Powered By Blogger

Tuesday 26 August 2014

ಫೆಲೆಸ್ತೀನ್ ಪರ ದನಿಯೆತ್ತಿದ ಲಿಯೊನೆಲ್ ಮೆಸ್ಸಿ


ಇಸ್ರೇಲ್-ಗಾಝಾ ಸಂಘರ್ಷದಲ್ಲಿ ಫೆಲೆಸ್ತೀನ್ ಸಂತ್ರಸ್ತರ ಪರವಾಗಿ ದನಿಯೆತ್ತಿದ ಬಳಿಕ ಖ್ಯಾತ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಸ್ವತಃ ತಾನೆ ಸಂತ್ರಸ್ತನಾಗಿದ್ದಾರೆ. ಗಾಝಾದಲ್ಲಿನ ಹಿಂಸೆ ಕೊನೆಗೊಳ್ಳಬೇಕೆಂದು ಅರ್ಜೆಂಟೀನ ಮತ್ತು ಬಾರ್ಸಿಲೋನ ತಾರೆ ತನ್ನ ಫೇಸ್‌ಬುಕ್ ಪುಟದಲ್ಲಿ ಕರೆನೀಡಿದ್ದರು. ತನ್ನ ಫೇಸ್‌ಬುಕ್ ಪುಟದಲ್ಲಿ ಮೆಸ್ಸಿ ಗಾಯಗೊಂಡ ಫೆಲೆಸ್ತೀನ್ ಬಾಲಕನೊಬ್ಬನ ಚಿತ್ರವನ್ನು ಹಾಕಿದ್ದರು. ಇದರಿಂದ ಅಸಮಾಧಾನಗೊಂಡ ಇಸ್ರೇಲಿ ಪರ ಸಾಮಾಜಿಕ ಜಾಲತಾಣಗಳ ಬಳಕೆದಾರರು ಇಸ್ರೇಲಿ ಸಂತ್ರಸ್ತರ ಪರವಾಗಿಯೂ ಇದೇ ರೀತಿಯ ಹೇಳಿಕೆಯನ್ನು ನೀಡುವಂತೆ ಮೆಸ್ಸಿಯನ್ನು ಒತ್ತಾಯಿಸಿದ್ದಾರೆ. ‘‘ಈ ಸಂಘರ್ಷಕ್ಕೆ ಮಕ್ಕಳು ಕಾರಣರಲ್ಲ. ಆದರೆ, ಇದಕ್ಕೆ ಬೆಲೆ ತೆರುತ್ತಿರುವವರು ಮಕ್ಕಳು. ಈ ಮತಿಹೀನ ಹಿಂಸಾಚಾರದ ಸರಪಳಿ ನಿಲ್ಲಬೇಕು. ಸೇನಾ ಸಂಘರ್ಷಗಳ ಪರಿಣಾಮಗಳ ಬಗ್ಗೆ ನಾವು ಯೋಚಿಸಬೇಕು ಹಾಗೂ ಮಕ್ಕಳನ್ನು ರಕ್ಷಿಸಬೇಕು’’ ಎಂದು ಮೆಸ್ಸಿ ಹೇಳಿದ್ದಾರೆ. ‘‘ಓರ್ವ ತಂದೆಯಾಗಿ ಹಾಗೂ ಯೂನಿಸೆಫ್ ಸದ್ಭಾವನಾ ರಾಯಭಾರಿಯಾಗಿ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷ ಹುಟ್ಟುಹಾಕಿರುವ ಪರಿಸ್ಥಿತಿಯನ್ನು ನೋಡಿ ನಾನು ನಡುಗಿಹೋಗಿದ್ದೇನೆ. ಇಲ್ಲಿನ ಹಿಂಸೆ ಈವರೆಗೆ ಅದೆಷ್ಟೋ ಎಳೆಯ ಜೀವಗಳನ್ನು ಹೊಸಕಿ ಹಾಕಿದೆ ಹಾಗೂ ಅಸಂಖ್ಯ ಮಕ್ಕಳನ್ನು ಗಾಯಗೊಳಿಸಿದೆ’’ ಎಂದು ಆಗಸ್ಟ್ 7ರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಫುಟ್ಬಾಲ್ ತಾರೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪರ ಸಾಮಾಜಿಕ ತಾಣ ಬಳಕೆದಾರರು, ಗಾಝಾದಿಂದ ಹಾರಿಸಲಾದ ಮೋರ್ಟಾರ್ ಶೆಲ್ ದಾಳಿಯಲ್ಲಿ ಹತನಾಗಿರುವ ಇಸ್ರೇಲ್‌ನ ನಾಲ್ಕು ವರ್ಷದ ಮಗು ಡೇನಿಯಲ್ ಟ್ರೆಗರ್‌ಮನ್ ಘಟನೆಯನ್ನೂ ಖಂಡಿಸುವಂತೆ ಮೆಸ್ಸಿಗೆ ಕರೆ ನೀಡಿದ್ದಾರೆ. ಈಗ ಮೆಸ್ಸಿಯ ಮೂಲ ಫೇಸ್‌ಬುಕ್ ಪೋಸ್ಟನ್ನು ತೆಗೆದಿರುವಂತೆ ಕಾಣುತ್ತಿದೆ. ಆದರೆ, ಮೆಸ್ಸಿ ಅಭಿಮಾನಿ ಪುಟಗಳಲ್ಲಿ ಅದನ್ನು ಈಗಲೂ ನೋಡಬಹುದಾಗಿದೆ. ಮೆಸ್ಸಿ ಅಭಿಮಾನಿಯಾಗಿರುವ ಟ್ರೆಗರ್‌ಮನ್, ಜುಲೈ 8ರಂದು ಇಸ್ರೇಲ್ ಫೆಲೆಸ್ತೀನ್ ಮೇಲೆ ಬಾಂಬ್ ದಾಳಿ ನಡೆಸಲು ಆರಂಭಿಸಿದಂದಿನಿಂದ ಮೃತಪಟ್ಟ ಏಕೈಕ ಇಸ್ರೇಲ್‌ನ ಮಗು ಎನ್ನಲಾಗಿದೆ. ಮೆಸ್ಸಿಯ ಬಾರ್ಸಿಲೋನ ಜರ್ಸಿಯನ್ನು ಧರಿಸಿರುವ ಮಗುವಿನ ವಿವಿಧ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಲಾಗಿದೆ. ಸಂಘರ್ಷದಲ್ಲಿ ಈವರೆಗೆ ಕನಿಷ್ಠ 2,097 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ. ಅವರ ಪೈಕಿ ಹೆಚ್ಚಿನವರು ಮಕ್ಕಳೇ ಆಗಿದ್ದಾರೆ. 68 ಇಸ್ರೇಲಿಗರೂ ಪ್ರಾಣ ಕಳೆದುಕೊಂಡಿದ್ದಾರೆ.

Saturday 23 August 2014

BAN BAJRANG DAL


Dear Narendra Modi ji, you can be a secular leader like former prime minister Atal Bihari Vajpayee? "Vajpayee was also from the RSS but he was a modern man and he realized India has to be kept together. He had to forget the RSS ideology and carry every religion together. If you are secular leader prove it, Ban Bajarang Dal arrest this inhuman tendency of Bajarang Dal for celebrating the death of U R Ananthamurthy sir by firing crackers in the city, This is a very awkward act of Bajrang Dal. In entire India people are telling that DK is a district with intelligent and highly educated people. But now we have to bow our head in front of them. As a human i request you, please take hard action for this inhuman Terror. Jai Hind, Abu Mohammad Ayan

Saturday 16 August 2014

ನಿಮ್ಮ ಕೈಯಲ್ಲಿ ದುಡ್ಡು ನಿಲ್ಲೋದಿಲ್ಲ.. ಯಾಕೆ ಗೊತ್ತಾ..? ಇಲ್ಲಿವೆ ನಿಜವಾದ 5 ಕಾರಣಗಳು


ನಾವು ಇಷ್ಟು ಸಂಬಳ ಪಡೆದರೂ ದುಡ್ಡೇ ಉಳಿಸಲು ಆಗುತ್ತಿಲ್ಲವಲ್ಲ ಎಂದು ಅಲವತ್ತುಕೊಳ್ಳುವವರ ಸಂಖ್ಯೆ ಸಿಕ್ಕಾಪಟ್ಟೆ ಇದೆ. ಸಂಬಳ ಜಾಸ್ತಿಯಾದರೂ ತಿಂಗಳಾಂತ್ಯದಲ್ಲೇ ಅದೇ ಪರದಾಟ.. ಮುಂದಿನ ಸಂಬಳಕ್ಕಾಗಿ ತಡಕಾಟ... ಯಾಕೆ ಹೀಗೆ..? 1) ಕಟ್ಟದೇ ಉಳಿಸಿಕೊಳ್ಳೋದು... ಪ್ರತೀ ತಿಂಗಳು ನೀವು ಕಟ್ಟಬೇಕಾದ್ದನ್ನ ಬಾಕಿ ಉಳಿಸಿಕೊಳ್ಳುವುದು.. ನಿಗದಿತ ಅವಧಿಯೊಳಗೆ ಕಟ್ಟದೇ ದಂಡ ಹಾಕಿಸಿಕೊಂಡು ಪಾವತಿ ಮಾಡುವ ಅಭ್ಯಾಸವಿದ್ದರೆ ಕಷ್ಟಕಷ್ಟ... ನಿಮ್ಮ ಸ್ವಭಾವವನ್ನ ಬದಲಿಸಿಕೊಳ್ಳೋದು ಒಳ್ಳೇದು.. 