವ ಬಂಗಾರದ ಮಾಹಿತಿ ತಿಳಿದು ದಂಗಾದರು.

ಬುಧವಾರ ಮಧ್ಯಾಹ್ನದ ವೇಳೆಗೆ ಈ ಮಾಹಿತಿ ಖಚಿತವಾಗುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಆದಾಯ ತೆರಿಗೆ ಅಧಿಕಾರಿಗಳನ್ನು ಕರೆಯಿಸಿ ಅವರ ಸಮ್ಮುಖದಲ್ಲೇ ಬಂಗಾರವನ್ನು ಹೊರ ತೆಗೆಯಲು ಮುಂದಾದರು. ಆಗ, ಒಟ್ಟು ಕನಿಷ್ಟ 30 ಕೆಜಿ ಬಂಗಾರ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ಮೂಲಗಳು ಖಚಿತಪಡಿಸಿವೆ.

ವಿದೇಶಿ ವಸ್ತುಗಳ ಮೂಲಕವೇ ಜನಾರ್ದನರೆಡ್ಡಿ ಅವರ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಾಣವಾಗಿದ್ದು ಇವುಗಳ ಒಟ್ಟು ವೆಚ್ಚವೇ ಕೆಲ ಕೋಟಿಗಳನ್ನು ಮೀರಿಸುವಂಥಹದ್ದು. ಕುಟುಂಬದ ಸದಸ್ಯರು ಮತ್ತು ಮನೆಯ ವಿಶ್ವಾಸಾರ್ಹ - ನಂಬಿಕೆಸ್ಥ ನೌಕರರು ಮಾತ್ರ ಈ ಕೋಣೆಗಳ ಪ್ರವೇಶಕ್ಕೆ ಅರ್ಹರು.

ಸಿಬಿಐ ಅಧಿಕಾರಿಗಳ ಶೋಧ ಕಾರ್ಯ ಬುಧವಾರ ರಾತ್ರಿ 8 ಗಂಟೆ ನಂತರವೂ ಮುಂದುವರೆದಿದೆ. ಸಿಬಿಐ ತಂಡದ ಜೊತೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇದ್ದು ಸಿಕ್ಕ ಬಂಗಾರದ ಮೌಲ್ಯ ನಿಗದಿ ಮಾಡುವ, ಆದಾಯ ತೆರಿಗೆ ಪಾವತಿಸುವ ಪಟ್ಟಿಯಲ್ಲಿ ಸಿಕ್ಕಿರುವ ಬಂಗಾರಕ್ಕೆ ತೆರಿಗೆ ಪಾವತಿ ಆಗಿರುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ರೆಡ್ಡಿ ಪತ್ನಿಯ ಬಂಧನ? : ಜನಾರ್ದನರೆಡ್ಡಿಯ ಪತ್ನಿ ಲಕ್ಷ್ಮಿ ಅರುಣ ಅವರನ್ನು ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ಬಂಧಿಸಿ, ಹೈದರಾಬಾದ್‌ನ ಸಿಬಿಐ ಕೋರ್ಟ್‌ಗೆ ಒಪ್ಪಿಸಲಿದ್ದಾರೆ ಎನ್ನುವ ದಟ್ಟವಾದ ವದಂತಿಗಳು ಇರುವ ಹಿನ್ನೆಲೆಯಲ್ಲಿ ರೆಡ್ಡಿಯ ಮನೆಯ ಮುಂದೆ ಮಾಧ್ಯಮ ಪ್ರತಿನಿಧಿಗಳು ಬುಧವಾರ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದಾರೆ.

ಕನ್ನಡ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ

ಧರ್ಮಪತ್ನಿ ವಿಜಯಲಕ್ಷ್ಮಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಆಕೆಯನ್ನು ಮತ್ತು ಅವರಿಬ್ಬರ ಮಗ ವಿನೀಶ್ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಂಧನಕ್ಕೊಳಗಾಗಿರುವ ಚಾಲೇಂಜಿಂಗ್ ಸ್ಟಾರ್ ದರ್ಶನ್ ತೂಗದೀಪ್ ಅವರಿಗೆ 1ನೇ ಎಸಿಎಂಎಂ ವೆಂಕಟೇಶ್ ಹುಲಗಿ ಜಾಮೀನು ನಿರಾಕರಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂದರೆ ಜೈಲು.

ಸಂಜೆಯ ಹೊತ್ತಿನಲ್ಲಿ ನ್ಯಾಯಾಧೀಶರು ಕೋರ್ಟಿನಲ್ಲಿ ಇಲ್ಲದ ಕಾರಣ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನ ಜ್ಯುಡಿಶಿಯಲ್ ಬ್ಲಾಕ್ ನಲ್ಲಿರುವ ಅವರ ನಿವಾಸದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗಳು ಹಾಜರಾದರು. ದರ್ಶನ್ ಅವರನ್ನು ವಕೀಲರಾದ ಕೃಷ್ಣೇಗೌಡ ಮತ್ತು ರಾಘವೇಂದ್ರ ರೆಡ್ಡಿ ಪ್ರತಿನಿಧಿಸಿದ್ದರು.

ಚಿತ್ರನಟ ಅಂಬರೀಷ್ ಅವರ ಮುಖಾಂತರ ಮಾಡಲಾಗಿದ್ದ ಸಂಧಾನ ಸೂತ್ರದ ಪತ್ರವನ್ನು ನ್ಯಾಯಾಧೀಶರಿಗೆ ನೀಡಲಾಗಿದ್ದರೂ, ದರ್ಶನ್ ಮೇಲೆ ಮಾಡಿರುವ ಆರೋಪ ಜಾಮೀನುರಹಿತ ಅಪರಾಧವಾಗಿದ್ದರಿಂದ ಮತ್ತು ಸರಕಾರಿ ವಕೀಲರು ಉಪಸ್ಥಿತರಿಲ್ಲದಿದ್ದರಿಂದ ಜಾಮೀನು ನೀಡಲು ನ್ಯಾಯಾಧೀಶರು ನಿರಾಕರಿಸಿದರು.

ಜಾಮೀನು ಅರ್ಜಿಗೆ ಸರಕಾರಿ ವಕೀಲರು ಪ್ರತ್ಯುತ್ತರ ಕೊಡಬೇಕಾಗಿರುವುದರಿಂದ ಸೋಮವಾರ ಮತ್ತೆ ಅರ್ಜಿ ಸಲ್ಲಿಸಲು ನ್ಯಾಯಾಧೀಶರು ದರ್ಶನ್ ಪರ ವಕೀಲರಿಗೆ ಹೇಳಿದ್ದಾರೆ. ಆದ್ದರಿಂದ ಸೋಮವಾರದವರೆಗೆ ದರ್ಶನ್ ಪರಪ್ಪನ ಅಗ್ರಹಾರದ ಜೈಲಿನ ದರ್ಶನ ಮಾಡಲೇಬೇಕಾಗಿದೆ.

ಹಲ್ಲೆ ಕಥಗೆ ಹೊಸ ತಿರುವು : ದರ್ಶನ್ ಪತ್ನಿಗೆ ದೈಹಿಕ ಹಲ್ಲೆ ಮಾಡಿದ ಕಥೆ ಮ್ಯಾಜಿಸ್ಟ್ರೇಟ್ ಅವರ ಮನೆ ಪ್ರವೇಶಿಸುವ ಹೊತ್ತಿಗೆ ಸಂಪೂರ್ಣ ಬದಲಾಗಿದೆ. ನ್ಯಾಯಾಧೀಶರ ಮುಂದೆ ವಿಜಯಲಕ್ಷ್ಮಿ ಅವರು ದೈಹಿಕ ಹಲ್ಲೆ ಮಾಡಿದ, ಕೊಲೆ ಬೆದರಿಕೆ ಹಾಕಿದ ಘಟನೆ ನಡೆದೇ ಇಲ್ಲ. ತಾವು ಸ್ನಾನದ ಕೋಣೆಯಲ್ಲಿ ಕಾಲುಜಾರಿ ಬಿದ್ದಿದ್ದರಿಂದ ತಲೆಗೆ ಮತ್ತು ಮೈಗೆ ಪೆಟ್ಟಾಗಿದೆ ಎಂದು ತಿಳಿಸಿದ್ದಾರೆ.

ದರ್ಶನ್ ಅವರ ವಕೀಲರ ಪ್ರಕಾರ, ಪೊಲೀಸರ ಮುಂದೆ ನೀಡಿದ ಹೇಳಿಕೆಯನ್ನು ಸಾಕ್ಷಿಯೆಂದು ಪರಿಗಣಿಸಲು ಆಗುವುದಿಲ್ಲ. ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯನ್ನು ಮಾತ್ರ ಸತ್ಯವೆಂದು ಪರಿಗಣಿಸಲಾಗುವುದು. ತಮ್ಮಿಬ್ಬರ ನಡುವೆ ಏನೇ ಕಲಹಗಳಿದ್ದರೂ ಪರಸ್ಪರ ಬಗೆಹರಿಸಿಕೊಂಡು ಜೀವನ ಸಾಗಿಸುವುದಾಗಿ ಅವರು ಹೇಳಿದ್ದಾರೆ. ಪೊಲೀಸರ ಮುಂದೆ ಹೇಳಿಕೆ ನೀಡುವಾಗ ತಾವು ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದಾಗಿಯೂ ವಿಜಯಲಕ್ಷ್ಮಿ ತಿಳಿಸಿದ್ದಾರೆ.


Monday 5 September 2011

MANGALOREANS FRIEND DELLHI BELLHI IN SAUDI ARABIA

ಕುರ್ ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?


ಕುರ್‌ಆನ್‌ನ ಸೂಕ್ತಿಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್‌ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಿಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ.

2ನೇ ಅಧ್ಯಾಯದ 190-191ನೇ ಸೂಕ್ತಿಗಳು ಹೀಗಿವೆ:

ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ನೀವು ಹದ್ದುಮೀರದಿರಿ. ಖಂಡಿತವಾಗಿಯೂ ಹದ್ದುಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ. ನೀವು ಅವರನ್ನು ಕಂಡಲ್ಲಿ ವಧಿಸಿರಿ ಮತ್ತು ಅವರು ನಿಮ್ಮನ್ನು ಎಲ್ಲಿಂದ ಹೊರಗಟ್ಟಿದರೋ ಅಲ್ಲಿಂದ ನೀವೂ ಅವರನ್ನು ಹೊರಗಟ್ಟಿರಿ. ಕ್ಷೋಭೆಯು ಕೊಲೆಗಿಂತಲೂ ಭೀಕರವಾಗಿದೆ. ಆದರೆ ಮಸ್ಜಿದುಲ್ ಹರಾಮ್‌ನ ಬಳಿಯಲ್ಲಿ ಅವರು ನಿಮ್ಮೊಂದಿಗೆ ಹೋರಾಡುವವರೆಗೆ ನೀವು ಅವರೊಂದಿಗೆ ಹೋರಾಡದಿರಿ. ಅವರೇನಾದರೂ ನಿಮ್ಮ ಮೇಲೆ ದಾಳಿ ಮಾಡಿದರೆ ಅವರನ್ನು ಕೊಂದು ಬಿಡಿರಿ. ಸತ್ಯನಿಷೇಧಿಗಳಿಗೆ ಹೀಗೆ ಪ್ರತಿಫಲವನ್ನು ನೀಡಲಾಗುವುದು. (2/190-191)

ಮೊದಲ ವಚನಗಳಲ್ಲಿ ಶತ್ರುಗಳು ಮುಸ್ಲಿಮರ ವಿರುದ್ಧ ದಾಳಿ ನಡೆಸುವಾಗ ಮುಸ್ಲಿಮರು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದ ಬಳಿಕ ಒಂದು ವೇಳೆ ಶತ್ರುಗಳು ಶಾಂತಿಪ್ರಸ್ತಾಪವನ್ನು ಮುಂದಿಟ್ಟರೆ ಅದನ್ನು ಸ್ವೀಕರಿಸಬೇಕೆಂದು ಆ ಬಳಿಕದ ಸೂಕ್ತಿಯಲ್ಲಿ ಕುರ್‌ಆನ್ ಕಲಿಸುತ್ತದೆ:

ಅವರೇನಾದರೂ (ಯುದ್ಧವನ್ನು) ಸ್ಥಗಿತಗೊಳಿಸಿದರೆ ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. ಗಲಭೆಯು ಇಲ್ಲದಾಗುವವರೆಗೆ ಮತ್ತು ಧರ್ಮವು ಅಲ್ಲಾಹನಿಗಾಗುವವರೆಗೆ ಅವರೊಂದಿಗೆ ಹೋರಾಡಿರಿ. ಅವರೇನಾದರೂ ಸ್ಥಗಿತಗೊಳಿಸಿದರೆ ಆಗ ಅಕ್ರಮಿಗಳ ಹೊರತು ಯಾರ ಮೇಲೂ ಹಗೆತನವನ್ನು ಇಟ್ಟುಕೊಳ್ಳದಿರಿ. (2/192-193)

ಅದೇ ರೀತಿ 9ನೇ ಅಧ್ಯಾಯದ 5ನೇ ಸೂಕ್ತಿಯಲ್ಲಿ ಹೀಗಿದೆ:

ಪವಿತ್ರ ತಿಂಗಳುಗಳು ಕಳೆದರೆ ನೀವು ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ, ಅವರನ್ನು ಸೆರೆಹಿಡಿಯಿರಿ, ಮುತ್ತಿಗೆ ಹಾಕಿರಿ ಮತ್ತು ಅವರಿಗಾಗಿ ಹೊಂಚುಹಾಕಿ ಕುಳಿತುಕೊಳ್ಳಿರಿ. ಅವರೇನಾದರೂ ಪಶ್ಚಾತ್ತಾಪ ಪಟ್ಟು ನಮಾಝನ್ನು ಸಂಸ್ಥಾಪಿಸಿ ಝಕಾತ್ ನೀಡುವುದಾದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ. ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. (9/5)

ವಿಮರ್ಶಕರು ಆರಿಸಿಕೊಳ್ಳುವ ವಧಾ ಸೂಕ್ತಿಗಳು ಕುರ್‌ಆನಿನಲ್ಲಿ ಇರುವುದು ಈ ಮೇಲೆ ಹೇಳಿದ ರೀತಿಯಾಗಿದೆ. ಈಗ ಈ ಸೂಕ್ತಿಗಳನ್ನು ಸ್ವಲ್ಪ ವಿವರವಾಗಿ ತಿಳಿಯೋಣ.

