Powered By Blogger

Monday 10 October 2011

MANGALOREANSFORU

MANGALOREANSFORU

Januma Janumadallu-Maleya Haniyu

ನೂರು ರೂಪಾಯಿ ದಂಡ ಕಟ್ಟಿದ ಅಮೀರ್ ಖಾನ್



ಮುಂಬೈ : ಬಾಲಿವುಡ್ ತಾರೆ ಅಮೀರ್ ಖಾನ್ ಟ್ರಾಫಿಕ್ ನಿಯಮದ ಉಲ್ಲಂಘನೆಗಾಗಿ ನೂರು ರೂಪಾಯಿ ದಂಡ ಪಾವತಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಮುಂಬೈನ ಸತಾರಾ ಪ್ರದೇಶದಲ್ಲಿ  ಅಮೀರ್ ಖಾನ್  ತನ್ನ ಸಿಲ್ವರ್ ಬಣ್ಣದ ಬಿ.ಎಂ.ಡಬ್ಲ್ಯು ಕಾರಿನಲ್ಲಿ ತನ್ನ ಕುಟುಂಬದ ಜೊತೆ ವಿಹಾರಕ್ಕೆ ಹೊರಟಿದ್ದರು. ಆ ಸಮಯದಲ್ಲಿ ಅಮೀರ್ ಕಾರು ನೋ ಎಂಟ್ರಿ ಮಾರ್ಗ ಪ್ರವೇಶಿಸಿತು . ಇದನ್ನು ಕಂಡ ಟ್ರಾಫಿಕ್ ಪೋಲಿಸ್ ಅಮೀರ್ ಖಾನ್ ಅವರಿಗೆ ನೂರು ರೂಪಾಯಿ ದಂಡ ವಿಧಿಸಿರುವುದಾಗಿ ಸತಾರಾ ಟ್ರಾಫಿಕ್ ಉಸ್ತುವಾರಿ ಅಧಿಕಾರಿ ಕೆ.ಎನ್. ಪಾಟೀಲ್ ತಿಳಿಸಿದ್ದಾರೆ .
ಕಾರು ನೋ ಎಂಟ್ರಿ ರಸ್ತೆಯಲ್ಲಿ ಪ್ರವೇಶಿಸುತ್ತಿದ್ದಂತೆ ಕಾರನ್ನು ಕಂಡ ಟ್ರಾಫಿಕ್ ಪೋಲಿಸ್ ಅಧಿಕಾರಿ ಕಾರ್ ನಿಲ್ಲಿಸಿದ್ದಾರೆ. ಮತ್ತು ನೂರು ರೂಪಾಯಿ ದಂಡ ವಿಧಿಸಿದ್ದಾರೆ.ಆ ಕೂಡಲೇ ಅಲ್ಲಿಗೆ ಬಂದ ಅಮೀರ್ ಅಂಗರಕ್ಷಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು . ಕೂಡಲೇ ಆ ಸಮಯದಲ್ಲಿ ವಾಹನದಿಂದ ಇಳಿದು ಬಂದು ಮಧ್ಯಪ್ರವೇಶಿಸಿದ ಅಮೀರ್ ಖಾನ್ ನೂರು ರೂಪಾಯಿ ದಂಡ ಪಾವತಿಸಿದರು ಎಂದು ಪಾಟೀಲ್ ತಿಳಿಸಿದ್ದಾರೆ.

