Powered By Blogger

Wednesday 26 October 2011

ಮದನಿ ವಿಷಯದಲ್ಲಿ ಆದ ನ್ಯಾಯ ನಿರಾಕರಣೆ ಇನ್ನಾರ ಜೊತೆ ಆಗಿಲ್ಲ – ಡಾ : ಎಸ್. ಬಲರಾಮನ್



ಪತ್ನಿ ಮಕ್ಕಳೊಂದಿಗೆ ಮದನಿ
ಕೊಲ್ಲಂ ( ಕೇರಳ ) : ಪಿಡಿಪಿ ಪಕ್ಷದ ನಾಯಕ ಅಬ್ದುಲ್ ನಾಸಿರ್ ಮದನಿ ಮತ್ತು ಅವರ ಕುಟುಂಬದ  ಜೊತೆ ನಡೆದಂತಹ ನ್ಯಾಯ ನಿರಾಕರಣೆ ದೇಶದಲ್ಲಿ ಇನ್ನಾರ ಜೊತೆಯಲ್ಲೂ ಆಗಿಲ್ಲ ಎಂದು ಮಾನವ ಹಕ್ಕುಗಳ ಆಯೋಗದ ಮಾಜಿ ಕಾರ್ಯಾಧ್ಯಕ್ಷ ಡಾ : ಎಸ್ . ಬಲರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಜಸ್ಟೀಸ್ ಫಾರ್ ಮದನಿ ಫೋರಂ ಕೊಲ್ಲಂ ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ  ಫ್ರೀ ಮದನಿ ಬುಲೆಟಿನ್ ಇಂಗ್ಲೀಷ್ ಆವೃತ್ತಿಯೊಂದನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು .
ಜಸ್ಟೀಸ್ ಫಾರ್ ಮದನಿ ಫೋರಂ ಸಂಘಟನೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಸೆಬಾಸ್ಟಿಯನ್ ಪೌಲ್ ಅಂಗವಿಕಲರಾದ ಮದನಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ  ಕಳೆಯುತ್ತಿದ್ದಾರೆ .  ಅವರ ಪರ ವಾದ ಮಾಡುವಂತೆ ಹಲವು ಪ್ರಖ್ಯಾತ ವಕೀಲರನ್ನು ಸಂಪರ್ಕಿಸಿದಾಗ ಅವರು ಕೇಸ್ ತೆಗೆದುಕೊಳ್ಳಲು  ನಿರಾಕರಿಸಿದರು . ಈ ಕೇಸ್ ತೆಗೆದುಕೊಂಡರೆ ನ್ಯಾಯಾಲಯದಲ್ಲಿ  ಹಾಗೂ ಸಮಾಜದಲ್ಲಿ ಒಂದು ರೀತಿಯ ತಪ್ಪಿತಸ್ಥ ಭಾವನೆಯಿಂದ ಇತರರು ನೋಡುತ್ತಾರೆ ಎಂಬ ಉದ್ದೇಶದಿಂದ ಅವರು ವಕಾಲತ್ತು ವಹಿಸಲು ನಿರಾಕರಿಸಿದರು ಎಂದರು . ಮದನಿ ಅವರನ್ನು ಬೆಂಗಳೂರು  ಬಾಂಬ್ ಸ್ಪೋಟದ ಮೂವತ್ತೊಂದನೇ ಆರೋಪಿ ಎಂಬ ಆರೋಪದ ಮೇಲೆ ಆಗಸ್ಟ್ ೨೦೧೦ ರಂದು ಬಂಧಿಸಿ ಬೆಂಗಳೂರಿನ ಜೈಲಿನಲ್ಲಿಡಲಾಗಿದೆ. ಇಲ್ಲಿ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಅವರ ಅರ್ಜಿ ತಿರಸ್ಕೃತವಾದ ಕಾರಣ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು ಇನ್ನೂ ಅದು ವಿಚಾರಣೆಗೆ ಬರಬೇಕಿದೆ.