2ನೇ ಅಧ್ಯಾಯದಲ್ಲಿ ಪ್ರಸ್ತಾಪಿಸಲಾದ ಸೂಕ್ತಿಯು ನಿರಂತರ ದೌರ್ಜನ್ಯಕ್ಕೀಡಾದ ಬಳಿಕ ಮುಸ್ಲಿಮರಿಗೆ ದೊರಕಿದ ಮೊತ್ತಮೊದಲ ಯುದ್ಧಾನುಮತಿಯಾಗಿದ್ದರೆ 9ನೇ ಅಧ್ಯಾಯದಲ್ಲಿರುವ ಸೂಕ್ತಿಗಳು ಅಂದು ಮುಸ್ಲಿಮರು ಮತ್ತು ಬಹುದೇವಾರಾಧಕರ ಮಧ್ಯೆ ಜಾರಿಯಲ್ಲಿದ್ದ ಒಂದು ಕರಾರಿನ ಕುರಿತು ತಿಳಿಸಿಕೊಡುತ್ತದೆ. ಬಹುದೇವಾರಾಧಕರು ಕರಾರಿನ ಶರತ್ತುಗಳನ್ನು ಉಲ್ಲಂಘಿಸಿದಾಗ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳಲು ಅವರಿಗೆ ಕಾಲಾವಕಾಶವನ್ನು ನೀಡಲಾಯಿತು. ಅನ್ಯಥಾಃ ಅವರ ಮೇಲೆ ಯುದ್ಧ ಘೋಷಿಸಲಾಗುವುದೆಂದು ಸಾರಲಾಯಿತು.

ಇವೆರಡು ಸೂಕ್ತಿಗಳೂ ಅವತೀರ್ಣಗೊಂಡಿದ್ದು ಯುದ್ಧದ ಹಿನ್ನೆಲೆಯಲ್ಲಾಗಿತ್ತು. ಒಂದು ದೇಶವು ಯುದ್ಧನಿರತವಾಗಿರುವ ಸಂದರ್ಭದಲ್ಲಿ ಆ ದೇಶವು ಅಥವಾ ಅದರ ಸೇನಾಧಿಪತಿಯು ತನ್ನ ಸೈನಿಕರನ್ನು ಹುರಿದುಂಬಿಸುವುದಕ್ಕಾಗಿ ನೀವು ಶತ್ರುಗಳನ್ನು ಕಂಡಲ್ಲಿ ಕೊಲ್ಲಿರಿ ಎಂದು ಆದೇಶಿಸುವುದನ್ನು ಭಯೋತ್ಪಾದನೆಗೆ ಪ್ರೇರಣೆಯೆಂದು ಕರೆಯಲಾದೀತೇ? ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಯುದ್ಧ ನಡೆಯುವಾಗ ನಮ್ಮ ಸೇನಾಧಿಪತಿಯು ಪಾಕಿಸ್ಥಾನಿ ಸೈನಿಕರನ್ನು ಕಂಡಲ್ಲಿ ವಧಿಸಿರಿ ಎಂದು ನಮ್ಮ ಸೈನಿಕರಿಗೆ ಆದೇಶಿಸಿದರೆ ಅದು ಪಾಕಿಸ್ಥಾನಿಗಳ ಮೇಲೆ ಭಯೋತ್ಪಾದನೆ ನಡೆಸುವುದಕ್ಕೆ ಪುರಾವೆಯಾದೀತೇ? ಅದೇ ರೀತಿ ಅಮೆರಿಕ ಮತ್ತು ವಿಯಟ್ನಾಂ ಮಧ್ಯೆ ಯುದ್ಧ ನಡೆದಿತ್ತು. ಆ ಸಮಯದಲ್ಲಿ ಅಮೆರಿಕನ್ ಸೇನಾ ಮುಖ್ಯಸ್ಥರು ವಿಯಟ್ನಾಮಿಗಳನ್ನು ಕಂಡಲ್ಲಿ ಕೊಲ್ಲಿರಿ ಎಂದಿದ್ದನ್ನು ಇಂದು ಯಾರಾದರೂ ಯುದ್ಧದ ಹಿನ್ನೆಲೆಯನ್ನು ಮರೆಮಾಚಿಕೊಂಡು ಹೇಳಿದಲ್ಲಿ ಖಂಡಿತವಾಗಿಯೂ ಅದು ಅಮೆರಿಕನ್ ಸೇನಾ ಮುಖ್ಯಸ್ಥರನ್ನು ಒಬ್ಬ ಭಯೋತ್ಪಾದಕ ಅಥವಾ ಕಟುಕನಾಗಿ ಬಿಂಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಕುರ್‌ಆನ್‌ನಲ್ಲಿರುವ ವಧಾ ಸೂಕ್ತಿಗಳನ್ನು ಇಸ್ಲಾಮಿನ ವಿರುದ್ಧವಾಗಿ ಪ್ರಚಾರ ಮಾಡಿದವರಲ್ಲಿ ಅರುಣ್ ಶೌರಿಯೂ ಒಬ್ಬರು. ತಮ್ಮ ದಿ ವರ್ಲ್ಡ್ ಆಫ್ ಫತ್ವಾಸ್ (The World of Fatwas) ಎಂಬ ಗ್ರಂಥದಲ್ಲಿ ಅವರು ಕುರ್‌ಆನಿನ 9ನೇ ಅಧ್ಯಾಯದ ಇದೇ 5ನೇ ಸೂಕ್ತಿಯನ್ನೇ ಆರಿಸಿರುವರು.

ನೀವು ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ (ಕುರ್ ಆನ್ 9/5)

ತಮಾಷೆಯೆಂದರೆ ಅವರು 5ನೇ ಸೂಕ್ತಿಯ ಬಳಿಕ 6ನೇ ಸೂಕ್ತಿಯನ್ನು  ಉಲ್ಲೇಖಿಸದೇ ನೇರವಾಗಿ 7ನೇ ಸೂಕ್ತಿಗೆ ಜಿಗಿದಿರುವರು. ಕಾರಣವೇನೆಂದರೆ 6ನೇ ಸೂಕ್ತಿಯಲ್ಲಿ ವಿಮರ್ಶಕರ ದುರ್ವಾದಗಳಿಗೆ ಸಮರ್ಪಕವಾದ ಉತ್ತರವಿದೆ. ಆ ಸೂಕ್ತಿಯಲ್ಲಿ ಅಲ್ಲಾಹು ತನ್ನ ಪ್ರವಾದಿಯೊಂದಿಗೆ ಹೀಗೆ ಆದೇಶಿಸುತ್ತಾನೆ.

ಬಹುದೇವಾರಾಧಕರ (ಶತ್ರುಗಳ) ಪೈಕಿ ಯಾರಾದರೂ ನಿನ್ನೊಂದಿಗೆ ಆಶ್ರಯವನ್ನು ಬೇಡಿದರೆ ಅವನಿಗೆ ಆಶ್ರಯ ನೀಡು. ಅವನು ಅಲ್ಲಾಹನ ವಚನವನ್ನು ಕೇಳುವಂತಾಗಲಿ. ನಂತರ ಅವನನ್ನು ಅವನಿಗೆ ಅತ್ಯಂತ ಸುರಕ್ಷಿತವಾಗಿರುವ ಸ್ಥಳಕ್ಕೆ ತಲುಪಿಸು. ಅದು ಯಾಕೆಂದರೆ ಅವರು ತಿಳುವಳಿಕೆಯಿಲ್ಲದ ಜನತೆಯಾಗಿರುವುದರಿಂದಾಗಿದೆ. (9/6)

ನಾವು ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದಲ್ಲಿ ಅತ್ಯಂತ ಸೌಮ್ಯ ಹಾಗೂ ಶಾಂತಿಪ್ರಿಯ ಸೇನಾಧಿಕಾರಿ ಕೂಡಾ ಹೆಚ್ಚೆಂದರೆ ಶರಣಾದ ಸೈನಿಕನನ್ನು ಸ್ವತಂತ್ರವಾಗಿ ಓಡಿಹೋಗಲಷ್ಟೇ ಬಿಡುವನು. ಆದರೆ ಅವನನ್ನು ಸುರಕ್ಷಿತ ತಾಣಕ್ಕೆ ತಲಪಿಸಿರಿ ಎಂಬ ಆಜ್ಞೆಯನ್ನು ಎಂದೂ ನೀಡಲಾರ. ಅವನೆಷ್ಟು ಶಾಂತಿಪ್ರಿಯನಾಗಿದ್ದರೂ ಸರಿಯೇ. ಕುರ್‌ಆನ್ ಜಗತ್ತಿಗೆ ಶಾಂತಿ, ಕರುಣೆಯ ಪಾಠವನ್ನು ಕಲಿಸಲು ಅವತೀರ್ಣಗೊಂಡ ಗ್ರಂಥವಾಗಿದೆ. ಆದ್ದರಿಂದಲೇ ಅದು ಶತ್ರುವನ್ನು ಸುರಕ್ಷಿತ ಸ್ಥಳಕ್ಕೆ ತಲಪಿಸರಿ ಎಂದು ಆದೇಶಿಸುತ್ತದೆ. ಕುರ್‌ಆನ್ ವಚನಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸುವಾಗ ವಿಮರ್ಶಕರು ಈ ವಚನದ ಹತ್ತಿರ ಕೂಡಾ ಸುಳಿಯುವುದಿಲ್ಲವೆಂಬುದು ಆಶ್ಚರ್ಯಕರವಾಗಿದೆ.

ಇನ್ನು ಇಂದು ಮುಸ್ಲಿಮರ ಪೈಕಿ ಭಯೋತ್ಪಾದನಾ ಕೃತ್ಯಗಳಲ್ಲಿ ನಿರತರಾದವರಿಗೆ ಮುಸ್ಲಿಮೇತರರನ್ನು ವಧಿಸಲು ಕುರ್‌ಆನ್ ನಲ್ಲಿರುವ ಇಂತಹ ಸೂಕ್ತಿಗಳೇ ಪ್ರೇರಣೆ ಎಂಬ ಆರೋಪದ ಕುರಿತು ಹೇಳುವುದಾದರೆ ಇದೊಂದು ಶುದ್ಧ ಸುಳ್ಳು ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿಯಾಗಿದೆ. ಜಗತ್ತಿನಲ್ಲಿರುವ ಭಯೋತ್ಪಾದಕರೆಲ್ಲರೂ ಮುಸ್ಲಿಮರು ಎಂಬಂತೆ ಬಿಂಬಿಸಲು ಅವರು ನಡೆಸುತ್ತಿರುವ ವಿಫಲ ಯತ್ನವಾಗಿದೆ. ಇದಕ್ಕಾಗಿ ಅವರು ಒಂದು ವಿಶೇಷ ಘೋಷಣೆಯನ್ನೇ ಸೃಷ್ಟಿಸಿಕೊಂಡಿರುವರು. ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು. ಇದೊಂದು ಶುದ್ಧ ವಂಚನೆ. ವಾಸ್ತವಿಕವಾಗಿ ಇಂದು ಎಷ್ಟು ಸ್ಪೋಟ ಪ್ರಕರಣಗಳನ್ನು ನಾವು ಪತ್ರಿಕೆಗಳಲ್ಲಿ ಮುಸ್ಲಿಮ್ ಭಯೋತ್ಪಾದನೆಯೆಂಬ ಶೀರ್ಷಿಕೆಯಲ್ಲಿ ಕಾಣುತ್ತಿರುವೆವೋ ಅವಕ್ಕಿಂತ ಎಷ್ಟೋ ಅಧಿಕ ಸಂಖ್ಯೆಯ ಸ್ಪೋಟ ಪ್ರಕರಣಗಳೂ, ಸಾವು ನೋವುಗಳೂ ಜಗತ್ತಿನಾದ್ಯಂತ ಸಂಭವಿಸುತ್ತಲೇ ಇವೆ. ವ್ಯತ್ಯಾಸವೆಂದರೆ ಇವುಗಳನ್ನು ವೈಭವೀಕರಿಸಲಾಗುತ್ತಿಲ್ಲ. ಭಯೋತ್ಪಾದನೆ, ಆತ್ಮಾಹುತಿ ಬಾಂಬ್ ದಾಳಿ ಎಂಬ ಭೂತಗಳನ್ನು ಹುಟ್ಟು ಹಾಕಿದವರು ಮುಸ್ಲಿಮರು ಎಂಬ ತಪ್ಪುಕಲ್ಪನೆಯು ಪ್ರಚಲಿತದಲ್ಲಿದೆ. ವಾಸ್ತವಿಕವಾಗಿ ಮುಸ್ಲಿಮೇತರ  ಭಯೋತ್ಪಾದಕರು ಜಗತ್ತಿನಾದ್ಯಂತ ನಡೆಸಿದ ನರಮೇಧಗಳನ್ನು ಒಟ್ಟುಗೂಡಿಸಿದರೆ ಮುಸ್ಲಿಮ್ ಭಯೋತ್ಪಾದಕರು ಮಾಡಿದ್ದು ಏನೇನೂ ಇಲ್ಲ ಎಂದು ತಿಳಿಯಬಹುದಾಗಿದೆ. ಆದರೆ ಇತ್ತೀಚೆಗೆ ಭಯೋತ್ಪಾದನಾ ಕೃತ್ಯಗಳಲ್ಲಿ ಮುಸ್ಲಿಮೇತರರ ಹೆಸರುಗಳು ಬಹಿರಂಗಗೊಳ್ಳ ತೊಡಗಿದಾಗ ಅದೇ ಮಾಧ್ಯಮಗಳು ಭಯೋತ್ಪಾದಕರಿಗೆ ಧರ್ಮವಿಲ್ಲ ಎಂಬ ಹೊಸ ಘೋಷಣೆಯನ್ನು ಸೃಷ್ಟಿಸಿದ್ದಾರೆ!

ಪ್ರಭಾಕರನ್, ಹಿಟ್ಲರ್, ಮುಸ್ಸಲೋನಿ, ಜಾರ್ಜ್ ಬುಶ್ ಮುಂತಾದ ಜಗದ್ವಿಖ್ಯಾತ ಭಯೋತ್ಪಾದಕರಾರೂ ಮುಸ್ಲಿಮರಲ್ಲ. ಹಾಗಾದರೆ ಇವರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸಿದ್ದಾದರೂ ಏನು? ಅವರ ಧರ್ಮಗ್ರಂಥಗಳೇ? ಇವರನ್ನೇಕೆ ಧರ್ಮದ ಆಧಾರದಲ್ಲಿ ಭಯೋತ್ಪಾದಕರೆಂದು ಕರೆಯಲಾಗುವುದಿಲ್ಲ?

ಇನ್ನು ಒಂದು ಧರ್ಮದ ಗ್ರಂಥದಲ್ಲಿ ಯುದ್ಧದ ಆಜ್ಞೆಗಳು ಇವೆ ಎಂಬ ಕಾರಣಕ್ಕಾಗಿ ಒಂದು ಧರ್ಮವನ್ನು ಭಯೋತ್ಪಾದಕ ಸ್ಥಾನದಲ್ಲಿ ನಿಲ್ಲಿಸುವುದಾದರೆ ಹಿಂದೂ ಗ್ರಂಥಗಳಲ್ಲಿರುವ ಈ ಕೆಳಗಿನ ಯುದ್ಧಾಜ್ಞೆಗಳು ಹಿಂದೂಧರ್ಮವು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತದೆಂದು ಹೇಳಬಹುದೇ?