ಕೇಂದ್ರ ಸರಕಾರದಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ರಾಷ್ಟ್ರಪತಿ



ನವದೆಹಲಿ : ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರಿಗೆ ಕೇಂದ್ರ ಸರಕಾರವು ೬ ಕೋಟಿ ರೂ ಮೌಲ್ಯದ ಲೀಮೂ ಮರ್ಸಿಡೀಸ್ ಬೆಂಜ್ ಎಸ್ ೬೦೦ ಎಲ್ ಫುಲ್ ಮ್ಯಾನ್ ಕಾರೊಂದನ್ನು ಗಿಫ್ಟ್ ರೂಪದಲ್ಲಿ ನೀಡಿದೆ.
ಈ ಕಾರು ಅನೇಕ ವಿಶೇಷತೆಗಳನ್ನ ಹೊಂದಿದ್ದು ಸೇನಾ ಗುಣಮಟ್ಟವನ್ನು ಹೊಂದಿದೆ. ಗುಂಡು ನಿರೋಧಕ ಶಕ್ತಿ, ಹ್ಯಾಂಡ್ ಗ್ರನೆಡ್ ಸ್ಪೋಟಕಗಳ ದಾಳಿಯನ್ನು ಎದುರಿಸುವ ಶಕ್ತಿ ಹಾಗೂ ಅತೀ ಆಧುನಿಕ ತಂತ್ರಜ್ಞಾನವನ್ನು ಓಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ರಾಯಲ್ ಸಿಮೆ ರೆಡ್ಡಿಯ ರಾಯೇಲ್ ಲೈಫ್ ಸ್ಟೈಲ್