ಶಹೀದ್ ಎ ಮಿಲ್ಲತ್ ಹಝ್ರತ್ ಟಿಪ್ಪು ಸುಲ್ತಾನ್ (ರ.ಅ) ರವರ 219 ನೇ ಉರೂಸ್ ಸಮಾರ೦ಭ



ಶ್ರೀರಂಗಪಟ್ಟಣ : ಅಕ್ಟೋಬರ್   27,2011 ರ೦ದು ಶ್ರೀರ೦ಗಪಟ್ಟನದ ಗುಂಬಜ್  -ಎ-ಶಾಹಿ- ಗ೦ಜಮ್ ನಲ್ಲಿ ಶಹೀದ್ ಎ ಮಿಲ್ಲತ್  ಹಝ್ರತ್ ಟಿಪ್ಪು ಸುಲ್ತಾನ್  (ರ.ಅ) ರವರ 219 ನೇ ಉರೂಸ್  ಸಮಾರ೦ಭ ನಡೆಯಲಿದೆ ಎ೦ದು ಪ್ರೊ ಡಾ : ಮುಮ್ತಾಜ್ ಅಲೀ ಖಾನ್ ( ಮಾಜಿ ಸಚಿವರು ) , ಅಧ್ಯಕ್ಷರು , (ಹಝ್ರತ್ ಟಿಪ್ಪು ಸುಲ್ತಾನ್  ವಕ್ಫ್ ಎಸ್ಟೇಟ್ ಡೆವಲಪ್ ಮೆಂಟ್ ಕಮಿಟಿ )ತಿಳಿಸಿದ್ದಾರೆ.

ಅತಿಥಿಗಳಾಗಿ  ಜನಾಬ್ ಅಲ್ ಹಾಜ್ ಕೆ ರಹಮಾನ್ ಖಾನ್ ಸಾಹೇಬ್ ( ಉಪ ಸಭಾಪತಿಗಳು , ರಾಜ್ಯಸಭೆ ), ಜನಾಬ್ ಅಬ್ದುಲ್ ರಿಯಾಜ್ ಖಾನ್ ಸಾಹೇಬ್ ( ಅಧ್ಯಕ್ಷರು , ಕರ್ನಾಟಕ ವಕ್ಫ್ ಮಂಡಳಿ )  ,ಜನಾಬ್ ಡಾ ಮುಹಮ್ಮದ್ ಯೂಸುಫ್ ಸಾಹೇಬ್ ( ಸದಸ್ಯರು . ಕರ್ನಾಟಕ ವಕ್ಫ್ ಮಂಡಳಿ ) , ಜನಾಬ್ ಮುಹಮ್ಮದ್ ಸನಾಉಲ್ಲಾ ಸಾಹೇಬ್ ( principle secretrary ,D.P.A.R., govt of karnataka),ಜನಾಬ್ ಜಮೀರ್ ಪಾಶ  ಸಾಹೇಬ್   (I.A.S., secrecary, minority welfare dept, govt of karnataka) ,ಜನಾಬ್  ಅನೀಸ್  ಸಿರಾಜ್  ಸಾಹೇಬ್  (K.A.S chief executive officer karnatka state board wakf bangalore)  ಭಾಗವಹಿಸಲಿದ್ದಾರೆ .ಸ೦ದಲ್ ಮೆರವಣಿಗೆ  ಮಸ್ಜಿದ್-ಎ-ಆಲ ,ಶ್ರೀರ೦ಗಪಟ್ಟಣದಿ೦ದ  3.30 pm  ಕ್ಕೆ  ಹೊರಟು  ಗುಂಬಜ್ -ಎ-ಶಾಹಿ ಗೆ ಸಂಜೆ 5.೩೦ಕ್ಕೆ  ತಲುಪಲಿದೆ.

ಪಿ.ಎಫ್.ಐ ರಾಜ್ಯಾದ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆಗೆ “ಬಸವಶ್ರೀ” ಪ್ರಶಸ್ತಿ


ಬೆಂಗಳೂರು : ದಲಿತ್ ಪ್ಯಾಂಥರ್ಸ್ ಆಫ್ ಇಂಡಿಯಾ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆದಿತ್ಯವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಬಸವಶ್ರೀ” ಪ್ರಶಸ್ತಿ ಸ್ವೀಕರಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಮಾತನಾಡುತ್ತಾ ದಲಿತರು ಮತ್ತು ಮುಸ್ಲಿಮರು ಒಂದಾದರೆ ದೇಶದಲ್ಲಿ ಸಾಮಾಜಿಕ ಕ್ರಾಂತಿ ದೊಡ್ಡ ಮಟ್ಟಿನಲ್ಲಿ ನಡೆಸಬಹುದು ಎಂದರು.
ದಲಿತರು ಮತ್ತು ಮುಸ್ಲಿಮರನ್ನು ದಮನಿಸುವ ನಿಟ್ಟಿನಲ್ಲಿ ವ್ಯವಸ್ತಿತ ಷಡ್ಯಂತರಗಳು ನಡೆಸಲಾಗುತ್ತಿವೆ. ದಲಿತರು ಮತ್ತು ಮುಸ್ಲಿಮರು ಭಾರತದ ನಿಜವಾದ ಮೂಲ ವಾಸಿಗಳು ಎಂದ ಅವರು, ನಾವು ಯಾವುದೇ ಆಸ್ತಿಮಾಡುವ ಉದ್ದೇಶದ ಹೋರಾಟ ಅಲ್ಲ ಸಂವಿದಾನ ನಮಗೆ ನೀಡಿದ ನ್ಯಾಯ, ಸಮಾನತೆಯ ಹಕ್ಕುಗಳಿಗಾಗಿ ಹಿಂದುಳಿದವರ, ತುಳಿತಕ್ಕೊಳಗಾದ ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳು ಸಾಮಾಜಿಕ ನ್ಯಾಯಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ನಮ್ಮನ್ನು ಮೇಲ್ವರ್ಗದವರು ತುಳಿಯುತ್ತಲೇ ಬಂದಿದ್ದಾರೆ ಅವರ ವಿರುದ್ದ ದಲಿತರು ಧ್ವನಿ ಎತ್ತಿದರೆ ನಕ್ಸಲೀಯರು ಎಂದೂ ಮುಸ್ಲಿಮರನ್ನು ಭಯೋದ್ಪಾದಕರೆಂದು ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಮುದಾಯಗಳ ಮದ್ಯೆ ಮೆಲ್ವರ್ಗಗಳು ವೈಮನಸ್ಸು ಉಂಟು ಮಾಡುವ ಷಡ್ಯಂತ್ರ ದ ಭಾಗವಾಗಿ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಮತ್ತು ಸ್ವಾತಂತ್ರ್ಯ ವೀರ ಹೋರಾಟಗಾರ ಟಿಪ್ಪು ಸುಲ್ತಾನ್ ರ ವಿರುದ್ದ ಅಪಪ್ರಚಾರಗಳು ನಡೆಸಲಾಗುತ್ತಿದೆ ಅದಕ್ಕೆಲ್ಲ ಕಿವಿ ಕೊಡಬಾರದು ಟಿಪ್ಪು ಒಬ್ಬ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಎಂಬುವುದು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಈ ಸಮಾರಂಭದಲ್ಲಿ ಕರ್ನಾಟಕ ಜನಾಂದೋಲನದ ರಾಜ್ಯಾದ್ಯಕ್ಷ ಮರಿಯಪ್ಪ, ದಲಿತ್ ಪ್ಯಾಂಥರ್ಸ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಗರಾಜ್ ಮತ್ತು ಸಂಘಟನೆಯ ಗಣ್ಯರು ಪಾಲ್ಗೊಂಡಿದ್ದರು.

ಪ್ರವಾಸಿ ಇಂಗ್ಲೆಂಡ್ ವಿರುದ್ದ ಸರಣಿ ಕ್ಲೀನ್‌ಸ್ವೀಪ್‌ ಮಾಡಿ ಸೇಡು ತೀರಿಸಿ ಕೊಂಡ ಭಾರತ

ವಿಜಯದ ಸಂಭ್ರಮದಲ್ಲಿ ಟೀಂ ಇಂಡಿಯಾ..
ಕೋಲ್ಕತಾ : ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ದ ಸರಣಿಯ ಕೊನೆಯ ಪಂದ್ಯವನ್ನೂ ಗೆಲ್ಲುವ ಮೂಲಕ ಟೀಂ ಇಂಡಿಯಾದ ಕ್ಲೀನ್‌ಸ್ವೀಪ್‌ ಕನಸು ನನಸಾಗಿದೆ. ಸತತ ಐದೂ ಪಂದ್ಯದಲ್ಲೂ ದಾಖಲಿಸಿದ ಈ ಅಮೋಘ ಗೆಲುವಿನೊಂದಿಗೆ ಧೋನಿ ಪಡೆ ಕಳೆದ ಇಂಗ್ಲಂಡ್‌ ಪ್ರವಾಸದಲ್ಲಿ ಅನುಭವಿಸಿದ್ದ ಮುಖಭಂಗಕ್ಕೆ ಮುಯ್ಯಿ ತೀರಿಸಿಕೊಂಡಿದೆ.
ಸರಣಿ ಶ್ರೇಷ್ಟ ಧೋನಿ ಬ್ಯಾಟಿಂಗ್ ಭಂಗಿ.
ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ಸಾಗಿದ ಮುಖಾಮುಖೀಯಲ್ಲಿ ಆಲ್‌ರೌಂಡ್‌ ನಿರ್ವಹಣೆ ತೋರಿದ ಭಾರತ ತಂಡ ಆಂಗ್ಲರನ್ನು 95 ರನ್‌ ಅಂತರದಿಂದ ಪರಾಭವಗೊಳಿಸಿದೆ. ಟಾಸ್‌ ಸೋತು ಬ್ಯಾಟಿಂಗಿಗೆ ಇಳಿದ ಭಾರತ ತಂಡ ಮಧ್ಯಮ ಸರದಿಯ ಕುಸಿತದ ನಡುವೆ ನಾಯಕ ಧೋನಿ ಅವರ ಜವಾಬ್ದಾರಿಯುತ (69 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅಜೇಯ 75 ರನ್‌) ಆಟದೊಂದಿಗೆ ನಿಗದಿತ ೫೦ ಓವರ್ ಗಳಲ್ಲಿ ೮ ವಿಕೆಟಿಗೆ ೨೭೧ ರನ್‌ ಪೇರಿಸಿತು.
೨೭೨ ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲಂಡ್‌ ತಂಡ ಭರ್ಜರಿ ಆರಂಭ ಕಂಡರೂ ಅನಂತರ ಭಾರತೀಯ ಸ್ಪಿನ್ನರ್ ಗಳ ಬೌಲಿಂಗಿಗೆ ತತ್ತರಿಸಿ ೩೭ ಓವರ್ ಗಳಲ್ಲಿ ಕೇವಲ ೧೭೬ ರನ್ನಿಗೆ ಸರ್ವಪತನ ಕಂಡಿತು. ರವೀಂದ್ರ ಜಡೇಜ ೩೩ ರನ್ನಿಗೆ ೪ ವಿಕೆಟ್‌ ಕಿತ್ತು ಆಂಗ್ಲರಿಗೆ ಕಡಿವಾಣ ಹಾಕಿದರೆ, ಆರ್. ಅಶ್ವಿ‌ನ್‌ ೩ ವಿಕೆಟ್‌ ಪಡೆದರು.
ಪಂದ್ಯಶ್ರೇಷ್ಟ ಜಡೇಜ.
ಇಂಗ್ಲಂಡ್‌ ತಂಡ ಮೊದಲ ೨೦ ಓವರ್ ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ೧೨೯ ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ೨೧ನೇ ಓವರ್ ಎಸೆದ ಯುವ ವೇಗಿ ವರುಣ್‌ ಆರೋನ್‌ ಕುಕ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವುದರೊಂದಿಗೆ ಆಂಗ್ಲರ ಕುಸಿತಕ್ಕೆ ನಾಂದಿ ಹಾಡಿದರು. ನಂತರ ಸ್ಪಿನ್ನರ್ ಗಳಾದ ಜಡೇಜ-ಅಶ್ವಿ‌ನ್‌ ಜೋಡಿಗೆ ನಲುಗಿದ ಪ್ರವಾಸಿಗಳ ಉಳಿದ ಹತ್ತು ವಿಕೆಟ್‌ಗಳು ಕೇವಲ ೪೭ ರನ್‌ ಅಂತರದಲ್ಲಿ ಉರುಳಿದವು.
ನಾಲ್ಕು ವಿಕೆಟ್ ಹಾಗೂ ೨೧ ರನ್ ಗಳಿಸಿದ್ದ ರವಿಂದ್ರ ಜಡೇಜ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರೆ, ಸರಣಿಯುದ್ದಕ್ಕೂ ನಾಯಕನ ಆಟವಾಡಿದ ಧೋನಿ ಸರಣಿ ಶ್ರೇಷ್ಟ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದೇ ೨೯ ರ ಶನಿವಾರ ಇಂಗ್ಲೆಂಡ್ ವಿರುದ್ದದ ಏಕೈಕ T-೨೦ ಪಂದ್ಯ ನಡೆಯಲಿದೆ.

ರಸ್ತೆಗೆ ಬರಲಿದೆ ಮಹೀಂದ್ರ ಮೋಟರ್ಸ್ ರವರ ಹೊಸ XUV500


ಮಹೀಂದ್ರ ಮೋಟರ್ಸ್ ಕಂಪನಿಯವರಿಂದ ರಸ್ತೆಗೆ ಬರಲಿದೆ ಹೊಸ ಸ್ಪೋರ‍್ಟ್ ಯುಟಿಲಿಟಿ ವಾಹನ XUV500. ಈಗಾಗಲೇ ಭಾರಿ ಬೇಡಿಕೆಯಿಂದ ಆನ್‍ಲೈನ್ ಬುಕ್ಕಿಂಗ್ ಮುಗಿದು ಹೊಸ ಬುಕ್ಕಿಂಗ್ ಸ್ವೀಕರೀಸುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತಮ್ಮ  ಬೊಲೆರೋ, ಸ್ಕೋರ‍್ಫಿಯೋ ಮಾಡೆಲ್ ನ ಬೃಹತ್ ಬೇಡಿಕೆಯ ನಂತರ ತನ್ನ ಹೊಸ XUV5OO ಆವೃತ್ತಿಯು ಶೀಘ್ರ ರಸ್ತೆಗೆ ಬರಲಿದೆ. ಈ ಮಾಡೆಲ್ ಗೆ ಚಿರತೆಯ ಕೆಲವು ಲಕ್ಷಣಗಳಿಂದ ನಿರ್ಮಿಸಲಾಗಿದೆ. ಇದರ ಬೆಲೆ ಸುಮಾರು ರೂ 11 ಲಕ್ಷವಾಗಲಿದೆ.

ಉತ್ತರ ಭಾರತೀಯರು ಮತ್ತು ನಿರುಪಮ್ ತಾಕತ್ತಿದ್ದರೆ ಮುಂಬೈ ಬಂದ್ ಮಾಡಿ ತೋರಿಸಲಿ – ಶಿವಸೇನೆ ಸವಾಲು



ಮುಂಬೈ : ಉತ್ತರ ಭಾರತೀಯರು ಮುಂಬೈನ ದಿನನಿತ್ಯದ ಸೇವೆ ನೀಡುವ ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು ಅವರೇನಾದರೂ ವಿಶ್ರಾಂತಿ ಪಡೆಯಲು ಮನಸ್ಸು ಮಾಡಿ ಕೆಲಸ ಸ್ಥಗಿತಗೊಳಿಸಿದರೆ ಮುಂಬೈ ಬಂದ್ ಆಗಲಿದೆ ಎಂಬ ಕಾಂಗ್ರೆಸ್ ಸಂಸದ ಸಂಜಯ್ ನಿರುಪಮ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಕಾರ್ಯಾಧ್ಯಕ್ಷ ಉದ್ಭವ್ ಠಾಕ್ರೆ ಸಂಜಯ್ ನಿರುಪಮ್ ಮತ್ತು ಅವರ ಕಾಂಗ್ರೆಸ್ ಪಕ್ಷ ಮತ್ತು ಉತ್ತರ ಭಾರತೀಯರಿಗೆ ತಾಕತ್ತಿದ್ದರೆ ಮುಂಬೈ ಬಂದ್ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ನಿರುಪಮ್ ಹೇಳಿಗೆ ಖಂಡನೆ ವ್ಯಕ್ತಪಡಿಸಿದ ಅವರು ನಿರುಪಮ್ ಏನಾದರೂ ಮುಂಬೈ ಬಂದ್ ಮಾಡಲು ಯತ್ನಿಸಿದರೆ ಅವರಿಗೆ ಶಿವಸೇನೆ ತಕ್ಕ ಪಾಠ ಕಲಿಸಲಿದೆ ಎಂದೂ ಸಹ ಎಚ್ಚರಿಸಿದ್ದಾರೆ. ನಿರುಪಮ್ ಹೇಳಿಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಆಕ್ಷೇಪ ವ್ಯಕ್ತಪಡಿಸಿದೆ

ದೀಪಾವಳಿಯ ಶುಭ ದಿನವಾದ ಇಂದು ದೀಪ ಹಚ್ಚಲು ಬಂದ ‘ರಾ-ಒನ್’


ಭಾರತಿಯ ಚಿತ್ರ ಲೋಕದ ಬಾದಶ ಶಾರುಖ್ ಖಾನ್ ಅಭಿನಯದ ರಾ-ಒನ್ ಚಿತ್ರ ಇಂದು ೫ ಸಾವಿರ ಚಿತ್ರ ಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆ ಗೊಂಡಿತು. ದೀಪಾವಳಿಯ ಶುಭ ದಿನವಾದ ಇಂದು  ಬಿಡುಗಡೆಗೊಂಡ ಈ ಚಿತ್ರದ ಮೊದಲ ಪ್ರದರ್ಶನವನ್ನು ಸುಮಾರು ೧೫ ಲಕ್ಷ ಜನ ವೀಕ್ಷಿಸುವರು ಎಂದು ಸಮೀಕ್ಷೆಯೊಂದು ತಿಳಿಸಿದೆ. ಬಾಡಿ ಗಾರ್ಡ್ ಚಿತ್ರದ ನಂತರ  ಅತೀ  ಹೆಚ್ಚು ಚಿತ್ರ ಮಂದಿರದಲ್ಲಿ ಬಿಡುಗಡೆ ಗೊಂಡ ಚಿತ್ರ. ರಾ ಒನ್ ದೀಪಾವಳಿ ದಿನವಾದ ಇಂದು ಬಿಡುಗಡೆಗೊಂಡ ಈ ಚಿತ್ರ ಶಾರುಖ್ ಖಾನ್ ಜೀವನದಲ್ಲಿ ದೀಪವನ್ನ ಬೆಳಗಿಸಬಹುದು ಅನ್ನೋದು ಸಿನಿ ಪ್ರಿಯರ ಮಾತು.

ಲಿಬಿಯಾವನ್ನು ಜಗತ್ತಿಗೆ ತೋರಿಸಿದ ಗದ್ದಾಫಿ ಕುತಂತ್ರಿಗಳ ಸಂಚಿಗೆ ಬಲಿಯಾದರೇ ?

 
೧೯೫೦  ರಲ್ಲಿ ಲಿಬಿಯಾ ಜಗತ್ತಿನ ಬಡ ರಾಷ್ಟ್ರಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತ್ತು . ಆದರೆ  ಇಂದು ೨೦೧೧ ರಲ್ಲಿ   ಜಗತ್ತು  ಲಿಬಿಯಾ  ಕಡೆ ನೋಡುತ್ತಿದೆ .  ವಿಶ್ವದ ಶ್ರೀಮಂತ  ರಾಷ್ಟ್ರಗಳ  ಸಾಲಿನಲ್ಲಿ  ಲಿಬಿಯಾ  ಕೂಡ ಬಂದು ನಿಂತಿದೆ  . ಈಗಿನ ಲಿಬಿಯಾದ  ಯಾವೊಬ್ಬ ವ್ಯಕ್ತಿಯೂ ಬಡವನಲ್ಲ . ಈ ಬದಲಾವಣೆಗೆ ಗದ್ದಾಫಿ ಅನ್ನೋ ಸರ್ವಾಧಿಕಾರಿ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ .  ಗದ್ದಾಫಿಗೆ ಒಂದು ಕಾಲದಲ್ಲಿ  ತಲೆ ಬಾಗುತ್ತಿದ್ದ ಅಲ್ಲಿನ ಜನ  ಒಂದು ದಿನ  ಗದ್ದಾಫಿಯ ತಲೆಯನ್ನೇ   ತೆಗೆಯುತ್ತಾರೆ  ಅನ್ನೋದು  ಯಾರೂ  ಊಹಿಸಿರಲು ಸಾಧ್ಯವಿಲ್ಲ.
ಹಾಗಾದರೆ ಗದ್ದಾಫಿ ಅಷ್ಟೊಂದು ಕ್ರೂರಿಯೇ ? ಅಥವಾ ಸ್ವಾರ್ಥಿಯೇ ?  ಹಾಗೇನಾದರೂ ಆಗಿದ್ದರೆ ಲಿಬಿಯಾ  ಅಷ್ಟೊಂದು ಶ್ರೀಮಂತ ರಾಷ್ಟ್ರವಾಗಲು ಸಾಧ್ಯವೇ ? ಈಗ ಎಲ್ಲರೂ   ಗದ್ದಾಫಿಯನ್ನು ದ್ವೇಷಿಸುವವರೇ ಜೊತೆಗೆ ದೂಷಿಸುವವರೇ. ಆದರೆ  ನೇರ ದೃಷ್ಟಿಯಿಂದ ನೋಡಿದರೆ ಲಿಬಿಯಾದ  ಇಷ್ಟೊಂದು  ಶ್ರೀಮಂತಿಕೆಗೆ   ಗದ್ದಾಫಿ ಆಡಳಿತ ಕಾರಣ . ಗದ್ದಾಫಿ   ಸರಕಾರ  ಅಲ್ಲಿ ಮಾಡಿರೋ ಕಾನೂನು  ಹಾಗೂ ಜನರಿಗೆ ನೀಡಿರುವ ಸೌಲಭ್ಯಗಳನ್ನು ನೋಡಿದರೆ ಗದ್ದಾಫಿ   ಕ್ರೂರಿ ,  ಸರ್ವಾಧಿಕಾರಿ   ಅನ್ನೋದು  ಊಹಿಸಲು ಸಾದ್ಯವಿಲ್ಲ .


ಲಿಬಿಯಾದ ಯಾವದೇ ಒಬ್ಬ ವ್ಯಕ್ತಿ  ಒಂದು ಮನೆ ಕಟ್ಟಬೇಕಿದ್ದರೆ  ಅದರ ಖರ್ಚಿನ ಅರ್ಧದಷ್ಟು ಹಣವನ್ನು ಗದ್ದಾಫಿ  ಸರ್ಕಾರ ನೀಡುತ್ತಿತ್ತು . ಹೊಸದಾಗಿ  ಮದುವೆಯಾದ ದಂಪತಿಗಳಿಗೆ  ಸರ್ಕಾರದ ವತಿಯಿಂದ ೫೦೦೦೦ ಡಾಲರ್ ಹಣವನ್ನು ಅವರ ಜೀವನೋಪಾಯಕ್ಕಾಗಿ ನೀಡಲಾಗುತ್ತಿತ್ತು . ವಿದ್ಯಾಭ್ಯಾಸ ಉಚಿತವಾಗಿ ನೀಡಿತ್ತು , ವಿದ್ಯುಚಕ್ತಿ ಬಳಕೆಗೆ ಯಾವುದೇ ರೀತಿಯಲ್ಲಿ ಹಣ ಪಾವತಿಸ ಬೇಕಿರಲಿಲ್ಲ. ಅದೂ ಸಂಪೂರ್ಣ ಉಚಿತವಾಗಿತ್ತು. ಸರಕಾರವನ್ನ  ಪ್ರಶ್ನಿಸುವ ಅಧಿಕಾರವನ್ನು ಸಹ ಗದ್ದಾಫಿ ಜನರಿಗೆ  ನೀಡಿದ್ದರು . ಇನ್ನು   ಲಿಬಿಯಾದ ಯಾವನೇ ಒಬ್ಬ ಪ್ರಜೆಗೆ  ಸಾಲ  ಅನ್ನೋದು  ಇಲ್ಲ  . ಸಾಲ  ಹೊಂದಿರದ ಜನರನ್ನ  ಹೊಂದಿರುವ ರಾಷ್ಟ್ರ  ಲಿಬಿಯಾ . ವಿದೇಶಗಳಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಹೋಗುವವರಿಗೆ ವಿದ್ಯಾಭ್ಯಾಸ ಉಚಿತವಾಗಿತ್ತು. ಹಾಗೆ ಹೋಗುವವರಿಗೆ ಮತ್ತು ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಭತ್ಯೆ ನೀಡಲಾಗುತ್ತಿತ್ತು.ಈ ರೀತಿ ಇನ್ನೂ  ಅನೇಕ ಸವಲತ್ತುಗಳನ್ನ  ಜನರಿಗೆ ಗದ್ದಾಫಿ   ನೀಡಿದ್ದರು  .
ತನ್ನ ಜನರಿಗೆ ಇಷ್ಟೊಂದು ಸವಲತ್ತುಗಳನ್ನು  ನೀಡಿದ ಗದ್ದಾಫಿ ಕ್ರೂರಿಯೇ ?  ಆದರೆ ಗದ್ದಾಫಿಗೆ ತನ್ನದೇ ಆದ  ಕೆಲವೊಂದು ನ್ಯೂನ್ಯತೆಗಳು ಇದ್ದವು .  ನ್ಯೂನ್ಯತೆಗಳು  ಇಲ್ಲದ ಮನುಷ್ಯ   ಜಗತ್ತಿನಲ್ಲಿ  ಇರಲು ಸಾದ್ಯವೇ ?   ಗದ್ದಾಫಿಯ ಸುತ್ತ  ಹುಡುಗಿಯರು  ಅಂಗರಕ್ಷಕರಾಗಿ ಇರುತ್ತಿದ್ದರು , ಗದ್ದಾಫಿ ಆಡಂಬರದ ಜೀವನ  ನಡೆಸುತ್ತಿದ್ದರು . ಹೀಗೆ  ಕೆಲವು ಆಪಾದನೆ ಗಳು  ಇದ್ದವು  . ಇದರ ಲಾಭವನ್ನು ಪಡೆದ  ಕೆಲವರು  ಗದ್ದಾಫಿಯನ್ನ ಕ್ರೂರಿ  ಹಿಂಸಾ ಪ್ರಿಯ ಎಂದು ಅಲ್ಲಿನ ಜನರ ತಲೆ ಕೆಡಿಸಿ  ಆತನ ವಿರುದ್ದ ಅಲ್ಲಿನ ಜನ  ತಿರುಗಿ ಬೀಳುವ ರೀತಿಯಲ್ಲಿ  ಮಾಡಿದರು. ಹಾಗೆ ತಿರುಗಿ ಬಿದ್ದ ಕೆಲ ಜನಗಳಿಗೆ ವಿದೇಶೀ ಶಕ್ತಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜೊತೆ ಗದ್ದಾಫಿ ವಿರುದ್ಧ ದಾಳಿಗೆ ವೈಮಾನಿಕ ನೆರವನ್ನೂ ನೀಡಿತು . ಅವರಿಗೆ ಬೇಕಿದ್ದದ್ದು   ಅಲ್ಲಿನ ಸಂಪತ್ತು   . ಗದ್ದಾಫಿ ಅಧಿಕಾರದಲ್ಲಿ ಇದ್ದಾಗ ಅದು ಸಾಧ್ಯವಾಗಿರಲಿಲ್ಲ. ಲಿಬಿಯಾವನ್ನ ತನ್ನ  ವಶಕ್ಕೆ ಪಡೆಯಲು  ಮಾಡಿದಂತ ಕೆಲವೊಂದು  ರಾಷ್ಟ್ರಗಳ ಒಳ ಸಂಚಿಗೆ ಗದ್ದಾಫಿ  ಬಲಿಯಾದದ್ದು   ಒಂದು   ಕಹಿ  ಕನಸಿನಂತೆ  ಕಂಡು ಬರುತ್ತೆ . ಈಗ ಲಿಬಿಯಾವನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಆ ದುಷ್ಟ ಶಕ್ತಿಗಳು ಸಂಪತ್ತು ಹೊಂದಿರುವ  ಇನ್ನಷ್ಟು ರಾಷ್ಟ್ರಗಳನ್ನು  ತನ್ನ ವಶಕ್ಕೆ ಹಾಕಿಕೊಳ್ಳಲು  ಬೇರೇನಾದರೂ ಕಾರಣಗಳನ್ನ  ಹುಡುಕುವುದರಲ್ಲಿ  ಯಾವುದೇ  ಸಂದೇಹವಿಲ್ಲ .
- ನಿತಿನ್ ರೈ ಕುಕ್ಕುವಳ್ಳಿ. ರಿಯಾದ್ ( ವರದಿಗಾರರು . ವಿಕೆನ್ಯೂಸ್)

ಗಡಾಫಿ ಜೀವನದ ಕೆಲ ಮಹತ್ವಪೂರ್ಣ ಚಿತ್ರಗಳು …

ಟ್ರಿಪೋಲಿ : ಹತ್ಯೆಯಾದ ಲಿಬಿಯಾದ ಮಾಜಿ ಆಡಳಿತಾಧಿಕಾರಿ ಮಮ್ಮರ್ ಗಡಾಫಿ ಜೀವನದ ಕೆಲ ಮಹತ್ವಪೂರ್ಣ ಸಂದರ್ಭದ ಚಿತ್ರಗಳು ಇಲ್ಲಿವೆ. ನೀವೊಮ್ಮೆ ನೋಡಿ

1969ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದ ಚಿತ್ರ