ಮಹಾಭಾರತ ಯುದ್ಧದ ಸಂದರ್ಭದಲ್ಲಿ ತನ್ನ ದಾಯಾದಿಗಳ ವಿರುದ್ಧ ಹೋರಾಡಲು ಅರ್ಜುನನು ಹಿಂಜರಿದಾಗ ಅವನಿಗೆ ಶ್ರೀಕೃಷ್ಣನು ನೀಡುವ ಆದೇಶವನ್ನು ಭಗವದ್ಗೀತೆ ಯಲ್ಲಿ (2/37) ಈ ರೀತಿ ಉದ್ಧರಿಸಲಾಗಿದೆ:

हतॊ वा प्राप्स्यसि स्वर्गं
जित्वा वा भॊक्ष्यसॆ महीम् ।
तस्मादुत्तिष्ठ कौन्तॆय
युद्धाय कृतनिश्चयः ॥
सुखदुःखॆ समॆ कृत्वा
लाभालाभौ जयजयौ ।
ततॊ युद्धाय युज्यस्व
नैवं पापमवाप्स्यसि ॥ (ಭಗವದ್ಗೀತೆ ಅಧ್ಯಾಯ 2 ಶ್ಲೋಕ 37-38)

ಒಂದೋ ನೀನು ಯುದ್ಧದಲ್ಲಿ ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಪಡೆಯುವೆ ಅಥವಾ ಯುದ್ಧದಲ್ಲಿ ಗೆದ್ದರೆ ಪೃಥ್ವಿಯ ರಾಜ್ಯವನ್ನು ಭೋಗಿಸುವೆ ಈ ಕಾರಣದಿಂದ ಹೇ ಅರ್ಜುನನೇ! ನೀನು ಯುದ್ಧಕ್ಕಾಗಿ ನಿಶ್ಚಯಮಾಡಿ ಎದ್ದು ನಿಲ್ಲು. ಜಯ-ಪರಾಜಯ, ಲಾಭ-ಹಾನಿ ಮತ್ತು ಸುಖ ದುಃಖಗಳನ್ನು ಸಮಾನವಾಗಿ ತಿಳಿದುಕೊಂಡು, ಅನಂತರ ಯುದ್ಧಕ್ಕಾಗಿ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡುವುದರಿಂದ ನೀನು ಪಾಪವನ್ನು ಹೊಂದುವುದಿಲ್ಲ.

ಜಯದಯಾಲ ಗೋಯಂದಕಾರವರು ತಮ್ಮ ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ (ಪುಟ 68) ಈ ಮೇಲಿನ ವಚನವನ್ನು ಹೀಗೆ ವಿವರಿಸಿದ್ದಾರೆ:

ಆರನೇ ಶ್ಲೋಕದಲ್ಲಿ ಅರ್ಜುನನು – ನನಗಾಗಿ ಯುದ್ಧ ಮಾಡುವುದು ಅಥವಾ ಮಾಡದಿರುವುದು ಯಾವುದು ಶ್ರೇಷ್ಠವಾಗಿದೆ ಹಾಗೂ ಯುದ್ಧದಲ್ಲಿ ವಿಜಯವು ನಮಗಾಗುವುದೋ ಅಥವಾ ನಮ್ಮ ಶತ್ರುಗಳಿಗೋ? ಇದರ ನಿರ್ಣಯವನ್ನು ನಾನು ಮಾಡಲಾರೆ; ಎಂಬ ಮಾತನ್ನು ಹೇಳಿದ್ದನು. ಇದಕ್ಕೆ ಉತ್ತರವನ್ನು ಕೊಡುತ್ತಾ ಯುದ್ಧ ಮಾಡುತ್ತಾ ಮಾಡುತ್ತಾ ಸಾಯುವುದರಲ್ಲಿ ಅಥವಾ ವಿಜಯವನ್ನು ಪಡೆಯುವುದರಲ್ಲಿ ಈ ಎರಡರಲ್ಲೂ ಲಾಭವನ್ನು ತೋರಿಸಿಕೊಟ್ಟು ಅರ್ಜುನನಿಗೆ ಯುದ್ಧದ ಶ್ರೇಷ್ಠತೆಯನ್ನು ಭಗವಂತನು ಸಿದ್ಧಪಡಿಸುತ್ತಾನೆ. ಒಂದು ವೇಳೆ ಯುದ್ಧದಲ್ಲಿ ನಿನ್ನ ಶತ್ರುಗಳಿಗೆ ಜಯವುಂಟಾಗಿ ನೀನು ಕೊಲ್ಲಲ್ಪಟ್ಟರೂ ಸಹ ಒಳ್ಳೆಯ ಮಾತೇ ಆಗುತ್ತದೆ; ಏಕೆಂದರೆ ಯುದ್ಧದಲ್ಲಿ ಪ್ರಾಣತ್ಯಾಗ ಮಾಡುವುದರಿಂದ ನಿನಗೆ ಸ್ವರ್ಗ ದೊರೆಯುವುದು ಮತ್ತು ಒಂದು ವೇಳೆ ವಿಜಯಿಯಾದರೆ ಭೂಮಂಡಲದ ರಾಜ್ಯ ಸುಖವನ್ನು ಅನುಭವಿಸುವೆ; ಆದುದರಿಂದ ಎರಡೂ ದೃಷ್ಟಿಗಳಿಂದ ನಿನಗಾದರೋ ಯುದ್ಧ ಮಾಡುವುದೇ ಎಲ್ಲ ಪ್ರಕಾರದಿಂದಲೂ ಶ್ರೇಷ್ಠವಾಗಿದೆ. ಅದಕ್ಕಾಗಿ ನೀನು ಯುದ್ಧಕ್ಕೆ ಕಟಿಬದ್ಧನಾಗಿ ಸಿದ್ಧನಾಗು ಎಂಬುದೇ ಅಭಿಪ್ರಾಯವಾಗಿದೆ. (ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ ಪುಟ 68)

ಇಲ್ಲಿರುವ ಗಮನಾರ್ಹವಾದ ಸಂಗತಿಯೇನೆಂದರೆ ಶ್ರೀಕೃಷ್ಣನು ಅರ್ಜುನನೊಂದಿಗೆ ಹೋರಾಡಲು ಹುರಿದುಂಬಿಸುವುದು ಅವನ ಸ್ವಂತ ದಾಯಾದಿಗಳೊಂದಿಗಾಗಿದೆ. ಅರ್ಥಾತ್ ಅವನ ಪಿತೃಸಹೋದರ ಪುತ್ರರೊಂದಿಗಾಗಿದೆ. ಒಂದೋ ನೀನು ಅವರನ್ನು ನಾಶ ಮಾಡಬೇಕು ಅಥವಾ ನೀನು ನಾಶವಾಗಬೇಕು. ಆದರೆ ಯುದ್ಧದಿಂದ ನೀನು ಹಿಂಜರಿಯಬಾರದು. ಎರಡರಲ್ಲಿಯೂ ನಿನಗೇ ಒಳಿತೇ ಇದೆ ಎಂದು ಬೋಧಿಸುತ್ತಾನೆ.

ಈ ವಚನದ ಆಧಾರದಲ್ಲಿ ಭಗವದ್ಗೀತೆಯು ಸ್ವಂತ ದಾಯಾದಿಗಳನ್ನೇ ಕೊಲ್ಲಲು ಆದೇಶಿಸುತ್ತದೆ ಎಂದು ಹೇಳಲಾದೀತೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಏಕೆಂದರೆ ಈ ವಚನದ ಹಿನ್ನೆಲೆ ಯುದ್ಧಭೂಮಿಯಾಗಿದೆ.

ಋಗ್ವೇದದ ಒಂದನೇ ಮಂಡಲ, 132ನೇ ಸೂಕ್ತದ 2ರಿಂದ 6ರವರೆಗಿನ ಋಕ್ಕುಗಳು ಯುದ್ಧ ಮಾಡುವುದನ್ನು ಹುರಿದುಂಬಿಸುತ್ತವೆ. ಉದಾಹರಣೆಗೆ ಅದರ ನಾಲ್ಕನೇ ಋಕ್ಕಿನ ಒಂದು ಭಾಗವನ್ನು ನೋಡಿರಿ:

ಓ ಇಂದ್ರದೇವ, ಯಜ್ಞಾದಿ ಶ್ರೇಷ್ಠ ಕರ್ಮಗಳನ್ನು ಮಾಡುವವರ ಹಿತಕ್ಕೋಸ್ಕರ ನೀನು ಯಜ್ಞವಿರುದ್ಧರನ್ನು ಮತ್ತು ಕ್ರೋಧಯುಕ್ತ ಪಾಪಿಗಳನ್ನು ನಾಶಗೊಳಿಸು.

ಋಗ್ವೇದದ ಈ ವಚನವು ಯಜ್ಞವಿರೋಧಿಗಳನ್ನು ಸಾರ್ವತ್ರಿಕವಾಗಿ ಕೊಲ್ಲಲು ಆದೇಶಿಸುತ್ತದೆ ಎಂದು ಇದರ ಆಧಾರದಲ್ಲಿ ಹೇಳಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ!

ಇದೇ ರೀತಿ ಕುರ್‌ಆನಿನಲ್ಲಿರುವ ವಚನಗಳು ಕೂಡಾ ಯುದ್ಧದ ಹಿನ್ನೆಲೆಯಲ್ಲಿ ಅವತೀರ್ಣಗೊಂಡ ವಚನಗಳಾಗಿವೆ. ಮುಸ್ಲಿಮೇತರರನ್ನು ಸದಾ ಕೊಲ್ಲುತ್ತಿರಬೇಕು ಎಂಬ ಆಶಯವನ್ನು ಈ ವಚನಗಳು ಸಾರುವುದಿಲ್ಲ.

ಇನ್ನು ಮುಸ್ಲಿಮ್ ಭಯೋತ್ಪಾದಕರು ಕುರ್‌ಆನಿನ ಆಧಾರದಿಂದಲೇ ಮುಸ್ಲಿಮೇತರರನ್ನು ಕೊಲ್ಲುತ್ತಿರುವರು ಎಂದು ವಾದಿಸುತ್ತಿರುವವರು ಪ್ರಾರ್ಥನಾ ನಿರತ ಮುಸ್ಲಿಮರ ಮೇಲೆ ಬಾಂಬ್ ಎಸೆದು ಕೊಲ್ಲಲು ಅದೇ ಭಯೋತ್ಪಾದಕರಿಗೆ ಯಾವ ಸೂಕ್ತಿಗಳು ಪ್ರೇರಣೆ ನೀಡಿದವು ಎಂಬುದನ್ನು ಕೂಡಾ ಸ್ಪಷ್ಟಪಡಿಸಿಕೊಡಬೇಕು.

ಸಂಕ್ಷಿಪ್ತವಾಗಿ ಹೇಳುವುದಾದರೆ ಕುರ್‌ಆನ್‌ನಲ್ಲಿ ವಧಾಸೂಕ್ತಿಗಳನ್ನು ವ್ಯಾಖ್ಯಾನಿಸುವಾಗ ಅವುಗಳ ಅವತೀರ್ಣ ಹಿನ್ನೆಲೆಗಳನ್ನು ಅರಿತುಕೊಂಡಿರುವುದು ಕಡ್ಡಾಯವಾಗಿದೆ. ಯಾಕೆಂದರೆ ಕುರ್‌ಆನ್‌ನ ಎಲ್ಲ ವಚನಗಳೂ ಎಲ್ಲ ಸಂದರ್ಭಗಳಲ್ಲೂ ಒಂದೇ ರೀತಿಯಾಗಿ ಅನ್ವಯಿಸುತ್ತದೆ ಎಂದು ಜಗತ್ತಿನ ಒಬ್ಬನೇ ಒಬ್ಬ ಕುರ್‌ಆನ್ ವ್ಯಾಖ್ಯಾನಕಾರನು ಹೇಳಿಲ್ಲ. ಇನ್ನು ಮುಸ್ಲಿಮರ ಪೈಕಿ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಈ ಸೂಕ್ತಿಗಳನ್ನು ದುರುಪಯೋಗಪಡಿಸಿಕೊಂಡರೆ ಅದಕ್ಕೆ ಕುರ್‌ಆನ್ ಹೊಣೆಯಾಗಲಾರದು. ಇಸ್ಲಾಮಿನ ಹೆಸರಿನಲ್ಲಿ ಇಂದು ಕೆಲವರು ನಡೆಸುತ್ತಿರುವ ಭಯೋತ್ಪಾದನೆಯನ್ನು ಮುಸ್ಲಿಮ್ ವಿದ್ವಾಂಸರೆಲ್ಲರೂ ಒಕ್ಕೊರಳಿನಿಂದ ಖಂಡಿಸಿದ್ದಾರೆ.

ಮೈಸೂರ್ ನಲ್ಲಿ ಯುವರಾಜ ಈದ್ ವಿಶೇಷ









ಅಕ್ರಮ ಗಣಿಗಾರಿಕೆ : ಸಿಬಿಐ ದಾಳಿ, ಜನಾರ್ದನ ರೆಡ್ಡಿ ಬಂಧನ


ಬೆಂಗಳೂರು : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಭಾರೀ ವಿವಾದದಲ್ಲಿ ಸಿಲುಕಿರುವ ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಯವರನ್ನು ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಇಂದು ಮುಂಜಾನೆಯೇ ಅವರ ಬೆಂಗಳೂರಿನ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಇದೇ ಸಂದರ್ಭ ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಎಂಬವರನ್ನೂ ಬಂಧಿಸಲಾಗಿದೆ
ಆಂದ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರೋಸಯ್ಯ ಅವರು ಅಕ್ರಮ ಗಣಿಗಾರಿಕೆ ಕುರಿತಂತೆ ಸಿಬಿಐ ತನಿಖೆಗೆ ಆದೇಶಿಸಿದ್ದರಿಂದ ಸಿಬಿಐ ತಂಡ ಏಕಕಾಲಕ್ಕೆ ಬಳ್ಳಾರಿ ಹಾಗೂ ಬೆಂಗಳೂರು ನಿವಾಸಗಳ ಮೇಲೆ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಗಡಿನಾಶ ಗುರುತು, ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪಗಳ ಹಿನ್ನೆಲೆಯಲ್ಲಿ ಕಾಯ್ದೆ 120 ಹಾಗೂ 120 ‘ಬಿ’ ಕಾಯ್ದೆಯಡಿ ಸಿಬಿಐ ಪ್ರಕರಣ ದಾಖಲಿಸಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿಯೂ ಜನಾರ್ದನ ರೆಡ್ಡಿ ಹೆಸರು ಉಲ್ಲೇಖವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಇಸ್ಲಾಮನ್ನು ಹಬ್ಬಿಸಿದ್ದು ಖಡ್ಗವಾಗಿತ್ತೇ?