ಆಂದ್ರದ ರೋಯೇಲ್ ಸೀಮೆ ಅನ್ನೋ ಹೆಸರು ಕೇಳಿದಾಕ್ಷಣ ಅಲ್ಲಿನ ಜನರು ಅವರ ಧಿಮಾಕು ಕಡಕ್ ವ್ಯಕ್ತಿತ್ವ ಆಡಂಬರ ಜೀವನ ಕಣ್ಣೆದುರು ಬಂದು ಹೋಗುತ್ತೆ. ರೋಯೇಲ್ ಸೀಮೆಯ ಬಗ್ಗೆ ಗೊತ್ತಿಲ್ಲದಿದ್ದರೆ ತೆಲುಗು ಚಿತ್ರಗಳನ್ನ ನೋಡಿದರೆ ಗೊತ್ತಾಗುತ್ತೆ ಅಲ್ಲಿನ ಜನ ಜನ ನಾಯಕ ಹೇಗಿರುತ್ತಾನೆ ಎಂದು. ಹೌದು ನಾವು ಹೇಳ ಹೊರಟಿದ್ದು ಕರ್ನಾಟಕದ ಮಾಜಿ ಮಂತ್ರಿ ಹಾಗೂ ಪ್ರಸ್ತುತ ಚಂಚಳಗೊಂಡ ಜೈಲ್ ನಲ್ಲಿ ಇರೋ ಜನಾರ್ದನ ರೆಡ್ಡಿ ಗಾರು ಅವರ ಬಗ್ಗೆ.
ಜನಾರ್ದನ ರೆಡ್ಡಿ ಮೂಲತಃ ಆಂದ್ರದ ರೋಯೇಲ್ ಸೀಮೆಯವರು ಅವರಲ್ಲಿ ಕೂಡ ರೋಯೇಲ್ ಸೀಮಾ ಜನರ ಎಲ್ಲಾ ಹವಾ ಬಾವ ಅದೇ ಜಬರ್ದಸ್ತು ಅದೇ ಸ್ಟೈಲ್ ಎಲ್ಲಾ ಇತ್ತು. ರೆಡ್ಡಿ ಅವರ ಜೀವನ ಸ್ಟೈಲ್ ದೇವೇಂದ್ರನನ್ನ ನಾಚಿಸುವಂತಿತ್ತು. ಕರ್ನಾಟಕ, ಆಂದ್ರದಲ್ಲಿ ಅಕ್ರಮ ಗಣಿಗಾರಿಕೆ ಮಾಡಿ ಅದೆಷ್ಟೋ ಕೋಟಿಯಷ್ಟು ಸಂಪತ್ತನ್ನ ಲೂಟಿ ಮಾಡಿ ಮಾಡಿದಂತ ಹಣವನ್ನ ತನ್ನ ರೋಯಲ್ ಲೈಫ್ ಸ್ಟೈಲ್ ಗೆ ಬಳಸಿಕೊಂಡರು. ರೆಡ್ಡಿಯ ಮನೆ “ಕುಟೀರ” ಹೆಸರಿಗೆ ಮಾತ್ರ ಕುಟೀರ ಆದ್ರೆ ದೇವೇಂದ್ರನ ದೇವಲೋಕಕ್ಕೆ ಸವಾಲೆಸೆಯುವಂತಿತ್ತು.
ಅ ಭರ್ಜರಿ ಅರಮನೆ ಬರೋಬ್ಬರಿ ೫ ಎಕರೆ ಪ್ರದೇಶವನ್ನ ಆವರಿಸಿಕೊಂಡ ಈ ಬಂಗಲೆ ಪೂರ್ತಿ ಏರ್ ಕಂಡೀಶನ್ ನಿಂದ ಕೊಡಿದೆ, ಬಂಗಲೆಯಲ್ಲಿ ಸಿನಿಮಾ ಥಿಯೇಟರ್ ಕೂಡ ಇತ್ತು, ಮನೆ ಪ್ರವೇಶ ಅಸ್ಟೊಂದು ಸುಲಭವಾಗಿರಲಿಲ್ಲ, ರೆಡ್ಡಿಯ ಅತೀ ಆಪ್ತರಿಗೆ ಮಾತ್ರ ಬಂಗಲೆ ಪ್ರವೇಶವಿತ್ತು, ಮನೆಯಲ್ಲಿ ಇದ್ದ ವಸ್ತುಗಳು ಯಾವುದೂ ಭಾರತದಲ್ಲ ಎಲ್ಲಾ ವಿದೇಶಿ, ಒಂದೊಂದು ವಸ್ತುವು ಕೋಟಿ ಕೋಟಿ ಬೆಲೆ ಬಾಳುವಂತದ್ದು, ರೆಡ್ಡಿ ಮನೆಯ ಹಾಲ್ ನಲ್ಲಿ ಒಂದು ತಿರುಪತಿ ತಿಮ್ಮಪ್ಪನ ಫೋಟೋ ಇತ್ತು ಅದರ ಬೆಲೆ ಎಷ್ಟು ಗೊತ್ತಾ ? ಬರೋಬ್ಬರಿ ಒಂದು ಕೋಟಿ ರೂಪಾಯಿ, ತಿರುಪತಿ ತಿಮ್ಮಪ್ಪನ ಪರಮ ಭಕ್ತರು ಕೊಡ ಹೌದು ರೆಡ್ಡಿ ಬ್ರದರ್ಸ್. ರೆಡ್ಡಿಗೆ ಅವರ ಮನೆಯಲ್ಲಿ ಕಡಿಮೆ ಅಂದರೆ ಒಂದು ಕೋಟಿ ನಗದು ಇರಬೇಕಿತ್ತು, ಇಲ್ಲಾ ಅಂದ್ರೆ ರೆಡ್ಡಿಗೆ ನೆಮ್ಮದಿ ಇರುತ್ತಿರಲಿಲ್ಲವಂತೆ. ಸಿ ಬಿ ಐ ನವರು ಡಾಳಿ ಮಾಡುವಾಗಲೂ ಅವರಿಗೆ ಒಂದು ಕೋಟಿ ನಗದು ರೆಡ್ಡಿ ಮನೆಯಲ್ಲಿ ಸಿಕ್ಕಿತು. ರೆಡ್ಡಿ ಕುಳಿತು ಕೊಳ್ಳುತ್ತಿದುದು ಸಿಂಹಾಸನದ ಮೇಲೆ, ಆ ಸಿಂಹಾಸನದ ಬೆಲೆ ಕೇವಲ ೨ ಕೋಟಿ, ಯಾರಾದರು ವಿ ಐ ಪಿ ಗಳು ಮನೆಗೆ ಬಂದರೆ ಆ ಸಿಂಹಾಸನದಲ್ಲಿ ಕುಳಿತು ಮಾತಾಡೋದು ರೆಡ್ಡಿ ಸ್ಟೈಲ್ ರೆಡ್ಡಿ. ಅವರಿಗೆ ಚಿನ್ನ ಅಂದ್ರೆ ಅಪಾರವಾದ ಪ್ರೀತಿ, ಆದರೆ ಮೈಮೇಲೆ ಒಂದು ತೊಟ್ಟು ಚಿನ್ನವನ್ನ ರೆಡ್ಡಿ ದರಿಸುತ್ತಿರಲಿಲ್ಲ, ಚಿನ್ನದ ತಟ್ಟೆಯಲ್ಲೇ ರೆಡ್ಡಿ ಊಟ ಮಾಡ್ತಿದ್ರು. ರೆಡ್ಡಿ ಮನೆಯವರು ಚಿನ್ನದ ಬಟ್ಟಲಿನಲ್ಲಿ ಊಟ ಮಾಡ್ತಿದ್ರು ಕುಡಿಯುವ ನೀರಿನ ಲೋಟ ಬೆಳ್ಳಿದ್ದು ಜನಾರ್ದನ ರೆಡ್ಡಿ ಯವರ ಮನೆ ಹೆಸರು “ಚಿನ್ನ” ಅಂತ ಚಿನ್ನ ಅಂದ್ರೆ ತೆಲುಗಿನಲ್ಲಿ ಬಂಗಾರ ಅಂತ. ರೆಡ್ಡಿ ಜಗತ್ತಿನ ಐಶಾರಾಮಿ ಕಾರ್ ಗಳನ್ನ ಹೊಂದಿದ್ದ. ಐಶಾರಾಮಿ ಬಸ್ ಒಂದಿತ್ತು ಅದರ ಹೆಸರು “ರುಕ್ಮಿಣಿ” ಹೆಲಿಕಾಪ್ಟರ್ ಹೆಸರು ಕೂಡ “ರುಕ್ಮಿಣಿ”, ಅವರು ಅತೀ ಹೆಚ್ಚು ಪ್ರಿತಿಸುತಿದ್ದುದು ಆ ಹೆಲಿಕಾಪ್ಟರ್ ಅನ್ನು. ಅವ್ರು ಅತೀ ಹೆಚ್ಚು ರುಕ್ಮಿಣಿಯನ್ನ ಬಳಸಿಕೊಂಡದ್ದು ಬೆಂಗಳೂರ್ ಟು ಬಳ್ಳಾರಿ ಮಾರ್ಗದಲ್ಲಿ. ಬೆಂಗಳೂರಿಗೆ ಹೋಗಿ ಬರಲು ತಗಲುತ್ತಿದ್ದ ವೆಚ್ಚ ರೆಡ್ಡಿ ಪ್ರಕಾರ ಜುಜುಬಿ ೬೦,೦೦೦. ರೆಡ್ಡಿ ಡ್ರೆಸಿಂಗ್ ಸ್ಟೈಲ್ ಕೂಡ ಅಷ್ಟೇ ಐಶಾರಾಮಿ ಅವರ ಹತ್ತಿರ ೩೦೦ ಕ್ಕೂ ಹೆಚ್ಚು ಸೂಟುಗಳಿದ್ದವು.
ಇದು ರೆಡ್ಡಿ ಲೈಫ್ ಸ್ಟೈಲ್, ಬಳ್ಳಾರಿಯನ್ನ ಲೂಟಿ ಮಾಡಿದ ರೆಡ್ಡಿಗಳು ಒಂದು ಹೊತ್ತಿನಲ್ಲಿ ಇಡೀ ಕರ್ನಾಟಕಕವನ್ನ ತಮ್ಮ ಮುಷ್ಟಿಯಲ್ಲಿ ಇಟ್ಟಿದ್ದರು. ಯಡಿಯೂರಪ್ಪ ಅವರ ಕುರ್ಚಿಯನ್ನ ಅನೇಕ ಬಾರಿ ಅಲುಗಾಡಿಸಿ ತಾವೆಷ್ಟು ಪವರ್ ಫುಲ್ ಅನ್ನೋದನ್ನ ತೋರಿಸಿದ್ದರು ಈ ಜನಾರ್ದನ ರೆಡ್ಡಿ.
ಇಂತಹ ರೆಡ್ಡಿ ಈಗ ಜೈಲಿನಲ್ಲಿ ಇದ್ದಾರೆ, ಪಾಪದ ಹಣ ಯಾವತ್ತೂ ಕ್ಷಣಿಕ ಮಾತ್ರ, ಕೊನೆ ತನಕ ಇರಲು ಸಾದ್ಯವಿಲ್ಲ ಅನ್ನೋದು ಇಲ್ಲ್ಲಿ ಸಾಬಿತಾಗುತ್ತೆ.