2) ಪದೇಪದೇ ಸಾಲ ಮಾಡುವುದು.. ನಿಮ್ಮ ಅಗತ್ಯ ಮತ್ತು ಆಕಾಂಕ್ಷೆ ನಡುವಿನ ವ್ಯತ್ಯಾಸವನ್ನ ಗುರುತಿಸಿ ಮಧ್ಯಕ್ಕೆ ಗೆರೆ ಹಾಕಿಕೊಳ್ಳಿ. ನಿಮಗೆ ಅಗತ್ಯವೆನಿಸಿದ್ದಕ್ಕೆ ಮಾತ್ರ ಖರ್ಚು ಮಾಡುವ ಅಭ್ಯಾಸ ಮಾಡಿಕೊಳ್ಳಿ. ಕ್ರೆಡಿಟ್ ಕಾರ್ಟ್ ಇದೆಯಲ್ಲಾ ಅಂತ ದುಬಾರಿ ಖರೀದಿ ಮಾಡುವ ಪ್ರವೃತ್ತಿ ಇದ್ದರೆ ಈಗಲೇ ಅದರಿಂದ ಹೊರಬನ್ನಿ. ಸಾಲದ ಹೊರೆ ಹೆಚ್ಚಾದರೆ ನಿಮ್ಮ ಸೇವಿಂಗ್ ಪ್ರಮಾಣ ಕುಸಿಯುತ್ತದೆ... 3) ಶಾಪಿಂಗ್ ಹುಚ್ಚು.. ಹೊಸ ಡಿಸೈನ್ ಬಂದಿದೆ ಎಂದು ಆಕರ್ಷಕ ಜಾಹೀರಾತು ನೀಡುವ ಶಾಪಿಂಗ್ ಮಾಲ್'ಗಳತ್ತ ಕಣ್ಣು ಹಾಯಿಸದಿರುವುದೇ ಲೇಸು... ಐಟಂ ಚಂದ ಇದ್ದರೆ ಎಷ್ಟೇ ದುಡ್ಡು ಕೊಟ್ಟಾದರೂ ಅದನ್ನ ಖರೀದಿಸುವ ಛಲ ನಿಮ್ಮಲ್ಲಿದ್ದರೆ ಕಷ್ಟಕಷ್ಟ... ಐಟಂನ ಬೆಲೆ ನೋಡಿ ಖರೀದಿಸುವುದನ್ನ ರೂಢಿಸಿಕೊಳ್ಳಿ. 4) ಸಾಲದಲ್ಲೂ ಆದ್ಯತೆಗಳು... ಆದ್ಯತೆಗಳ ಮೇರೆಗೆ ನಿಮ್ಮ ಸಾಲಗಳನ್ನ ವರ್ಗೀಕರಿಸುತ್ತಿದ್ದೀರೆಂದರೆ ಸ್ವಲ್ಪ ಜಾಗೂರಕತೆಯಿಂದ ಇರುವುದು ಒಳ್ಳೆಯದು. ಯಾಕೆಂದರೆ, ನೀವು ನಿಮ್ಮ ಕೈಲಾಗುವುದಕ್ಕಿಂತ ಬಹಳ ಹೆಚ್ಚೇ ಪ್ರಮಾಣದಲ್ಲಿ ಸಾಲ ಮಾಡಿರುವುದು ಅದರ ಅರ್ಥ. ನೀವು ಮಾಡಿರುವ ಎಲ್ಲಾ ಸಾಲಗಳನ್ನ ಆದಷ್ಟೂ ಬೇಗ ತೀರಿಸುವುದರತ್ತ ಗಮನ ಹರಿಸುವುದು ಒಳ್ಳೆಯದು... 5) ಬ್ಯಾಕಪ್ ಹಣ ಇಲ್ಲ... ಸರ್ಕಾರೀ ಬಜೆಟ್'ಗಳಲ್ಲಿ ಅಥವಾ ಯಾವುದಾದರೂ ಸಂಸ್ಥೆಗಳಲ್ಲಿ ಎಮರ್ಜನ್ಸಿ ಫಂಡ್ ಅಂತ ಇಟ್ಟುಕೊಂಡಿರುತ್ತಾರೆ. ತುರ್ತು ಸಂದರ್ಭಗಳಲ್ಲಿ ಈ ಹಣ ಉಪಯೋಗಕ್ಕೆ ಬರುತ್ತದೆ. ನಿಮ್ಮಲ್ಲಿ ಇಂಥ ಬ್ಯಾಕಪ್ ಹಣ ಇಲ್ಲದಿದ್ದಲ್ಲಿ ಬಹಳ ಕಷ್ಟ. ಒಂದು ವೇಳೆ ನಿಮ್ಮ ಕೆಲಸ ಹೋದಾಗ, ಅಥವಾ ಇನ್ಯಾವುದಾದರೂ ಸಂದರ್ಭದಲ್ಲಿ ನೀವು ಆರು ತಿಂಗಳಾದರೂ ತಾಳಿಕೊಂಡು ಇರಬಲ್ಲಷ್ಟು ಬ್ಯಾಕಪ್ ಹಣ ನಿಮ್ಮಲ್ಲಿರಬೇಕು. ಹೀಗಾಗಿ, ನಿಮ್ಮ ಬ್ಯಾಕಪ್ ಹಣದ ಮೊತ್ತವನ್ನ ಏರಿಸುವುದರತ್ತಲೇ ನಿಮ್ಮ ಗಮನ ಇರಬೇಕು.

Tuesday 12 August 2014

BUBBLE WORDS


ⒶⒷⒸⒹⒺⒻⒼⒽⒾⒿⓀⓁⓂⓃⓄⓅⓆⓇⓈⓉⓊⓋⓌⓍⓎⓏ ⒶⒷⒸⒹⒺⒻⒼⒽⒾⒿⓀⓁⓂⓃⓄⓅⓆⓇⓈⓉⓊⓋⓌⓍⓎⓏ

Monday 11 August 2014

HIGH ALERT EBOLA VIRUS

ಕೈಕುಲುಕಿದ್ರೆ ಬರುತ್ತೆ ಜ್ವರ..! 21 ದಿನಗಳಲ್ಲಿ ಸತ್ತೇ ಹೋಗ್ತೀರಾ, ಭಾರತಕ್ಕೆ ಕಾಲಿಟ್ಟಿದೆ ಭಯಾನಕ ರೋಗ ನವದೆಹಲಿ(ಆಗಸ್ಟ್.09): ಹಂದಿ ಜ್ವರ, ಹಕ್ಕಿ ಜ್ವರ ಭೀತಿ ಬಳಿಕ ಇದೀಗ ವಿಶ್ವಕ್ಕೆ ಮಾರಕ ರೋಗವೊಂದು ವಕ್ಕರಿಸಿದೆ. ಅದೇ ಎಬೋಲಾ. ಈ ಜ್ವರ ಬಂದರೆ ಸಾವೇ ಗತಿ. ಮಾನವ ಕುಲವನ್ನೇ ಸಾಮೂಹಿಕವಾಗಿ ನಾಶ ಮಾಡುವ ಮತ್ತೊಂದು ಸೋಂಕು ಇದಾಗಿದ್ದು, ಜಗತ್ತಿನಾದ್ಯಂತ ಹಬ್ಬತೊಡಗಿದೆ. ಮಾನವ ಕುಲಕ್ಕೇ ಕಂಟಕವಾಗಿದೆ ಎಬೋಲಾ!: ಹೌದು.. ಕೆಲವು ತಿಂಗಳುಗಳಿಂದ ದಕ್ಷಿಣ ಆಫ್ರಿಕಾದ ಗಿನಿ ಪ್ರದೇಶದಿಂದ ಈ ಹೊಸ ರೋಗ ಎಬೋಲಾದ ಸೂಕ್ಷ್ಮಾಣು ಜೀವಿಗಳು ಹರಡತೊಡಗಿವೆ. ಯಾವ ಚಿಕಿತ್ಸೆಗೂ ಬಗ್ಗದೆ ಜಗತ್ತಿನಾದ್ಯಂತ ತನ್ನ ಪ್ರಾಬಲ್ಯ ಮೆರೆಯತೊಡಗಿದೆ. ಇದರಿಂದ ಇಡೀ ಜಗತ್ತೇ ಕಂಗಾಲಾಗಿ ನಿಂತಿದೆ. ಎಬೋಲಾ ಅನ್ನೋದು ವೈರಾಣುವಿನಿಂದ ಬರುವ ಮಾರಕ ಜ್ವರ. ಈ ಎಬೋಲಾ ಔಷಧ, ಲಸಿಕೆಯಿಲ್ಲದ ಮಾರಣಾಂತಿಕ ಕಾಯಿಲೆ. ಸೋಂಕು ತಗುಲಿದ 10ರಲ್ಲಿ 9 ರೋಗಿಗಳಿಗೆ ಸಾವು ಖಚಿತ. ರೋಗ ಬಂದ 21 ದಿನದಲ್ಲಿ ರೋಗಿಯೂ ಸಾಯ್ತಾನೆ. ಎಬೋಲಾ ಲಕ್ಷಣಗಳೇನು?: ಸ್ನಾಯು ಬಿಗಿತ, ಸಿಡಿತ, ತಲೆನೋವು, ತಲೆಸುತ್ತು, ಗಂಟಲು ಬೇನೆ, ಅತಿಸಾರ, ನಿಶ್ಯಕ್ತಿ, ಜ್ವರ ಆರಂಭಿಕ ಲಕ್ಷಣಗಳಾಗಿವೆ. ಅಲ್ಲದೇ, ಜ್ವರ, ಕೈಕಾಲು ನೋವು, ಆಮಶಂಕೆ, ಕರುಳು ಬೇನೆ, ಕಿಡ್ನಿ ವೈಫಲ್ಯ, ದೇಹದ ಒಳಭಾಗ, ಕಿವಿ, ಮೂಗಿನಲ್ಲಿ ರಕ್ತ ಸ್ರಾವ ಉಂಟಾಗುತ್ತೆ. ಈ ಎಲ್ಲ ಲಕ್ಷಣಗಳ ಜೊತೆಗೆ ಎಬೋಲಾ 2 ದಿನದಿಂದ 2 ವಾರದೊಳಗೆ ವ್ಯಕ್ತಿಯಲ್ಲಿ ಗೋಚರವಾಗುತ್ತದೆ. ಈ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಎಬೋಲಾ ಹೇಗೆ ಹರಡುತ್ತೆ..? :ಎಬೋಲಾ ಪೀಡಿತರ ಕಣ್ಣೀರು, ಬೆವರು, ರಕ್ತ, ವಾಂತಿ ಮತ್ತು ಲೈಂಗಿಕ ಸಂಪರ್ಕದಿಂದ ಬಹುಬೇಗ ಹರಡುತ್ತೆ. ಕೋತಿ ಬಾವಲಿಯ ರಕ್ತದ ಸೋಂಕು ತಗುಲಿದರೂ ಈ ರೋಗ ಹರಡುತ್ತೆ. ಶೇಕ್ ಹ್ಯಾಂಡ್ನಿಂದಲೂ ಬೆವರು ತಾಕುವ ಸಾಧ್ಯತೆ ಇದೆ. ಅಲ್ಲದೆ, ಗಾಳಿ, ನೀರು, ರಕ್ತದ ಮೂಲಕವೂ ಈ ವೈರಸ್‌ ಹರಡಬಲ್ಲದು. ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆಯೂ ವೈರಸ್ ಹರಡುವ ಸಾಧ್ಯತೆ ಇದೆ. ಆಫ್ರಿಕಾದಲ್ಲಿ ತೀವ್ರಗೊಂಡಿದೆ ಎಬೋಲಾ!: ಇಲ್ಲಿಯವರೆಗೂ ವಿವಿಧ ದೇಶಗಳಲ್ಲಿ ಅದರಲ್ಲೂ ಹೆಚ್ಚಾಗಿ ದಕ್ಷಿಣ ಆಫ್ರಿಕಾದ ರಾಜ್ಯಗಳಲ್ಲಿ ಈ ಮಾರಕ ರೋಗ ತೀವ್ರವಾಗಿ ಹಬ್ಬತೊಡಗಿದೆ. ಇಲ್ಲಿಯವರೆಗೆ ಎಬೋಲಾಕ್ಕೆ 900ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಆಫ್ರಿಕಾ ದೇಶಗಳಿಂದ ವಿವಿಧ ದೇಶಗಳಿಗೆ ತೆರಳುವ ಮಂದಿಯ ಮೂಲಕ ವೈರಸ್‌ ಹರಡಲು ಕಾರಣವಾಗಿದೆ. ದಕ್ಷಿಣ ಆಫ್ರಿಕಾದ ಲಿಬೆರಿಯಾ, ಗಿನಿಯಾ ಮತ್ತು ಸಿಯೆರ್ರಾ ಲಿಯೊನ್ ಗಳಲ್ಲಿ ಎಬೋಲಾ ತನ್ನ ಕೆನ್ನಾಲಿಗೆ ಚಾಚಿದೆ. ಸದ್ಯ ಅಮೆರಿಕ ಮತ್ತು ಬ್ರಿಟನ್‌ನಲ್ಲೂ ಎಬೋಲಾದ ಕೆಲ ಪ್ರಕರಣಗಳು ಪತ್ತೆಯಾಗಿವೆ. ಇನ್ನೂ ಆತಂಕದ ವಿಷ್ಯ ಅಂದ್ರೆ ಸದ್ಯ ಎಬೋಲಾದಿಂದ ತತ್ತರಿಸಿರುವ ದೇಶಗಳಲ್ಲಿ 45 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರಿದ್ದಾರೆ. ಈ ರೋಗಕ್ಕೆ ಔಷಧಿಯೇ ಇಲ್ಲ..! : ಇನ್ನೂ ಆತಂಕದ ವಿಷ್ಯ ಅಂದ್ರೆ ಈ ಮಾರಣಾಂತಿಕ ಎಬೋಲಾ ಜ್ವರಕ್ಕೆ ಸೂಕ್ತ ಔಷಧಿಯೇ ಇಲ್ಲ. ರೋಗ ಲಕ್ಷಣವನ್ನು ಗಮನಿಸಿ, ಸಾಮಾನ್ಯ ಚಿಕಿತ್ಸಾ ಕ್ರಮವನ್ನೇ ಅನುಸರಿಸಲಾಗುತ್ತಿದೆ. ಆದರೆ, ದಿನೇ ದಿನೇ ವೈರಾಣು ವ್ಯಾಪಕವಾಗಿ ಹಬ್ಬುತ್ತಿರುವುದು ಚಿಂತೆಗೀಡುಮಾಡಿದೆ. ಭಾರತದಲ್ಲಿ ಹೈ ಅಲರ್ಟ್ ಘೋಷಣೆ: ಭೀಕರ ಎಬೋಲಾ ಎಲ್ಲೆಡೆ ಹರಡುವ ಭೀತಿ ಇರುವುದರಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪಶ್ಚಿಮ ಆಫ್ರಿಕಾ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಇನ್ನು ಈ ಸಂಬಂಧ ಅಮೆರಿಕ ಮತ್ತು ಬ್ರಿಟನ್‌ಗಳ ವಿಮಾನ ನಿಲ್ದಾಣಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ದೆಹಲಿಯ ಮೂವರಲ್ಲಿ ಈ ಸೋಂಕು ಇರುವುದು ದೃಢಪಟ್ಟಿದ್ದು, ಭಾರತದಲ್ಲೂ ಆತಂಕ ಹೆಚ್ಚುವಂತೆ ಮಾಡಿದೆ.