ಬಲಪ್ರಯೋಗವು ಇಲ್ಲದಿರುತ್ತಿದ್ದರೆ ಇಸ್ಲಾಮ್ ಧರ್ಮಕ್ಕೆ ಜಾಗತಿಕವಾಗಿ ಲಕ್ಷಾಂತರ ಅನುಯಾಯಿಗಳಿರುತ್ತಿರಲಿಲ್ಲ ಎಂಬುದು ಸಾಮಾನ್ಯವಾಗಿ ಮುಸ್ಲಿಮೇತರರಲ್ಲಿರುವ ಒಂದು ಸಂದೇಹವಾಗಿದೆ. ಇದೊಂದು ತಪ್ಪುಕಲ್ಪನೆಯಾಗಿದೆ. ವಾಸ್ತವಿಕವಾಗಿ ಇಸ್ಲಾಮ್ ಹಬ್ಬಿದ್ದು ಖಡ್ಗದಿಂದಾಗಿರಲಿಲ್ಲ. ಬದಲಾಗಿ ಇಸ್ಲಾಮಿನ ಸತ್ಯಸಂಧವಾದ, ವೈಚಾರಿಕವಾದ ಮತ್ತು ತಾರ್ಕಿಕವಾದ ಬೋಧನೆಗಳಾಗಿದ್ದವು ಅದನ್ನು ಜಗತ್ತಿನಾದ್ಯಂತ ಕ್ಷಿಪ್ರವಾಗಿ ಹಬ್ಬಿಸಿದ್ದೆಂದು ಈ ಕೆಳಗೆ ಬೆಟ್ಟು ಮಾಡಿದ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ.

 

1. ಇಸ್ಲಾಮ್ ಎಂದರೆ ಶಾಂತಿಯಾಗಿದೆ:

 

ಇಸ್ಲಾಮ್ ಎಂಬುದು ಸಲಾಮ್ ಎಂಬ ಪದದಿಂದ ಬಂದುದಾಗಿದೆ. ಇದರರ್ಥ ಶಾಂತಿ ಎಂದಾಗಿದೆ. ಓರ್ವನು ತನ್ನ ಇಚ್ಚೆಯನ್ನು ಅಲ್ಲಾಹನಿಗೆ ಸಮರ್ಪಿಸಿದನು ಎಂಬ ಅರ್ಥವೂ ಇದಕ್ಕಿದೆ. ಆದ್ದರಿಂದ ಓರ್ವನು ತನ್ನ ಇಚ್ಚೆಯನ್ನು ಸೃಷ್ಟಿಕರ್ತನಾದ ಅಲ್ಲಾಹನಿಗೆ ಸಮರ್ಪಿಸುವ ಮೂಲಕ ಪಡೆಯುವ ಶಾಂತಿಯಾಗಿದೆ ಇಸ್ಲಾಮ್.

 


2. ಶಾಂತಿಯನ್ನು ಸ್ಥಾಪಿಸಲು ಕೆಲವೊಮ್ಮೆ ಬಲಪ್ರಯೋಗವು ಅನಿವಾರ್ಯವಾಗಿದೆ:

 

ಈ ಜಗತ್ತಿನಲ್ಲಿ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯ ಪರವಾಗಿಲ್ಲ. ಅರ್ಥಾತ್ ತಮ್ಮ ಸ್ಥಾಪಿತ ಹಿತಾಸಕ್ತಿಗಳಿಗಾಗಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಜನರೂ ಈ ಜಗತ್ತಿನಲ್ಲಿದ್ದಾರೆ. ಅಪರಾಧಿಗಳ ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಬಲಪ್ರಯೋಗಿಸಿ ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ನಾವು ಪೊಲೀಸ್ ಬಲವನ್ನು ಹೊಂದಿರುವುದು ಇದರಿಂದಾಗಿದೆ. ಇಸ್ಲಾಮ್ ಶಾಂತಿಯನ್ನು ಉತ್ತೇಜಿಸುತ್ತದೆ. ಅದೇ ಸಮಯ, ಎಲ್ಲಿ ದಬ್ಬಾಳಿಕೆಯಿದೆಯೋ ಅಲ್ಲಿ ಹೋರಾಟ ನಡೆಸುವುದನ್ನು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ದಬ್ಬಾಳಿಕೆಯ ವಿರುದ್ಧವಿರುವ ಈ ಹೋರಾಟಕ್ಕೆ ಕೆಲವೊಮ್ಮೆ ಬಲಪ್ರಯೋಗವು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಇಸ್ಲಾಮಿನಲ್ಲಿ ಬಲಪ್ರಯೋಗ ನಡೆಸಬೇಕಾದುದು ಕೇವಲ ಶಾಂತಿಯನ್ನು ಸ್ಥಾಪಿಸುವುದಕ್ಕೆ ಮಾತ್ರವಾಗಿದೆ.

 

3. ಇತಿಹಾಸ ತಜ್ಞರಾದ De Lacy O’Leary ರವರ ಅಭಿಪ್ರಾಯ:

 

ಇಸ್ಲಾಮ್ ಹಬ್ಬಿದ್ದು ಖಡ್ಗದಿಂದಾಗಿತ್ತು ಎಂಬ ತಪ್ಪುಕಲ್ಪನೆಗೆ ಅತ್ಯಂತ ಸ್ಪಷ್ಟವಾದ ಉತ್ತರವಾಗಿ De Lacy O’Leary ತನ್ನ Islam at the cross road ಎಂಬ ಗ್ರಂಥದಲ್ಲಿ (ಪುಟ 8) ಹೀಗೆಂದಿದ್ದಾರೆ:

 

History makes it clear however, that the legend of fanatical Muslims sweeping through the world and forcing Islam at the point of the sword upon conquered races is one of the most fantastically absurd myth that historians have ever repeated.

 

ಮತಾಂಧ ಮುಸ್ಲಿಮರು ಜಗತ್ತಿನಾದ್ಯಂತ ಆಕ್ರಮಣಗೈದರು ಮತ್ತು ಖಡ್ಗದ ಮೊನೆಯಿಂದ ಬಲಪ್ರಯೋಗ ಮಾಡಿ ಜನಾಂಗಗಳನ್ನು ಜಯಿಸಿದರು ಎಂಬ ದಂತಕಥೆಯು ಇತಿಹಾಸಕಾರರು ಸದಾ ಪುನರಾವರ್ತಿಸಿದ ವಿಚಿತ್ರವಾದ ಹಾಸ್ಯಾಸ್ಪದ ಕಟ್ಟುಕಥೆಯಾಗಿತ್ತೆಂದು ಇತಿಹಾಸವು ಸ್ಪಷ್ಟಗೊಳಿಸಿದೆ.

 

4. ಮುಸ್ಲಿಮರು ಸ್ಪೈನ್ ದೇಶವನ್ನು 800 ವರ್ಷಗಳ ಕಾಲ ಆಳಿದರು:

 

ಮುಸ್ಲಿಮರು ಸ್ಪೈನ್ ದೇಶವನ್ನು 800 ವರ್ಷಗಳ ಕಾಲ ಆಳಿದರು. ಸ್ಪೈನ್‌ನಲ್ಲಿದ್ದ ಮುಸ್ಲಿಮರು ಜನರನ್ನು ಮತಾಂತರಗೊಳಿಸಲು ಎಂದೂ ಖಡ್ಗವನ್ನು ಬಳಸಿರಲಿಲ್ಲ. ನಂತರ ಕ್ರೈಸ್ತ ಶಿಲುಬೆಯೋಧರು (Christian Crusaders) ಬಂದು ಮುಸ್ಲಿಮರನ್ನು ಅಲ್ಲಿಂದ ಅಳಿಸಿ ಹಾಕಿದರು. ಅದಾನ್ (ನಮಾಝ್‌ಗಾಗಿ ಆಹ್ವಾನಿಸುವ ಕರೆ)ಯನ್ನು ಬಹಿರಂಗವಾಗಿ ನೀಡಲು ಅಲ್ಲಿ ಒಬ್ಬನೇ ಒಬ್ಬ ಮುಸ್ಲಿಮನೂ ಇರಲಿಲ್ಲ.

 

5. 14 ಮಿಲಿಯ ಅರಬರು ಅನುವಂಶಿಕ ಕ್ರೈಸ್ತರಾಗಿದ್ದಾರೆ:

 

1400 ವರ್ಷಗಳ ಕಾಲ ಮುಸ್ಲಿಮರು ಅರೇಬಿಯಾದ ಪ್ರಭುಗಳಾಗಿದ್ದರು. ಕೆಲವು ವರ್ಷಗಳ ಕಾಲ ಬ್ರಿಟಿಷರು ಆಳಿದರು ಮತ್ತು ಕೆಲವು ವರ್ಷಗಳ ಕಾಲ ಫ್ರೆಂಚರು ಆಳಿದರು. ಎಲ್ಲರಿಗಿಂತಲೂ ಹೆಚ್ಚಾಗಿ, ಮುಸ್ಲಿಮರು 1400 ವರ್ಷಗಳ ಕಾಲ ಆಳಿದರು. ಆದರೆ ಇಂದೂ ಕೂಡ ಅಲ್ಲಿ 14 ಮಿಲಿಯ ಅನುವಂಶಿಕ ಕ್ರೈಸ್ತರಿದ್ದಾರೆ. ಅರ್ಥಾತ್ ತಲೆಮಾರುಗಳಿಂದ ನೆಲೆಸಿರುವ ಕ್ರೈಸ್ತರು. ಒಂದು ವೇಳೆ ಮುಸ್ಲಿಮರು ಖಡ್ಗವನ್ನು ಬಳಸಿರುತ್ತಿದ್ದರೆ ಅಲ್ಲಿ ಒಬ್ಬನೇ ಒಬ್ಬ ಅರಬ್ ಕ್ರೈಸ್ತನೂ ಇರುತ್ತಿರಲಿಲ್ಲ.

 

6. ಭಾರತದಲ್ಲಿ 80 ಶೇಕಡಕ್ಕಿಂತಲೂ ಹೆಚ್ಚು ಮುಸ್ಲಿಮೇತರರಿದ್ದಾರೆ:

 

ಮುಸ್ಲಿಮರು ಭಾರತವನ್ನು ಸರಾಸರಿ 1000 ವರ್ಷಗಳ ಕಾಲ ಆಳಿದರು. ಅವರು ಬಯಸಿದ್ದರೆ ಭಾರತದಲ್ಲಿರುವ ಪ್ರತಿಯೊಬ್ಬ ಮುಸ್ಲಿಮೇತರನನ್ನೂ ಇಸ್ಲಾಮಿಗೆ ಮತಾಂತರಿಸುವ ಅಧಿಕಾರವು ಅವರಲ್ಲಿತ್ತು. ಇಸ್ಲಾಮ್ ಖಡ್ಗದಿಂದ ಹಬ್ಬಿದ್ದಲ್ಲವೆಂಬುದಕ್ಕೆ ಇಂದು ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಮುಸ್ಲಿಮೇತರನೂ ಸಾಕ್ಷಿಯಾಗಿದ್ದಾನೆ.

 

7. ಇಂಡೋನೇಶ್ಯಾ ಮತ್ತು ಮಲೇಶ್ಯಾ:

 

ಜಗತ್ತಿನಲ್ಲಿ ಅತಿಹೆಚ್ಚು ಮುಸ್ಲಿಮರಿರುವ ಒಂದು ದೇಶವಾಗಿದೆ ಇಂಡೋನೇಶ್ಯಾ. ಮಲೇಶ್ಯಾದಲ್ಲಿರುವ ಬಹುಸಂಖ್ಯಾತ ಜನರೂ ಮುಸ್ಲಿಮರಾಗಿದ್ದಾರೆ. ನಾನು ಕೇಳುತ್ತೇನೆ: ಯಾವ ಮುಸ್ಲಿಮ್ ಸೈನ್ಯವು ಅಲ್ಲಿನ ಜನರನ್ನು ಮತಾಂತರಗೊಳಿಸಲು ಇಂಡೋನೇಶ್ಯಾ ಮತ್ತು ಮಲೇಶ್ಯಾಗೆ ಹೋಗಿತ್ತು?

 

8. ಆಫ್ರಿಕಾದ ಪೂರ್ವ ಕರಾವಳಿ:

 

ಅದೇ ರೀತಿ, ಆಫ್ರಿಕಾದ ಪೂರ್ವ ಕರಾವಳಿಯಲ್ಲಿ ಇಸ್ಲಾಮ್ ಕ್ಷಿಪ್ರವಾಗಿ ಹಬ್ಬಿತ್ತು. ನಾನು ಪುನಃ ಕೇಳುತ್ತೇನೆ: ಇಸ್ಲಾಮ್ ಖಡ್ಗದಿಂದ ಹಬ್ಬಿದ್ದಾಗಿದ್ದರೆ ಆಫ್ರಿಕಾದ ಪೂರ್ವ ಕರಾವಳಿಗೆ ಹೋದ ಮುಸ್ಲಿಮ್ ಸೈನ್ಯ ಯಾವುದು?

 

9. ಥಾಮಸ್ ಕಾರ್ಲೈಲ್:

 

ಪ್ರಸಿದ್ಧ ಇತಿಹಾಸ ತಜ್ಞ ಥಾಮಸ್ ಕಾರ್ಲೈಲ್ ತನ್ನ Heroes and Hero worship ಎಂಬ ಗ್ರಂಥದಲ್ಲಿ ಇಸ್ಲಾಮ್ ಖಡ್ಗದ ಮೂಲಕ ಹಬ್ಬಿದ್ದಾಗಿದೆ ಎಂಬ ತಪ್ಪು ತಿಳುವಳಿಕೆಯ ಕುರಿತು ಹೇಳಿದ್ದಾರೆ:

 

The sword indeed, but where will you get your sword? Every new opinion, at its starting is precisely in a minority of one. In one man’s head alone. There it dwells as yet. One man alone of the whole world believes it, there is one man against all men. Then he takes a sword and try to propagate with that, will do little for him. You must get your sword! On the whole, a thing will propagate itself as it can.

ಖಡ್ಗವಾಗಿತ್ತು ನಿಜ, ಆದರೆ ನಿನ್ನ ಖಡ್ಗವನ್ನು ನೀನು ಎಲ್ಲಿಂದ ಪಡೆಯುವೆ? ಪ್ರತಿಯೊಂದು ಹೊಸ ಅಭಿಪ್ರಾಯವು ಅದರ ಆರಂಭ ದೆಸೆಯಲ್ಲಿ ಖಂಡಿತವಾಗಿಯೂ ಓರ್ವನಲ್ಲಿ ಮಾತ್ರವಿರುತ್ತದೆ. ಓರ್ವ ವ್ಯಕ್ತಿಯ ತಲೆಯಲ್ಲಿ ಮಾತ್ರ. ಅದು ಅಲ್ಲಿ ನೆಲೆಯೂರಿರುತ್ತದೆ. ಜಗತ್ತಿನಾದ್ಯಂತ ಕೇವಲ ಅವನು ಮಾತ್ರ ಅದನ್ನು ನಂಬುತ್ತಾನೆ. ಎಲ್ಲ ಜನರಿಗೆ ವಿರುದ್ಧವಾಗಿ ಅವನೊಬ್ಬನು ಮಾತ್ರ. ನಂತರ ಅವನು ಖಡ್ಗವನ್ನೆತ್ತಿ  ಖಡ್ಗದ ಬಲದಿಂದ ಅದನ್ನು ಬೋಧಿಸಲು ಪ್ರಯತ್ನಿಸುತ್ತಾನೆ. ಇದು ಅವನಿಗೆ ಸ್ವಲ್ಪ ಮಾತ್ರವೇ ಪ್ರಯೋಜನಪಡುವುದು. ನೀನು ನಿನ್ನ ಖಡ್ಗವನ್ನು ಪಡೆದುಕೊಳ್ಳಬೇಕು! ಅದಕ್ಕೆ ಸಾಧ್ಯವಾಗುವಂತೆ ತನ್ನಿಂತಾನೇ ಅಖಂಡವಾಗಿ ಬೋಧಿಸುವಂತಹ ಒಂದು ವಸ್ತುವಾಗಿರಬೇಕು ಆ ಖಡ್ಗ.

 

10. ಧರ್ಮದಲ್ಲಿ ಬಲಾತ್ಕಾರವಿಲ್ಲ:

 

ಯಾವ ಖಡ್ಗದಿಂದಾಗಿತ್ತು ಇಸ್ಲಾಮ್ ಹಬ್ಬಿದ್ದು? ಒಂದು ವೇಳೆ ಅಂತಹ ಖಡ್ಗ ಮುಸ್ಲಿಮರ ಬಳಿಯಿದ್ದಿದ್ದರೂ ಅದನ್ನು ಬಳಸಲು ಮುಸ್ಲಿಮರಿಗೆ ಅವಕಾಶವಿಲ್ಲ. ಯಾಕೆಂದರೆ ಕುರ್‌ಆನ್ ಹೇಳುತ್ತದೆ:

 

ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸತ್ಯವು ಅಸತ್ಯದಿಂದ ಬೇರ್ಪಟ್ಟು ನಿಂತಿದೆ. (ಕುರ್‌ಆನ್ 2/256)

 

11. ಬುದ್ಧಿಶಕ್ತಿಯ ಖಡ್ಗ:

 

ಅದು ಬುದ್ಧಿಶಕ್ತಿಯ ಖಡ್ಗವಾಗಿತ್ತು. ಜನರ ಹೃದಯಗಳನ್ನು ಮತ್ತು ಮನಗಳನ್ನು ಜಯಿಸಿದ ಖಡ್ಗ. ಕುರ್‌ಆನ್ ಹೇಳುತ್ತದೆ:

 

ಯುಕ್ತಿ ಮತ್ತು ಸುಂದರವಾದ ಬೋಧನೆಯ ಮೂಲಕ ನೀನು ನಿನ್ನ ಪ್ರಭುವಿನ ಮಾರ್ಗದೆಡೆಗೆ (ಜನರನ್ನು) ಆಹ್ವಾನಿಸು. ಮತ್ತು ಅತ್ಯುತ್ತಮವಾದ ರೀತಿಯಲ್ಲಿ ಅವರೊಂದಿಗೆ ತರ್ಕಿಸು. (ಕುರ್‌ಆನ್ 16/125)

 

12. 1934ರಿಂದ 1984ರವರೆಗೆ ಜಾಗತಿಕ ಧರ್ಮಗಳಲ್ಲಿ ವೃದ್ಧಿ:

 

Reader’s Digest ‘Almanac’ ನಲ್ಲಿದ್ದ ಲೇಖನವೊಂದರಲ್ಲಿ 1934ರಿಂದ 1984 ರವರೆಗಿರುವ ಅರ್ಧ ಶತಮಾನದಲ್ಲಿ ಜಗತ್ತಿನ ಅತಿದೊಡ್ಡ ಧರ್ಮಗಳಲ್ಲಿರುವ ಶೇಕಡವಾರು ವೃದ್ಧಿಯ ಅಂಕಿ ಅಂಶಗಳನ್ನು ನೀಡಲಾಗಿತ್ತು. ಈ ಲೇಖನವು The Plain Truth ಎಂಬ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು. ಅದರ ಪ್ರಕಾರ 235% ವೃದ್ಧಿಯೊಂದಿಗೆ ಇಸ್ಲಾಮ್ ಮೊದಲ ಸ್ಥಾನದಲ್ಲಿತ್ತು. ಕ್ರೈಸ್ತ ಧರ್ಮವು ಕೇವಲ 47% ದಷ್ಟು ಮಾತ್ರ ವೃದ್ಧಿಯಾಗಿತ್ತು. ನಾನು ಕೇಳುತ್ತೇನೆ: ಮಿಲಿಯಾಂತರ ಜನರನ್ನು ಇಸ್ಲಾಮಿಗೆ ಪರಿವರ್ತಿಸಿದ ಯಾವ ಯುದ್ಧವು ಈ ಶತಮಾನದಲ್ಲಿ ಜರುಗಿತ್ತು?

 

13. ಅಮೇರಿಕಾ ಮತ್ತು ಯೂರೋಪಿನಲ್ಲಿ ಅತಿವೇಗದಿಂದ ಬೆಳೆಯುತ್ತಿರುವ ಧರ್ಮವಾಗಿದೆ ಇಸ್ಲಾಮ್:

 

ಇಂದು ಅಮೇರಿಕಾದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಧರ್ಮವು ಇಸ್ಲಾಮ್ ಆಗಿದೆ. ಯೂರೋಪಿನಲ್ಲಿ ಕೂಡ ಅತಿವೇಗವಾಗಿ ಇಸ್ಲಾಮ್ ಬೆಳೆಯುತ್ತಿದೆ. ಈ ರೀತಿ ದೊಡ್ಡ ಸಂಖ್ಯೆಯಲ್ಲಿ ಇಸ್ಲಾಮನ್ನು ಸ್ವೀಕರಿಸಲು ಪಾಶ್ಚಾತ್ಯರನ್ನು ಬಲವಂತಗೊಳಿಸುತ್ತಿರುವ ಖಡ್ಗವಾದರೂ ಯಾವುದು?

 

14. Dr. Joseph Adam Pearson:

 

Dr. Joseph Adam Pearson ಹೇಳಿದ್ದಾರೆ:

 

People who worry that nuclear weaponry will one day fall in the hands of the Arabs, fail to realize that the Islamic bomb has been dropped already, it fell the day MUHAMMED (pbuh) was born.

 

ಪರಮಾಣು ಶಸ್ತ್ರವು ಒಂದಿನ ಅರಬರ ಕೈಗೆ ದೊರಕಬಹುದು ಎಂದು ಮರುಗುವ ಜನರು ಇಸ್ಲಾಮಿಕ್ ಬಾಂಬ್ ಈಗಾಗಲೇ ಅವರಲ್ಲಿದೆ ಎಂಬುದನ್ನು ಅರಿತುಕೊಳ್ಳುವಲ್ಲಿ ಎಡವಿದ್ದಾರೆ. ಪ್ರವಾದಿ ಮುಹಮ್ಮದ್(ಸ)ರವರು ಜನಿಸಿದಂದೇ ಅದು ಅವರಿಗೆ ದೊರಕಿದೆ.

ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದೇಕೆ?


ಇಸ್ಲಾಮಿನ ವಿಮರ್ಶಕರು ಅತಿಹೆಚ್ಚಾಗಿ ಟೀಕಿಸುವ ಅನೇಕ ವಿಷಯಗಳಲ್ಲಿ ಒಂದಾಗಿದೆ ಪ್ರವಾದಿ(ಸ)ರವರ ಬಹುಪತ್ನಿತ್ವ. ಈ ರೀತಿ ಟೀಕಿಸುವ ಅವರ ಮುಖ್ಯ ಉದ್ದೇಶವು ಪ್ರವಾದಿ(ಸ)ರವರನ್ನು ಸ್ತ್ರೀ ಲಂಪಟ ಅಥವಾ ಕಾಮುಕ ಎಂಬಂತೆ ಚಿತ್ರೀಕರಿಸುವುದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಆದರೆ ವಾಸ್ತವಿಕವಾಗಿ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದಾದರೂ ಏಕೆ? ಅವರ ಬಹುವಿವಾಹದ ಹಿಂದೆ ಸಮುದಾಯದ ಉನ್ನತಿಯನ್ನು ಬಯಸುವ ಉದ್ದೇಶವೇನಾದರೂ ಇತ್ತೇ? ಅಥವಾ ಕೇವಲ ಕಾಮೋದ್ರೇಕದಿಂದ ಅವರು ಹಲವಾರು ಬಾರಿ ವಿವಾಹವಾದರೇ?

ಪ್ರವಾದಿ(ಸ)ರವರ ಬಹುಪತ್ನಿತ್ವವನ್ನು ಟೀಕಿಸುವವರಲ್ಲಿ ಹಲವರು ಪ್ರವಾದಿ(ಸ)ರವರು ಐವತ್ತು ಮದುವೆಯಾಗಿದ್ದಾರೆಂದೂ, ಇಪ್ಪತ್ತು ಮದುವೆಯಾಗಿದ್ದಾರೆಂದೂ, ಹದಿನಾರು ಮದುವೆಯಾಗಿದ್ದಾರೆಂದೂ ಹೇಳುತ್ತಾರೆ. ಆದರೆ ಪ್ರವಾದಿ(ಸ)ರವರು ಹನ್ನೆರಡು ಬಾರಿ ಮಾತ್ರವೇ ವಿವಾಹವಾಗಿದ್ದರು. ಅವರ ಮಡದಿಯರ ಹೆಸರುಗಳು ಹೀಗಿವೆ: 1. ಖದೀಜಾ ಬಿನ್ತ್ ಖುವೈಲಿದ್ 2. ಸೌದಾ ಬಿನ್ತ್ ಝಮಅಃ 3. ಆಯಿಶಾ ಬಿನ್ತ್ ಅಬೀಬಕ್ರ್ ಸಿದ್ದೀಕ್ 4. ಹಫ್ಸಾ ಬಿನ್ತ್ ಉಮರ್ ಅಲ್‌ಫಾರೂಕ್ 5. ಝೈನಬ್ ಬಿನ್ತ್ ಖುಝೈಮಃ 6. ಉಮ್ಮು ಸಲಮಾ ಹಿಂದ್ ಬಿನ್ತ್ ಉತ್ಬಾ 7. ಝೈನಬ್ ಬಿನ್ತ್ ಜಹ್‌ಶ್ 8. ಜುವೈರಿಯಾ ಬಿನ್ತ್ ಅಲ್‌ಹಾರಿಸ್ 9. ಸಫಿಯ್ಯಾ ಬಿನ್ತ್ ಹುಯಯ್ಯ್ ಇಬ್ನ್ ಅಖ್ತಬ್ 10. ಉಮ್ಮು ಹಬೀಬಾ ರಮ್ಲಾ ಬಿನ್ತ್ ಅಬೀ ಸುಫ್ಯಾನ್ 11. ಮಾರಿಯಾ ಬಿನ್ತ್ ಶಮ್‌ಊನ್ ಅಲ್‌ಮಿಸ್ರಿಯ್ಯಃ 12. ಮೈಮೂನಾ ಬಿನ್ತ್ ಅಲ್‌ಹಾರಿಸ್.

ಇವರಲ್ಲಿ ಆಯಿಶಾ(ರ)ರವರು ಮಾತ್ರ ಕನ್ಯೆಯರಾಗಿದ್ದರು. ಉಳಿದವರೆಲ್ಲರೂ ವಿಧವೆಯರೋ ವಿವಾಹ ವಿಚ್ಛೇದಿತೆಯರೋ ಆಗಿದ್ದರು. ಪ್ರವಾದಿ(ಸ)ರವರು ಮರಣಹೊಂದಿದಾಗ ಹತ್ತು ಮಂದಿ ಪತ್ನಿಯರನ್ನು ಬಿಟ್ಟಗಲಿದ್ದರು. ಖದೀಜಾ ಮತ್ತು ಝೈನಬ್ ಅವರ ಜೀವಿತಕಾಲದಲ್ಲೇ ಮೃತಪಟ್ಟಿದ್ದರು. ಮಾರಿಯಾರವರ ಹೊರತು ಉಳಿದವರೆಲ್ಲರೂ ಅರಬಿಗಳಾಗಿದ್ದರು. ಮಾರಿಯಾ ಈಜಿಪ್ಟಿನವರಾಗಿದ್ದರು ಮತ್ತು ಕ್ರೈಸ್ತರಾಗಿದ್ದರು. ಸಫಿಯ್ಯಾ ಯಹೂದಿಯಾಗಿದ್ದರು. ಉಳಿದ ಹತ್ತು ಪತ್ನಿಯರೂ ಮುಸ್ಲಿಮರಾಗಿದ್ದರು.

ಪ್ರವಾದಿ(ಸ)ರವರು ಇಷ್ಟೊಂದು ವಿವಾಹವಾಗಿರುವುದು ಯಾತಕ್ಕೆ? ಕಾಮುಕತೆಯಿಂದಲೇ? ಬಹುಶಃ ಇಂತದೊಂದು ಸಣ್ಣ ಸಂದೇಹ ನಮ್ಮಲ್ಲೇ ಅನೇಕರಿಗಿದೆ.

ಆದರೆ ವಾಸ್ತವಿಕವಾಗಿ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದು ಕಾಮುಕತೆಯಿಂದಾಗಿರಲಿಲ್ಲವೆಂದು ಅವರ ಜೀವನ ಚರಿತ್ರೆಯನ್ನು ಒಂದು ಬಾರಿಯಾದರೂ ಓದಿರುವ ವ್ಯಕ್ತಿಗೆ ಖಂಡಿತವಾಗಿಯೂ ಅನ್ನಿಸದಿರಲಾರದು. ಯಾಕೆಂದರೆ ಅವರ ಪ್ರತಿಯೊಂದು ವಿವಾಹದ ಹಿಂದೆಯೂ ಒಂದೊಂದು ಮಹಾನ್ ತ್ಯಾಗವಿತ್ತು. ಸಾಮುದಾಯಿಕ ಕ್ಷೇಮದ ಬಯಕೆಯಿತ್ತು. ಒಂದು ಸಿದ್ಧಾಂತವನ್ನು ಉಳಿಸಿ ಬೆಳೆಸುವ ಮಹತ್ವಾಕಾಂಕ್ಷೆಯಿತ್ತು. ಆದರೆ ಈ ಹಿನ್ನೆಲೆಗಳನ್ನು ಪರಾಂಬರಿಸಿ ನೋಡದವರು ಕೇವಲ ಬಾಹ್ಯ ನೋಟದಿಂದಲೇ ವಿಧಿಯನ್ನು ಜಾರಿಗೊಳಿಸಿಬಿಡುತ್ತಾರೆ.

ಪ್ರವಾದಿ(ಸ)ರವರು ಮೊಟ್ಟಮೊದಲು ವಿವಾಹವಾದಾಗ ಅವರ ಪ್ರಾಯವು 25 ಆಗಿತ್ತು. ಆದರೆ ಆಗ ಅವರು ಆರಿಸಿದ ವಧು ಯೌವನವು ತುಂಬಿ ತುಳುಕುತ್ತಿರುವ ಯುವತಿ ಆಗಿರಲಿಲ್ಲ. ಬದಲಾಗಿ ತನಗಿಂತಲೂ 15 ವರ್ಷ ಹಿರಿಯರಾಗಿದ್ದ ಓರ್ವ ವಿಧವೆಯನ್ನಾಗಿತ್ತು! ಅದೂ ಕೂಡ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದ ಮತ್ತು ಮಕ್ಕಳನ್ನೂ ಹೊಂದಿದ್ದ 40 ವರ್ಷ ಪ್ರಾಯದ ವಿಧವೆ!! ಅವರಾಗಿದ್ದರು ಖದೀಜಾ ಬಿನ್ತ್ ಖುವೈಲಿದ್. ಮೊಟ್ಟಮೊದಲನೆಯದಾಗಿ ಇಸ್ಲಾಮ್ ಸ್ವೀಕರಿಸಿದ ಸ್ತ್ರೀ.

ಈಗ ಹೇಳಿ, ಕಾಮುಕನಾದ ಯಾವನೇ ವ್ಯಕ್ತಿಯಾದರೂ ಬಿಸಿರಕ್ತವನ್ನು ಹೊಂದಿರುವ ಯೌವನದಲ್ಲಿ ಯಾವ ರೀತಿಯ ವಧುವನ್ನು ಆರಿಸುತ್ತಿದ್ದನು? ಹದಿಹರೆಯದ ಕನ್ಯೆಯನ್ನೇ? ಅಥವಾ ಮಧ್ಯವಯಸ್ಕ ಯುವತಿಯನ್ನೇ? ಅಥವಾ ಎರಡು ಬಾರಿ ವಿವಾಹವಾಗಿರುವ ವಿಧವೆಯನ್ನೇ? ನ್ಯಾಯಯುತವಾದ ಯಾವ ಕಾರಣವೂ ಇಲ್ಲದೆ ಇಸ್ಲಾಮಿನ ಪ್ರವಾದಿಯನ್ನು ಮೂದಲಿಸುವವರು ಇದಕ್ಕೆ ಉತ್ತರಿಸಬೇಕಾಗಿದೆ! ಅಲ್‌ಅಮೀನ್ (ಪ್ರಾಮಾಣಿಕ) ಅಸ್ಸಾದಿಕ್ (ಸತ್ಯಸಂಧ) ಎಂಬ ಪರ್ಯಾಯ ನಾಮಗಳಲ್ಲಿ ಮಕ್ಕಾ ನಿವಾಸಿಗಳ ಮಧ್ಯೆ ಚಿರಪರಿಚಿತರಾಗಿದ್ದ ಮತ್ತು ಅವರು ಗೌರವಾದರಗಳೊಂದಿಗೆ ಕಾಣುತ್ತಿದ್ದ ಮಕ್ಕಾದ ಕಣ್ಮಣಿಯಾಗಿದ್ದ ಮುಹಮ್ಮದ್(ಸ)ರನ್ನು ವಿವಾಹವಾಗಲು ಮಕ್ಕಾದಲ್ಲಿ ಅಂದು ನೂರಾರು ಯುವತಿಯರು ತುದಿಗಾಲಲ್ಲಿ ನಿಂತಿರುವಾಗ ಪ್ರವಾದಿ(ಸ)ರವರು ಮಧ್ಯವಯಸ್ಸನ್ನು ದಾಟಿದ ವಿಧವೆಯನ್ನು ವಿವಾಹವಾಗಿದ್ದಾದರೂ ಏಕೆ?

ಎರಡು ಬಾರಿ ವಿವಾಹವಾಗಿದ್ದ ಖದೀಜಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದೇನೋ ಸರಿ. ಆದರೆ ಅದು ಅವರ ಸಂಪತ್ತಿನ ಮೇಲಿದ್ದ ವ್ಯಾಮೋಹದಿಂದಾಗಿತ್ತು ಎಂದು ಕೆಲವರು ಇದಕ್ಕೆ ಅಪಸ್ವರ ಎತ್ತಲೂಬಹುದು! ಹಾಗಿದ್ದರೆ ಉಟ್ಟ ಬಟ್ಟೆಯನ್ನು ಬದಲಾಯಿಸುವಂತೆ ಮಡದಿಯರನ್ನು ಬದಲಾಯಿಸುತ್ತಿದ್ದ ಅಂದಿನ ಕಾಲಘಟ್ಟದಲ್ಲಿ ಆ ಸಂಪತ್ತೆಲ್ಲವನ್ನೂ ತನ್ನ ಹೆಸರಿಗೆ ಬರೆದು ಹದಿಹರೆಯದ ಯುವತಿಯರನ್ನು ವಿವಾಹವಾಗಲು ಅವರಿಗೆ ಯಾವ ಅಡ್ಡಿಯೂ ಇದ್ದಿರಲಿಲ್ಲ. ಮಾತ್ರವಲ್ಲದೆ ಅನಾಗರಿಕ ಅರಬಿಗಳ ಸಂಸ್ಕೃತಿ ಕೂಡಾ ಹಾಗೇ ಇತ್ತು.

ಆದರೆ ಅಲ್ಲಾಹನಾಣೆ ಸತ್ಯ! ಖದೀಜಾರವರು ಮರಣಹೊಂದುವವರೆಗೆ ಅರ್ಥಾತ್ ತಮಗೆ 50 ವರ್ಷ ಪ್ರಾಯವಾಗುವವರೆಗೆ 25 ವರ್ಷಗಳ ಕಾಲ ಪ್ರವಾದಿ(ಸ)ರವರು ಬೇರೊಂದು ಹೆಣ್ಣಿನ ಕುರಿತು ಕನಸಿನಲ್ಲೂ ಇಚ್ಛೆಪಟ್ಟಿರಲಿಲ್ಲ. ಮಾತ್ರವಲ್ಲದೆ ಜಗತ್ತಿಗೇ ಮಾದರೀ ಯೋಗ್ಯವಾದ ರೀತಿಯಲ್ಲಿ ಏಕಪತ್ನೀವೃತಸ್ತರಾಗಿ ಸುಮಧುರವಾದ ಯಶಸ್ವೀ ದಾಂಪತ್ಯ ಜೀವನವನ್ನು ಅವರು ಸಾಗಿಸಿದರು. ಅವರ ದಾಂಪತ್ಯವು ಎಷ್ಟು ಚೇತೋಹಾರಿಯಾಗಿತ್ತೆಂದರೆ ಅದರ ಕುರಿತು ಪ್ರವಾದಿ(ಸ)ರವರು ಪ್ರಸ್ತಾಪಿಸಿದಾಗಲೆಲ್ಲಾ ನಮಗೆ ಅಸೂಯೆಯುಂಟಾಗುತ್ತಿತ್ತೆಂದು ಆಯಿಶಾ(ರ)ರವರು ಹೇಳಿದ್ದರು. ಈಗ ಹೇಳಿ, ಕಾಮುಕನಾದ ಓರ್ವ ವ್ಯಕ್ತಿ ಒಬ್ಬಳೇ ಒಬ್ಬಳು ಅದೂ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದ, ವಿಧವೆಯಾದ, ಮಕ್ಕಳನ್ನೂ ಹೊಂದಿದ್ದ ಪತ್ನಿಯೊಂದಿಗೆ ಸುದೀರ್ಘ 25 ವರ್ಷಗಳ ದಾಂಪತ್ಯವನ್ನು ಸಾಗಿಸಲು ಸಾಧ್ಯವೇ? ಅದೂ ಕೂಡ ದಂಪತಿಗಳ ಮಧ್ಯೆ ಒಂದಿನಿತೂ ಮನಸ್ತಾಪವುಂಟಾಗದ ರೀತಿಯಲ್ಲಿ?

ಈ ದಾಂಪತ್ಯವು ಇಲ್ಲಿಗೆ ಕೊನೆಗೊಂಡಿತೇ? ಇಲ್ಲ. ತಮ್ಮ 50ನೇ ಪ್ರಾಯದಿಂದ 52ನೇ ಪ್ರಾಯದವರೆಗೆ ಪ್ರವಾದಿ(ಸ)ರವರು ಮೃತಪಟ್ಟ ತನ್ನ ಮಡದಿಯ ಶೋಕಾಚರಣೆಯಲ್ಲೇ ಕಳೆದರು!

ಪ್ರವಾದಿ(ಸ)ರವರು ತದನಂತರ ತಮ್ಮ 52ನೇ ವಯಸ್ಸಿನಿಂದ ತೊಡಗಿ 60ನೇ ವಯಸ್ಸಿನ ಮಧ್ಯಭಾಗದಲ್ಲಿ ಹನ್ನೊಂದು ಮಂದಿಯನ್ನು ವಿವಾಹವಾಗಿದ್ದರು. ಇವು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ನಡೆದ ವಿವಾಹಗಳಾಗಿದ್ದವು ಎಂದು ಮುಂದೆ ಓದಿದರೆ ನಿಮಗೆ ತಿಳಿದುಕೊಳ್ಳಬಹುದು.

ಈಗಾಗಲೇ ಹೇಳಿದಂತೆ ಖದೀಜಾರವರ ಮರಣಾನಂತರ ಎರಡು ವರ್ಷಗಳ ಕಾಲ ಅವರು ಒಬ್ಬಂಟಿಯಾಗಿ ಜೀವಿಸಿದ್ದರು. ನಂತರ ಅವರು ಸೌದಾ ಬಿನ್ತ್ ಝಮಅಃರನ್ನು ವಿವಾಹವಾದರು. ಬಹುಶಃ ಸೌದಾರವರು ಹದಿ ಹರೆಯದ ಕನ್ಯೆಯಾಗಿರಬಹುದು ಎಂದು ನೀವು ಊಹಿಸಿದ್ದರೆ ನಿಮ್ಮ ಊಹೆ ಖಂಡಿತ ತಪ್ಪು. ಹಾಗಾದರೆ ಅವರು ನಲ್ವತ್ತು ವರ್ಷದೊಳಗಿನ ವಿಧವೆಯಾಗಿರಬಹುದು ಎಂದು ನೀವು ಭಾವಿಸಿದ್ದರೆ ಅದು ಕೂಡ ತಪ್ಪು. ಯಾಕೆಂದರೆ ಪ್ರವಾದಿ(ಸ)ರವರು ಸೌದಾರವರನ್ನು ವಿವಾಹವಾದಾಗ ಅವರು 65 ವರ್ಷ ಪ್ರಾಯದ ಬಡ ವಿಧವೆಯಾಗಿದ್ದರು!

ತಮ್ಮ 52ನೇ ವಯಸ್ಸಿನಲ್ಲಿ 65 ವರ್ಷದ ಸೌದಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದು ಖಂಡಿತವಾಗಿಯೂ ಏನಾದರೂ ತೀಟೆಯನ್ನು ತೀರಿಸುವ ಉದ್ದೇಶದಿಂದಾಗಿರಲಿಲ್ಲವೆಂಬುದು ಸ್ಪಷ್ಟ. ಹಾಗಾದರೆ 65 ವರ್ಷದ ವಿಧವೆಯನ್ನು ವಿವಾಹವಾಗಬೇಕಾದ ಅನಿವಾರ್ಯತೆಯು ಪ್ರವಾದಿ(ಸ)ರವರಿಗೇನಿತ್ತು? ಪ್ರವಾದಿ(ಸ) ರವರ ತ್ಯಾಗದ ಮಹತ್ವವು ಇಲ್ಲಿ ನಮಗೆ ಮನದಟ್ಟಾಗುತ್ತದೆ.

ಇಸ್ಲಾಮ್ ಸ್ವೀಕರಿಸಿದ ಮಹಿಳೆಯರಲ್ಲಿ ಮೊಟ್ಟಮೊದಲು ವಿಧವೆಯಾದವರಾಗಿದ್ದರು ಸೌದಾ! ಓರ್ವ ವಿಧವೆಯ ಹೃದಯದ ಆಳದಲ್ಲಿರುವ ವೇದನೆಗಳನ್ನೂ, ಅಬಲೆಯಾಗಿರುವ ಆಕೆಯ ಪರಿಸ್ಥಿತಿಯನ್ನೂ, ಮಾನಸಿಕ ತಳಮಳಗಳನ್ನೂ ಇತರೆಲ್ಲರಿಗಿಂತಲೂ ಚೆನ್ನಾಗಿ ಪ್ರವಾದಿ(ಸ)ರವರು ಅರಿತಿದ್ದರು. ಒಂದು ಸಮೂಹವನ್ನು ಸರ್ವ ದಿಸೆಗಳಿಂದಲೂ ಒಳಿತಿನ ಪಾರಮ್ಯತೆಯೆಡೆಗೆ ಮುನ್ನಡೆಸುವ ನಾಯಕತ್ವವನ್ನು ವಹಿಸಿಕೊಂಡವರಾಗಿದ್ದರು ಅವರು. ಅವರು ಯಾವುದೇ ಒಳಿತನ್ನು ಆದೇಶಿಸಿದರೂ ಇಂದಿನ ಅನೇಕ ಜನನಾಯಕರಂತೆ ಅದನ್ನು ಕೇವಲ ಬಾಯಿಮಾತಿಗೆ ಸೀಮಿತವಾಗಿಸುತ್ತಿರಲಿಲ್ಲ. ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸಗಳನ್ನಿಟ್ಟು ಭಂಡ ನಾಯಕನಂತೆ ಮೆರೆದವರಾಗಿರಲಿಲ್ಲ ಅವರು. ಬದಲಾಗಿ ಅವರು ತಮ್ಮ ಅನುಯಾಯಿಗಳಿಗೆ ಏನನ್ನಾದರೂ ಆದೇಶಿಸಿದರೆ ಅದನ್ನು ಮೊಟ್ಟಮೊದಲು ತಮ್ಮ ಜೀವನದಲ್ಲಿ ಪ್ರಾಯೋಗಿಕಗೊಳಿಸುತ್ತಿದ್ದರು. ಅದೇ ರೀತಿ ಏನಾದರೂ ಕೆಡುಕಿನಿಂದ ಅವರು ತಮ್ಮ ಅನುಯಾಯಿಗಳನ್ನು ವಿರೋಧಿಸಿದರೆ ಮೊಟ್ಟಮೊದಲು ಆ ಕೆಡುಕಿನಿಂದ ಸ್ವತಃ ತಾವು ದೂರವಿರುತ್ತಿದ್ದರು.

ಓರ್ವ ಮಹಿಳೆ ವಿಧವೆಯಾದರೆ ಅದು ಅವಳ ಇಳಿವಯಸ್ಸಿನಲ್ಲಾಗಿದ್ದರೂ ಕೂಡ ಇಸ್ಲಾಮ್ ಆಕೆಯನ್ನು ಅವಗಣಿಸುವುದಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಡುವ ತವಕವು ಅವರಲ್ಲಿತ್ತು. ಅದಕ್ಕಾಗಿ ಅವರು ಆರಿಸಿಕೊಂಡ ದಾರಿ ಕೂಡ ಅನುಪಮವಾಗಿತ್ತು. ಒಂದು ವೇಳೆ ಪ್ರವಾದಿ(ಸ)ರವರು ಕಾಮುಕರಾಗಿದ್ದರೆ ತಮ್ಮ ಯಾರಾದರೂ ಅನುಯಾಯಿಗೆ ಕೈಸನ್ನೆ ಮಾಡುವ ಮೂಲಕ ಆ ವಿಧವೆಯನ್ನು ವಿವಾಹವಾಗುವಂತೆ ಅದೇಶಿಸಬಹುದಿತ್ತು!  ಆದರೆ ಅವರು ಹಾಗೆ ಮಾಡದೆ ತಾವೇ ಸ್ವತಃ ವಿವಾಹವಾದರು. ಇದು ಅವರು ಜಗತ್ತಿಗೆ ತೋರಿಸಿಕೊಟ್ಟ ಅನರ್ಘ್ಯವಾದ ತ್ಯಾಗವಾಗಿತ್ತೇ ಹೊರತು ಕಾಮೋದ್ರೇಕ ಶಮನವಾಗಿರಲಿಲ್ಲ. ಇದಾಗಿತ್ತು ಪ್ರವಾದಿ(ಸ)ರವರ ಎರಡನೇ ವಿವಾಹದ ಕಾರಣ.

ಪ್ರವಾದಿ(ಸ)ರವರ ವಿವಾಹಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಒಂದು ಮುಹಮ್ಮದ್ ಎಂಬ ವ್ಯಕ್ತಿಯಾಗಿ ಅವರು ಮಾಡಿಕೊಂಡ ವಿವಾಹ. ಎರಡು ಮುಹಮ್ಮದ್ ಎಂಬ ಪ್ರವಾದಿಯಾಗಿ ಅವರು ಮಾಡಿಕೊಂಡ ವಿವಾಹಗಳು. ಖದೀಜಾರವರ ವಿವಾಹವು ಮೊದಲ ವಿಧದಲ್ಲಿ ಸೇರಿದರೆ ಉಳಿದ ಹನ್ನೊಂದು ವಿವಾಹಗಳೂ ಎರಡನೆಯ ವಿಧದಲ್ಲಿ ಸೇರುತ್ತವೆ.

ಮತಪ್ರಚಾರ ಕಾರ್ಯದಂಗವಾಗಿ ತನ್ನ ಅನುಯಾಯಿಗಳೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸುವುದಕ್ಕಾಗಿ ಅವರೊಂದಿಗೆ ವೈವಾಹಿಕ ಸಂಬಂಧಗಳನ್ನು ಸ್ಥಾಪಿಸುವುದು ಅಂದು ಅತ್ಯಗತ್ಯವಾಗಿತ್ತು. ಅದಕ್ಕಾಗಿ ಅವರು ತಮ್ಮ ಅನುಯಾಯಿಗಳಲ್ಲೇ ಶ್ರೇಷ್ಠರಾದ ಅಬೂ ಬಕ್ರ್ ಸಿದ್ದೀಕ್(ರ)ರವರ ಮಗಳಾದ ಆಯಿಶಾರನ್ನು ಮತ್ತು ಉಮರ್ ಇಬ್ನುಲ್ ಖತ್ತಾಬ್(ರ)ರವರ ಮಗಳಾದ ಹಫ್ಸಾರನ್ನು ವಿವಾಹವಾದರು. ಖದೀಜಾರಿಂದಾಗಿ ತನಗುಂಟಾದ ಮಕ್ಕಳಲ್ಲಿ ಈರ್ವರನ್ನು ಉಸ್ಮಾನ್ ಇಬ್ನ್ ಅಪ್ಫಾನ್(ರ)ಗೆ ಮತ್ತು ತಮ್ಮ ಮುದ್ದಿನ ಮಗಳಾದ ಫಾತಿಮಾರನ್ನು ಅಲೀ ಇಬ್ನ್ ಅಬೀ ತಾಲಿಬ್(ರ)ಗೆ ವಿವಾಹ ಮಾಡಿಸಿಕೊಟ್ಟರು. ಪ್ರವಾದಿ(ಸ)ರವರನ್ನು ವಿವಾಹವಾಗುವಾಗ ಹಫ್ಸಾರವರ ಪ್ರಾಯವು 40 ಆಗಿತ್ತು ಮತ್ತು ಅವರು ವಿಧವೆಯಾಗಿದ್ದರು.

ಝೈನಬ್ ಬಿನ್ತ್ ಖುಝೈಮಾರವರ ಪತಿ ಉಹ್ದ್ ಯುದ್ಧದಲ್ಲಿ ಮೃತಪಟ್ಟರು. ತನ್ನಿಮಿತ್ತ ಅವರು ಒಂಟಿಯೂ ಆಶ್ರಯರಹಿತರೂ ಆದರು. ಕೃಶಶರೀರಿಯಾಗಿದ್ದ ಆಕೆಗೆ ಪ್ರವಾದಿ(ಸ)ರವರು ಬಾಳನ್ನು ನೀಡಿದರು. ವಿವಾಹದ ನಂತರ ಕೆಲವೇ ಸಮಯದಲ್ಲಿ ಅವರು ಮೃತಪಟ್ಟರು.

ಉಮ್ಮು ಸಲಮಾ 65 ವರ್ಷ ಪ್ರಾಯದ ವಿಧವೆಯಾಗಿದ್ದರು. ಅಬೂ ಬಕ್ರ್, ಉಮರ್ ಮೊದಲಾದವರ ವಿವಾಹ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದರು. ಆದರೆ ಪ್ರವಾದಿ(ಸ)ರವರು ವಿವಾಹ ಪ್ರಸ್ತಾಪವಿಟ್ಟಾಗ ಅವರು ಅದನ್ನು ಸ್ವೀಕರಿಸಿದರು.

ಝೈನಬ್ ಬಿನ್ತ್ ಜಹ್‌ಶ್ ಪ್ರವಾದಿ(ಸ)ರವರ ದತ್ತುಪುತ್ರ ಝೈದ್‌ರವರ ಪತ್ನಿಯಾಗಿದ್ದರು. ಝೈದ್ ಆಕೆಗೆ ವಿಚ್ಛೇದನೆ ನೀಡಿದ್ದರಿಂದಾಗಿ ಪ್ರವಾದಿ(ಸ)ರವರು ಆಕೆಯನ್ನು ವಿವಾಹವಾದರು. ಇದು ದತ್ತು ಪುತ್ರರು ತಮ್ಮ ಪತ್ನಿಯರನ್ನು ವಿಚ್ಛೇದಿಸಿದರೆ ಅವರನ್ನು ವಿವಾಹವಾಗುವುದನ್ನು ಇಸ್ಲಾಮ್ ವಿರೋಧಿಸುವುದಿಲ್ಲ ಎಂಬುದನ್ನು ತೋರಿಸಿಕೊಡುವ ಸಲುವಾಗಿತ್ತು.

ಪ್ರವಾದಿ(ಸ)ರವರ ವಿವಾಹಗಳ ಹಿಂದೆ ರಾಜಕೀಯ ಕಾರಣಗಳೂ ಇದ್ದವು. ಯಹೂದ ಪ್ರದೇಶವಾದ ಖೈಬರನ್ನು ಜಯಿಸಿದಾಗ ಅದರ ಅರಸನಾಗಿದ್ದ ಹುಯಯ್ಯ್ ಮತ್ತು ಅವರ ಮಗಳು ಸಫಿಯ್ಯಾ ಮುಸ್ಲಿಮರಿಗೆ ಖೈದಿಗಳಾಗಿ ಲಭಿಸಿದರು. ಶತ್ರು ದೇಶದ ಓರ್ವ ಮಹಿಳೆಯು ಯುದ್ಧಖೈದಿಯಾಗಿ ಲಭಿಸಿದರೆ ಅಂದಿನ ಅನಾಗರಿಕ ಕಾಲದ ಸೇನಾನಾಯಕನು ಏನು ಮಾಡುತ್ತಿದ್ದನು? ಆದರೆ ಪ್ರವಾದಿ(ಸ)ರವರು ಮಾಡಿದ್ದೇನು?

ಹೆಣ್ಣಿನ ಆತ್ಮಾಭಿಮಾನವನ್ನು ಸಂರಕ್ಷಿಸುವುದರಲ್ಲಿ ಪ್ರವಾದಿ(ಸ)ರವರಿಗಿಂತ ಮಿಗಿಲಾದ ವ್ಯಕ್ತಿತ್ವವು ಈ ಜಗತ್ತಿನಲ್ಲಿ ಬೇರಾವುದಾದರೂ ಇದೆಯೇ? ಖಂಡಿತವಾಗಿಯೂ ಇಲ್ಲ. ಅರಸನ ಮಗಳಾದ ಸಫಿಯ್ಯಾರನ್ನು ಕನಿಷ್ಠ ಪಕ್ಷ ತನ್ನ ಯಾರಾದರೂ ಅನುಯಾಯಿಗೆ ವಿವಾಹ ಮಾಡಿಕೊಟ್ಟು ನೆಮ್ಮದಿಯಾಗಿರಬಹುದಿತ್ತು. ಆದರೆ ಪ್ರವಾದಿ(ಸ)ರವರ ಮಾದರಿಯು ಅದಾಗಿರಲಿಲ್ಲ. ಇಸ್ಲಾಮನ್ನು ಪ್ರವೇಶಿಸಿದ ಅರಸನ ಮಗಳನ್ನು ಅಪಮಾನಿಸಲು ಅವರು ಇಚ್ಛೆಪಡಲಿಲ್ಲ. ಇಸ್ಲಾಮಿನಲ್ಲಿ ಓರ್ವ ಹೆಣ್ಣಿಗೆ ಲಭಿಸಬಹುದಾದ ಅತ್ಯುನ್ನತವಾದ ಸ್ಥಾನವಾದ ತನ್ನ ಹೃದಯದರಮನೆಯಲ್ಲಿ ಆಕೆಗೆ ಜಾಗವನ್ನು ನೀಡಿದರು. ಆಕೆಯ ಗೌರವಕ್ಕೆ ಎಳ್ಳಷ್ಟು ಚ್ಯುತಿಯುಂಟಾಗದ ರೀತಿಯಲ್ಲಿ ಆಕೆಯ ಅನುಮತಿಯೊಂದಿಗೆ ಆಕೆಯನ್ನು ವಿವಾಹವಾದರು.

ಜುವೈರಿಯ್ಯಾ ಮತ್ತು ಮಾರಿಯಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದು ಹೊಸ ಪ್ರದೇಶಗಳೊಂದಿಗೆ ತನ್ನ ಬಾಂಧವ್ಯವನ್ನು ವೃದ್ಧಿಪಡಿಸುವ ಉದ್ದೇಶದಿಂದಾಗಿತ್ತು. ಅವರು ಜುವೈರಿಯ್ಯಾರನ್ನು ವಿವಾಹವಾದಾಗ ಆಕೆಯ ಜನಾಂಗವಾದ ಬನೂ ಮುಸ್ತಲಕ್ ಸಂಪೂರ್ಣವಾಗಿ ಇಸ್ಲಾಮ್ ಸ್ವೀಕರಿಸಿದರು. ಮಾರಿಯಾರನ್ನು ವಿವಾಹವಾದಾಗ ಸಂಪೂರ್ಣ ಈಜಿಪ್ಟ್ ಅವರಿಗೆ ಬೆಂಗಾವಲಾಗಿ ನಿಂತಿತು.

ಆಯಿಶಾರವರ ಹೊರತು ಇತರ ಮಡದಿಯರೆಲ್ಲರೂ ವಿಧವೆಗಳೋ ವಿಚ್ಛೇದಿತೆಯರೋ ಆಗಿದ್ದರೆಂದು ಹೇಳಿದ್ದೆನಲ್ಲವೇ? ಆದ್ದರಿಂದಲೇ ಕೆಲವರು ಅವರ ಬಗ್ಗೆ ಸೊಲ್ಲೆತ್ತದೆ ಆಯಿಶಾರವರ ಮೇಲೆ ತಮ್ಮ ಟೀಕಾಪ್ರಹಾರವನ್ನು ಹರಿಸುತ್ತಾರೆ. ಪ್ರವಾದಿ(ಸ)ರವರು ಆಯಿಶಾರನ್ನು ವಿವಾಹವಾದಾಗ ಆಕೆ ಒಂಬತ್ತು ವರ್ಷದ ಹುಡುಗಿಯಾಗಿದ್ದಳು ಎಂಬುದಾಗಿದೆ ಅವರು ಈ ರೀತಿ ಟೀಕಿಸಲು ಕಾರಣ!

ವಾಸ್ತವಿಕವಾಗಿ ಒಂಬತ್ತು ವರ್ಷದ ಹುಡುಗಿಯನ್ನು ಪ್ರವಾದಿ(ಸ)ರವರು ವಿವಾಹವಾದುದರಲ್ಲಿ ಅಸಂಗತವಾದುದು ಏನೂ ಇಲ್ಲ. ಒಂಬತ್ತು ವರ್ಷದ ಹುಡುಗಿಯರು ಯಾರೂ ಮೆಚ್ಯೂರ್ ಆಗುವುದಿಲ್ಲ ಎಂದೆನ್ನುವವರಿಗೆ ಸಮಕಾಲೀನ ಜಗತ್ತಿನ ಏನೇನೂ ತಿಳಿದಿಲ್ಲವೆಂದೇ ಭಾವಿಸಬೇಕಾಗಿದೆ! ಒಂಬತ್ತು ವರ್ಷವೇಕೆ ಆರೇಳು ವರ್ಷದ ಹೆಣ್ಣು ಮಕ್ಕಳು ಲೈಂಗಿಕತೆಯಲ್ಲಿ ತೊಡಗುವುದು ಅಮೇರಿಕಾದಂತಹ ಮುಂದುವರಿದ ದೇಶಗಳಲ್ಲಿ ನಿತ್ಯಸುದ್ದಿಯಾಗಿದೆ. ಎಂಟು ವರ್ಷ ಪ್ರಾಯದ ಹುಡುಗಿ ಗರ್ಭಧರಿಸುವುದನ್ನು ಆಧುನಿಕ ವೈದ್ಯ ಶಾಸ್ತ್ರವಂತೂ ನಿಷೇಧಿಸಿಲ್ಲ. ಇದಕ್ಕನುಸೃತವಾಗಿ ಇಂತಹ ಚಿಕ್ಕ ವಯಸ್ಸಿನ ಮಕ್ಕಳು ಗರ್ಭಧರಿಸುವುದನ್ನು ಅಪರೂಪಕೊಮ್ಮೆಯಾದರೂ ನಾವು ಆಲಿಸುತ್ತಲೂ ಓದುತ್ತಲೂ ಇದ್ದೇವೆ. ಆದ್ದರಿಂದ ಆಯಿಶಾರನ್ನು ಟೀಕಿಸುವವರ ಉದ್ದೇಶವು ಇಸ್ಲಾಮಿನೊಂದಿಗಿರುವ ಕುರುಡು ದ್ವೇಷವಲ್ಲದೆ ಬೇರೇನೂ ಅಲ್ಲವೆಂದು ಇದರಿಂದ ತಿಳಿದುಕೊಳ್ಳಬಹುದಾಗಿದೆ.

ಪ್ರವಾದಿ(ಸ)ರವರು ಎಳೆಯ ಪ್ರಾಯದ ಆಯಿಶಾರನ್ನು ವಿವಾಹವಾಗಿದ್ದನ್ನು ಅವರ ಪರಮ ಶತ್ರುಗಳಾಗಿದ್ದ ಕುರೈಶರು ಅಂದು ವಿರೋಧಿಸಿರಲಿಲ್ಲ. ಯಾಕೆಂದರೆ ಮರುಭೂಮಿಯ ಹವಾಮಾನ ವೈಪರೀತ್ಯ ದಿಂದಾಗಿ ಹುಡುಗಿಯೊಬ್ಬಳು ಬಹುಬೇಗನೇ ಮೆಚ್ಯೂರ್ ಆಗುತ್ತಾಳೆಂದು ಅನಕ್ಷರಸ್ಥರಾಗಿದ್ದರೂ ಅನುಭವ ಜ್ಞಾನದ ಮೂಲಕ ಆ ಅನಾಗರಿಕ ಅರಬರಿಗೆ ಗೊತ್ತಿತ್ತು! ಇಲ್ಲದಿದ್ದರೆ ತಮಗೆ ಲಭ್ಯವಾಗುವ ಎಲ್ಲಾ ಸಂದರ್ಭಗಳನ್ನೂ ಬಳಸಿ ಅತಿ ಕಠಿಣವಾದ ಶಬ್ಧಗಳಲ್ಲಿ ಪ್ರವಾದಿ(ಸ)ರವರನ್ನು ಟೀಕಿಸುತ್ತಿದ್ದ ಅವರು ಒಂದೇ ಒಂದು ಬಾರಿಯೂ ಆಯಿಶಾರವರ ವಿವಾಹದ ಕುರಿತು ಸೊಲ್ಲೆತ್ತಿರಲಿಲ್ಲ. ಅನಾಗರಿಕ ಅರಬರನ್ನು ಬಿಡಿ. ತಮ್ಮ ಬಳಿ ದೇವಗ್ರಂಥವಿದೆಯೆಂದು ಸ್ವಯಂ ಕೊಚ್ಚಿಕೊಳ್ಳುತ್ತಿದ್ದ ಪ್ರವಾದಿ(ಸ)ರವರ ಕಠಿಣ ಶತ್ರುಗಳಾದ ಅಂದಿನ ಯಹೂದ ಕ್ರೈಸ್ತರಲ್ಲೊಳಪಟ್ಟ ಯಾವೊಬ್ಬನೂ ಕೂಡ ಈ ವಿಷಯದಲ್ಲಿ ಪ್ರವಾದಿ(ಸ)ರವರನ್ನು ಟೀಕಿಸಿರಲಿಲ್ಲ.

ಹಾಗಾದರೆ ಎಳೆಯ ವಯಸ್ಸಿನ ಕನ್ಯೆಯಾದ ಆಯಿಶಾರನ್ನು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಪ್ರವಾದಿ(ಸ)ರವರು ವಿವಾಹವಾದುದಾದರೂ ಏಕೆ? ಉತ್ತರ ಸ್ಪಷ್ಟ. ಜಗತ್ತಿನ ಅತಿಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ನೀವು ತೆರೆದು ನೋಡಿ. ನಿಮಗೆ ಲಭಿಸುವುದು ಕೇವಲ ಅವರ ಬಹಿರಂಗ ಜೀವನದ ಕುರಿತಿರುವ ಸಂಗತಿಗಳು ಮಾತ್ರವಾಗಿದೆ. ಅವರ ಖಾಸಗಿ ಬದುಕು ಮತ್ತು ಮಡದಿಯರೊಂದಿಗಿನ ಸರಸ ಸಲ್ಲಾಪ, ಸಂಭೋಗ ಮುಂತಾದ ಅತ್ಯಂತ ಖಾಸಗಿ ಬದುಕಿನ ಬಗ್ಗೆ ನಿಮಗೆ ಏನಾದರೂ ಮಾಹಿತಿಗಳು ಲಭಿಸುತ್ತದೆಯೇ? ಖಂಡಿತವಾಗಿಯೂ ಇಲ್ಲ. ಹೆಚ್ಚಿನೆಲ್ಲಾ ಮಹಾನ್ ವ್ಯಕ್ತಿಗಳ ಖಾಸಗಿ ಬದುಕನ್ನು ಅನ್ವೇಷಿಸತೊಡಗಿದರೆ ನಮಗೆ ದೊರಕುವ ಫಲಿತಾಂಶಗಳು ಅತ್ಯಂತ ಅರೋಚಕವಾಗಿರಬಹುದೆಂದು ಬೇರೆ ಹೇಳಬೇಕಾಗಿಲ್ಲ! ಆದರೆ ಪ್ರವಾದಿ(ಸ)ರವರ ಜೀವನಚರಿತ್ರೆಯು ಇದಕ್ಕೆ ವ್ಯತಿರಿಕ್ತವಾಗಿದೆ. ಈಗಾಗಲೇ ಹೇಳಿದಂತೆ ಪ್ರವಾದಿ(ಸ)ರವರು ಅಂತ್ಯದಿನದವರೆಗಿರುವ ಮುಸ್ಲಿಮರಿಗೆ ಮಾತ್ರವಲ್ಲ ಸಂಪೂರ್ಣ ಮನುಷ್ಯಕುಲಕ್ಕೆ ಮಾದರಿಯಾಗಬೇಕಾದ ಪ್ರವಾದಿಯಾಗಿ ಅಲ್ಲಾಹನಿಂದ ನಿಯೋಗಿಸಲ್ಪಟ್ಟವರಾಗಿದ್ದರು.  ಆದ್ದರಿಂದ ಅವರ ಬಹಿರಂಗ ಬದುಕು ಹೇಗೆ ಕನ್ನಡಿಯಲ್ಲಿರುವ ಪ್ರತಿಬಿಂಬದಂತೆ ಹಗಲು ಬೆಳಕಿನಷ್ಟು ಸ್ಪಷ್ಟವಾಗಿ ನಮಗೆ ಲಭಿಸಿದೆಯೋ ಅಷ್ಟೇ ಸ್ಪಷ್ಟವಾಗಿ ಅವರ ಅತ್ಯಂತ ಖಾಸಗಿ ಬದುಕಿನ ಮಾಹಿತಿಗಳೂ ನಮಗೆ ಲಭಿಸಿವೆ! ಇದು ಹೇಗೆ ಸಾಧ್ಯವಾಯಿತೆಂದು ನೀವು ಕೇಳಬಹುದು! ಅದು ಆಯಿಶಾ ಮುಂತಾದ ಅವರ ಪತ್ನಿಯರ ಕೊಡುಗೆಯಾಗಿತ್ತು!

ಆಯಿಶಾರವರು ಅತ್ಯಂತ ಬುದ್ಧಿ ಶಾಲಿಯೂ ಚಾಣಾಕ್ಷೆಯೂ ಆಗಿದ್ದರು. ಯಾವೊಂದು ವಿಷಯವನ್ನಾದರೂ ಸೂಕ್ಷ್ಮವಾಗಿ ಗ್ರಹಿಸುವುದರಲ್ಲಿ ಅವರು ಅದ್ವಿತೀಯರಾಗಿದ್ದರು. ಹನ್ನೆರಡು ಮಂದಿ ಮಡದಿಯರಲ್ಲಿ ಪ್ರವಾದಿ(ಸ)ರವರ ಖಾಸಗಿ ಜೀವನವನ್ನು ಆಯಿಶಾರವರಂತೆ ಸೂಕ್ಷ್ಮವಾಗಿ ಕಲಿತವರು ಬೇರೊಬ್ಬರಿರಲಿಲ್ಲ. ಆದ್ದರಿಂದಲೇ ಪ್ರವಾದಿ(ಸ)ರವರ ಖಾಸಗಿ ಜೀವನದ ಕುರಿತು ಮುಸ್ಲಿಮರು ಆದ್ಯತೆಯನ್ನು ನೀಡುವುದು ಆಯಿಶಾರವರು ವರದಿ ಮಾಡುವ ಹದೀಸ್‌ಗಳಿಗಾಗಿದೆ.

ಆಯಿಶಾರವರು ಇನ್ನೂ ಎಳೆಯ ವಯಸ್ಸಿನವರಾಗಿದ್ದುದರಿಂದ ಪ್ರವಾದಿ(ಸ)ರವರ ಮರಣಾನಂತರ ಸುಮಾರು 42 ವರ್ಷಗಳ ಕಾಲ ಅವರು ಜೀವಿಸಿದ್ದರು. ಅವರಷ್ಟು ದೀರ್ಘಕಾಲ ಪ್ರವಾದಿ(ಸ)ರವರ ಬೇರೊಂದು ಪತ್ನಿ ಬದುಕಿರಲಿಲ್ಲ. ಆದ್ದರಿಂದಲೇ ಸಂಭೋಗಕ್ರಿಯೆ ಮುಂತಾದ ಪ್ರವಾದಿ(ಸ)ರವರ ಅತ್ಯಂತ ಖಾಸಗಿ ಬದುಕಿನ ಕುರಿತು ಮಹತ್ವವಾದ ಮಾಹಿತಿಗಳನ್ನು ಅನ್ವೇಷಿಸಿ ಅಸಂಖ್ಯ ಮಂದಿ ಆಯಿಶಾರವರ ಮನೆಗೆ ಧಾವಿಸುತ್ತಿದ್ದರು. ಆದ್ದರಿಂದ ಸುಮಾರು 42 ವರ್ಷಗಳ ಕಾಲ ಅವರು ಈ ಸಮುದಾಯದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು! ಆ ಎಳೆಯ ಪ್ರಾಯದಲ್ಲಿ ಒಂದು ವೇಳೆ ಪ್ರವಾದಿ(ಸ)ರವರು ಆಯಿಶಾರನ್ನು ವಿವಾಹವಾಗದಿರುತ್ತಿದ್ದರೆ ಅದೆಷ್ಟೋ ಉಪಯುಕ್ತವಾದ ಮಾಹಿತಿಗಳು ನಮ್ಮಿಂದ ಮರೆಯಾಗಿರುತ್ತಿತ್ತೋ ಏನೋ! ಆದ್ದರಿಂದ ಆಯಿಶಾರವರ ಎಳೆಯ ಪ್ರಾಯವು ನಮಗೆ ಮಹದುಪಕಾರವನ್ನು ಮಾಡಿದೆಯೆಂದರೆ ಅದೆಂದೂ ಉತ್ಪ್ರೇಕ್ಷೆಯಾಗಲಾರದು.

ಹಾಗಾದರೆ ಆಯಿಶಾರವರಿಗೆ ಸುಮಾರು ಹದಿನೆಂಟು ಪ್ರಾಯವಾಗುವವರೆಗಾದರೂ ಪ್ರವಾದಿ(ಸ)ರವರಿಗೆ ಕಾಯಬಹುದಾಗಿತ್ತಲ್ಲವೇ ಎಂದು ನೀವು ಕೇಳಬಹುದು. ಆದರೆ ಇದೊಂದು ಅಪ್ರಸ್ತುತ ಪ್ರಶ್ನೆಯಾಗಿದೆ. ಯಾಕೆಂದರೆ ಒಂಬತ್ತನೇ ವಯಸ್ಸಿನಲ್ಲಿ ವಿವಾಹವಾದರೂ ಪ್ರವಾದಿ(ಸ)ರವರು ಆಕೆಯೊಂದಿಗೆ ದಾಂಪತ್ಯವನ್ನು ಆರಂಭಿಸಿದ್ದು ಆಕೆಗೆ ಹನ್ನೊಂದು ಪ್ರಾಯ ತುಂಬಿದ ನಂತರವಾಗಿತ್ತು. ಆದ್ದರಿಂದ ಪ್ರವಾದಿ(ಸ)ರವರೊಂದಿಗೆ ಆಯಿಶಾರಿಗೆ ಲಭಿಸಿದ ದಾಂಪತ್ಯ ಬದುಕು ಕೇವಲ ಎಂಟು ವರ್ಷಗಳಷ್ಟು ಮಾತ್ರವಾಗಿದ್ದವು. ಅವರ ವಯಸ್ಸು ಹೆಚ್ಚಿದಂತೆ ಅವರಿಗೆ ಲಭಿಸುವ ದಾಂಪತ್ಯ ಬದುಕು ಕ್ಷೀಣಿಸುತ್ತಲೇ ಸಾಗುತ್ತದೆ. ಹದಿನೆಂಟನೇ ವಯಸ್ಸಿನಲ್ಲಿ ವಿವಾಹವಾಗಿದ್ದರೆ ಅವರಿಗೆ ಲಭಿಸಬಹುದಾದ ದಾಂಪತ್ಯ ಬದುಕು ಕೇವಲ ಒಂದು ವರ್ಷ ಮಾತ್ರವಾಗಿರುತ್ತಿತ್ತು. ಅವರು ಅಷ್ಟೊಂದು ಬುದ್ಧಿಶಾಲಿಯಾಗಿದ್ದೂ ಕೂಡ ಈ ಒಂದು ವರ್ಷದ ಅವಧಿಯಲ್ಲಿ ಪ್ರವಾದಿ(ಸ)ರವರ ಸಂಪೂರ್ಣ ಖಾಸಗಿ ಬದುಕನ್ನು ಕಲಿಯಲು ಅವರಿಗೆ ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ.

ಇದಾಗಿವೆ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಲು ಇದ್ದ ಕಾರಣಗಳು. ಪೂರ್ವಗ್ರಹ ಮತ್ತು ಪಕ್ಷಪಾತವನ್ನು ಮಾರು ದೂರವಿಟ್ಟು ಸತ್ಯವನ್ನು ಕಂಡುಕೊಳ್ಳಬೇಕೆಂಬ ಅದಮ್ಯ ಆಕಾಂಕ್ಷೆಯಿರುವ ಯಾವನೇ ವ್ಯಕ್ತಿಗೂ ಪ್ರವಾದಿ(ಸ)ರವರ ವಿವಾಹಗಳಲ್ಲಿ ಯಾವ ಕೊರತೆಯೂ ಕಾಣಲಾರದು.