ಸಂಜೀವ್ ಭಟ್ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಪಾಪ್ಯುಲರ್ ಫ್ರಂಟ್ ವತಿಯಿಂದ ಪ್ರತಿಭಟನೆ




ಶಿವಮೊಗ್ಗ : ೨೦೦೨ ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ಪಾತ್ರವನ್ನು ಬಯಲಿಗೆಳೆದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಬಂಧಿಸಿ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಗುಜರಾತ್ ಸರ್ಕಾರದ ಕ್ರಮವನ್ನು ಖಂಡಿಸಿ ಮತ್ತು ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು .
ನಗರದ ಅಮೀರ್ ಅಹ್ಮದ್ ವೃತ್ತದಿಂದ ಮೆರವಣಿಗೆ ಮೂಲಕ  ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಪರ್ವೇಜ್ ಅಹ್ಮದ್ , ಉಪಾಧ್ಯಕ್ಷ ತಬ್ರೀಜ್ ಮತ್ತು ಪ್ರಧಾನ ಕಾರ್ಯದರ್ಶಿ ಶಾಹಿದ್ ಖಾನ್ ವಹಿಸಿದ್ದರು .

ಸಂಜೀವ್ ಭಟ್ ಗೆ ಗುಜರಾತ್ ಐಪಿಎಸ್ ಅಧಿಕಾರಿಗಳ ಸಂಘದ ಬೆಂಬಲ



ನಿರ್ಣಯ ಕೈಗೊಂಡ ನಂತರ ಸಂಜೀವ್ ಭಟ್ ಅವರ ಮನೆಗೆ ಭೇಟಿ ನೀಡಿದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ತಂಡ

ಅಹಮದಾಬಾದ್ : ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ ಐಪಿಎಸ್ ಅಧಿಕಾರಿಗಳ ಸಂಘ ಅಮಾನತ್ತಾಗಿ ಜೈಲಿನಲ್ಲಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಸಂಜೀವ್ ಭಟ್ ಅವರ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ . ನಿನ್ನೆ ಇಲ್ಲಿ ನಡೆದ ಐಪಿಎಸ್ ಅಧಿಕಾರಿಗಳ ಸಂಘದ ಸಭೆಯಲ್ಲಿ ಸಂಜೀವ್ ಭಟ್ ಅವರಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಣಯ ಕೈಗೊಳ್ಳಲಾಯಿತು.

ನಿರ್ಣಯ ಕೈಗೊಂಡ ನಂತರ ಸಂಜೀವ್ ಭಟ್ ಅವರ ಮನೆಗೆ ಭೇಟಿ ನೀಡಿದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ತಂಡ ಸಂಘದ ನಿರ್ಣಯವನ್ನು ನಮಗೆ ತಿಳಿಸಿದ್ದಾಗಿ ಸಂಜೀವ್ ಭಟ್ ಪತ್ನಿ ಶ್ವೇತಾ ಹೇಳಿದ್ದಾರೆ. ಸದ್ಯಕ್ಕೆ ಜೈಲಿನಲ್ಲಿರುವ ಸಂಜೀವ್ ಭಟ್ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ.