Powered By Blogger

Tuesday 8 November 2011

“ಬಿಗ್ ಬಾಸ್ ” ಪ್ರಪಂಚಕ್ಕೆ ಇಂದು ಸ್ವಾಮಿ ಅಗ್ನಿವೇಶ್ ಪ್ರವೇಶ


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

 
ಮುಂಬೈ :ಸಾಮಾಜಿಕ  ಕಾರ್ಯಕರ್ತ  ಹಾಗೂ  ಅಣ್ಣಾ  ಟೀಮ್  ನಿಂದ ಹೊರಬಿದ್ದ  ಕಾವಿಧಾರಿ   ಸ್ವಾಮಿ ಅಗ್ನಿವೇಶ್   ಇಂದು  ಬಿಗ್ ಬಾಸ್   ರಿಯಾಲಿಟಿ  ಕಾರ್ಯಕ್ರಮಕ್ಕೆ  ಪ್ರವೇಶ  ಮಾಡಲಿದ್ದಾರೆ . ಅಣ್ಣಾ  ಟೀಮ್  ವಿರುದ್ದ  ಸಿಡಿದೆದ್ದ   ಅಗ್ನಿವೇಶ್   ಈ  ಕಾರ್ಯಕ್ರಮದ ಮೂಲಕ ತಾನು ಯುವ ಜನತೆಗೆ ಅಣ್ಣ ತಂಡದ ಸದಸ್ಯರ ಕುರಿತು  ಮಾಹಿತಿ ನೀಡುವುದರ ಜೊತೆಗೆ ಯುವಜನತೆಗೆ ಸಾಮಾಜಿಕ ಪಿಡುಗುಗಳ ಬಗ್ಗೆಯೂ ಜಾಗೃತಿ ಮೂಡಿಸಲು ಯತ್ನಿಸುವುದಾಗಿ ಹೇಳಿದ್ದಾರೆ .
 ಮಾಡೆಲ್  , ನಟಿಯರಿಂದ  ಕೂಡಿರುವ ಈ  ಕಾರ್ಯಕ್ರಮದಲ್ಲಿ  ಈ ಕಾವಿಧಾರಿ   ಯಾವ ರೀತಿಯ ಸಂದೇಶ  ನೀಡುತ್ತಾರೋ  ದೇವರೇ  ಬಲ್ಲ . ಈ ಕಾರ್ಯಕ್ರಮದಲ್ಲಿ  ೫ ನೇ   ಪುರುಷ ಸ್ಪರ್ಧಿ  ಅಗ್ನಿವೇಶ್ .  ಈ ಕಾರ್ಯಕ್ರಮದ  ವಿಶೇಷ ಅಂದರೆ  ಹೆಂಗಳೆಯರ  ಜಗಳ,  ಹೊಡೆದಾಟ, ಅಸಭ್ಯ   ನಡವಳಿಕೆ , ಅಸಭ್ಯ   ಶಬ್ದಗಳ  ಬಳಕೆ  ಇದರ  ನಡುವೆ ಈ ಅಗ್ನಿವೇಶ್  ಸಿಕ್ಕಿ  ಏನಾಗುತ್ತಾರೋ  ?   ಎಷ್ಟು ದಿನ ಈ ಬಿಗ್  ಬಾಸ್  ಮನೆ ಯಲ್ಲಿ  ಇರ್ತಾರೋ ? ಕಾದು ನೋಡೋಣ..ಏನೇ  ಇರಲಿ  ಅಗ್ನಿವೇಶ್   ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಣ್ಣಾ  ಕೆಲವೊಂದು  ಬಾಂಬ್  ಗಳನ್ನು   ಸಿಡಿಸುವುದಂತೂ  ಖಂಡಿತ  .
- ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

ಮೈ ಡಿಯರ್ ಎಕ್ಸ್ ಐ ಮಿಸ್ ಯೂ ಎಂದ ವೀಣಾ ಮಲಿಕ್


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಮುಂಬೈ :  ಪಾಕಿಸ್ತಾನದ ಮೂವರು ಆಟಗಾರರು  ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿ  ಜೈಲು ಪಾಲಾಗುತ್ತಿದ್ದಂತೆ  ಅವರ ಬಗ್ಗೆ  ಅವರ  ಅನೇಕ ಮಂದಿ  ಸ್ನೇಹಿತರು  ಅಭಿಮಾನಿಗಳು  ಬೇಸರ ,ಕೋಪ  ವ್ಯಕ್ತಪಡಿಸುತ್ತಿದ್ದರೆ  ಆಸೀಫ್  ಅವರ ಮಾಜಿ  ಪ್ರೇಯಸಿ  ಪಾಕಿಸ್ತಾನಿ ಮಾಡೆಲ್ , ಬಾಲಿವುಡ್ ನಟಿ ವೀಣಾ ಮಲಿಕ್  ಕೂಡ  ಆಸೀಫ್   ಗೆ ಜೈಲು ಶಿಕ್ಷೆ ಆಗಿರುದರಿಂದ  ತೀವ್ರ  ನೊಂದಿದ್ದು ಆಸೀಫ್ ಐ ಮಿಸ್ ಯೂ ಎಂದಿದ್ದಾರೆ.
ಆಸೀಫ್ ತನ್ನ  ಜೀವನದಲ್ಲಿ ಬಂದ  ವಿಶೇಷ  ವ್ಯಕ್ತಿ  , ಇತ್ತಿಚಿನ ದಿನಗಳಲ್ಲಿ   ಆಸೀಫ್  ನಮ್ಮ ಸಂಬಂಧವನ್ನು   ಮತ್ತೆ  ಜೋಡಿಸಲು ತುಂಬಾ  ಪ್ರಯತ್ನಗಳನ್ನ  ನಡೆಸಿದ್ದರು  ಆದರೆ ನಾನೇ ಅವರನ್ನ ದೂರ ಮಾಡುತ್ತಿದ್ದೆ . ಏಕೆಂದರೆ  ಆಸೀಫ್ ಈಗ  ಬೇರೆ  ಮದುವೆ ಆಗಿದ್ದು ಅವರ  ಜೀವನದಲ್ಲಿ  ಪ್ರವೇಶಿಸಿ  ತಾನು ಕೆಟ್ಟವಳು ಅನ್ನಿಸಿ ಕೊಳ್ಳುವುದು ತನಗೆ   ಬೇಕಾಗಿರಲಿಲ್ಲ  ಎಂದು  ವೀಣಾ ಹೇಳಿದ್ದಾರೆ  . ೨೦೦೮ ರ ತನಕ  ವೀಣಾ ಮತ್ತು ಆಸೀಫ್  ಒಂದೇ ಮನೆಯಲ್ಲಿ  ವಾಸವಾಗಿದ್ದರು ಹಾಗೂ   ಮದುವೆಯಾಗುವ ಮುಂಚೆಯೇ   ಲೀವಿಂಗ್  ಟುಗೆದರ್ ಜೀವನ ನಡೆಸುತ್ತಿದ್ದರು.
ನಾನು ಆಸೀಫ್ ಜೊತೆ  ೨೦೦೮ ರ ತನಕ  ಉತ್ತಮ ಸಂಬಂಧವನ್ನು   ಹೊಂದಿದ್ದೆ . ಆತ  ಯಾವಾಗ  ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ  ಅಂತ ತಿಳಿದು ಬಂತೋ  ಅವತ್ತು ಅವರ ಸಂಬಂಧಕ್ಕೆ  ಕೊನೆ ಹಾಡಿದೆ  ಎಂದು ವೀಣಾ  ತಿಳಿಸಿದರು . ವೀಣಾ  ಬೇರ್ಪಟ್ಟ  ಬಳಿಕ  ಆಸೀಫ್ ಬೇರೆ ಮದುವೆ ಆಗಿದ್ದರು . ಆಸೀಫ್  ಗೆ  ಅನೇಕ ಬಾರಿ  ಎಚ್ಚರಿಕೆ  ನೀಡಲು ನಾನು ಬಯಸಿದ್ದೆ  ಮತ್ತು ಅದರಂತೆ ಎಚ್ಚರಿಕೆ ಕೂಡ ನೀಡಿದ್ದೆ.ಆದರೆ ಆತ  ಅದನ್ನ  ಕೇಳಲಿಲ್ಲ  . ಅದಕ್ಕೆ ನಾನೇ ಆತನಿಂದ ದೂರವಾದೆ  ಎಂದು ವೀಣಾ ಮಲಿಕ್  ತಿಳಿಸಿದರು .  ಆಸೀಫ್ ಪತ್ನಿಯ ಬಗ್ಗೆ  ಹೇಳಿದ ವೀಣಾ  ಮದುವೆಗೆ  ಮುಂಚೆ  ಅವರು ನನಗೆ  ಫೋನ್ ಮಾಡಿ ನನ್ನ ಹಾಗೂ  ಆಸೀಫ್  ಸಂಬಂಧ ದ ಬಗ್ಗೆ ವಿಚಾರಿಸಿದ್ದರು  . ಅವರನ್ನ ಆಸೀಫ್ ಜೊತೆ ಮದುವೆ  ಆಗುವಂತೆ ನಾನೇ  ಸೂಚಿಸಿದ್ದೆ .  ಆಸೀಫ್ ನ  ಈ  ಸ್ಥಿತಿ  ಗೆ ಸ್ವತಃ ಆಸೀಫ್  ಅವರೇ ಕಾರಣ  ಎಂದು  ವೀಣಾ ಬೇಸರ ವ್ಯಕ್ತ ಪಡಿಸಿದ್ದಾಳೆ .
ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

ಹಾಜಿಗಳು ಮಕ್ಕಾದ ಅರಫಾತ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ದ್ರಶ್ಯ


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಲಕ್ಷಾಂತರ ಮುಸ್ಲಿಮ್ ಯಾತ್ರಿಕರು ಶನಿವಾರ ಮಕ್ಕಾ ಮಸೀದಿಯ  ಸಮೀಪದ ಅರಫಾತ್‌ನಲ್ಲಿರುವ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಭವ್ಯ ಚಿತ್ರ.

ಕೋಲ್ಕತ್ತ ಪ್ರವೇಶಿಸಲಿರುವ ರೋನಲ್ದೋ..


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಜಗತ್ತಿನ  ಪ್ರಸಿದ್ದ  ಫುಟ್ಬಾಲ್ ಆಟಗಾರ  ಬ್ರಿಜಿಲ್  ತಂಡದ  ಮಾಜಿ ಆಟಗಾರ  ರೋನಲ್ದೋ  ಕೋಲ್ಕತ್ತಕ್ಕೆ ಬಂದು ಪ್ರದರ್ಶನ ಪಂದ್ಯದಲ್ಲಿ  ಪಾಲ್ಗೊಳಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.  ಡಿಸೆಂಬರ್  ನಲ್ಲಿ   ನಡೆಯುವ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಲು ರೋನಲ್ದೋ  ಭಾರತ  ಕ್ಕೆ ಬರಲಿದ್ದಾರೆ, ಎಂದು ಸುದ್ದಿ ಮಾಹಿತಿ ಪ್ರಸಾರ ಮಾಡಿದೆ. ಭಾರತದಲ್ಲಿ  ರೋನಾಲ್ಡ್  ಅವರಿಗೆ ಅಪಾರ  ಅಭಿಮಾನಿ ಬಳಗವಿದ್ದು, ರೋನಲ್ದೋ  ಆಗಮನ ಎಲ್ಲರಲ್ಲೂ  ಹೊಸ ಸಂಚಲನವನ್ನ  ಮೂಡಿಸುವಂತಿದೆ. ರೋನಲ್ದೋ ಜೊತೆ  ಬ್ರಿಜಿಲ್  ವಿಶ್ವ ಕಪ್  ವಿಜೇತ  ತಂಡದ  ನಾಯಕ  ಕ್ಹಫು ಕೂಡ  ಆಗಮಿಸಲಿದ್ದಾರೆ. ಈ ಪ್ರದರ್ಶನ ಪಂದ್ಯ ಭಾರತಿಯ ಚಲನ ಚಿತ್ರ  ನಟರು ಹಾಗು ಮಾಜಿ  ಫುಟ್ಬಾಲ್ ಆಟಗಾರರ  ಮದ್ಯೆ ನಡೆಯಲಿದ್ದು  ಭಾರತಿಯ   ಫುಟ್ಬಾಲ್ ತಂಡದ ಮಾಜಿ  ನಾಯಕ ಬೈಚುಂಗ್ ಭುತಿ ಯವರು   ಪಾಲ್ಗೊಳ್ಳಲಿದ್ದಾರೆ.
- ನಿತಿನ್ ರೈ  ಕುಕ್ಕುವಳ್ಳಿ  (ವರದಿಗಾರರು ವಿಕೆ ನ್ಯೂಸ್ )

ಮತ್ತೆ ಮುಸ್ಲಿಮರ ಧಾರ್ಮಿಕ ಭಾವನೆ ಕೆದಕಿದ ತಸ್ಲೀಮಾ ! ಈ ಬಾರಿ ದೇವರ ಅಸ್ತಿತ್ವಕ್ಕೆ ಸವಾಲು !


Posted on  by ವಿಶ್ವ ಕನ್ನಡಿಗ ನ್ಯೂಸ್

ಈ ಹಿಂದೆ ಹೈದರಾಬಾದಿನಲ್ಲಿ ಪ್ರತಿಭಟನಾಕಾರರಿಂದ ತಸ್ಲೀಮಾ ಒದೆ ತಿಂದ ದೃಶ್ಯ
ನವದೆಹಲಿ : ಸದಾ ಮುಸ್ಲಿಂ ಹಾಗೂ ಇಸ್ಲಾಂ ವಿರೋಧಿ ಬರವಣಿಗೆಗಳ ಮೂಲಕ ಪ್ರಚಾರ ಪಡೆದ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಇಂದು ಮತ್ತೊಂದು ರೀತಿಯ ಹೇಳಿಕೆಯ ವಿವಾದ ಹುಟ್ಟುಹಾಕಿದ್ದಾರೆ. ಇಡೀ ದೇಶ ಇಂದು ಸಂಭ್ರಮದಿಂದ ಬಕ್ರೀದ್ ಆಚರಿಸಿ ಬಲಿದಾನದ ಸಂಕೇತವಾಗಿ ಕುರ್ಬಾನಿ ನೀಡುತ್ತಿದ್ದರೆ ಇತ್ತ ತಸ್ಲೀಮಾ ಸಾವಿರಾರು ಮೂಕ ಪ್ರಾಣಿಗಳ  ಬಲಿ ಬಯಸುವ ಅಲ್ಲಾಹ್ ಹೇಗೆ ಮಹಾನ್ ಆಗಲು ಸಾಧ್ಯ ಎಂಬ ಹೇಳಿಕೆ ನೀಡಿ ಮತ್ತೆ ಮುಸ್ಲಿಮರ ಧಾರ್ಮಿಕ ಭಾವನೆ ಕೆದಕಿದ್ದಾರೆ.
 ಈಕೆ ಈ ಹಿಂದೆ ವಿವಾದಾತ್ಮಕ ಮುಸ್ಲಿಂ  ವಿರೋಧಿ ಲಜ್ಜಾ ಕಾದಂಬರಿ ಬರೆಯುವ ಮೂಲಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಬಾಂಗ್ಲಾದೇಶದಿಂದ ಗಡಿಪಾರುಗೊಂಡಿದ್ದಳು. ತದನಂತರ ಭಾರತದಲ್ಲಿ ಆಶ್ರಯ ಪಡೆದಿರುವ ತಸ್ಲೀಮಾ ತನ್ನ ಮುಸ್ಲಿಂ ವಿರೋಧಿ ಬರವಣಿಗೆ ಮುಂದುವರೆಸುತ್ತಾ ಬಂದಿದ್ದಾಳೆ. ಈ ಹಿಂದೆ ಹೈದರಾಬಾದಿನಲ್ಲಿ ಈಕೆ ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಕಾರ್ಯಕರ್ತರು ಈಕೆಯ ಮೇಲೆ ಹಲ್ಲೆ ನಡೆಸಿ ಈಕೆಯನ್ನು ಭಾರತದಿಂದ ಗಡಿಪಾರು ಮಾಡುವಂತೆ ಸಹ ಒತ್ತಾಯಿಸಿದ್ದರು.
ಮುಸ್ಲಿಂ ಪುರುಷರು ನಾಲ್ಕು ವಿವಾಹವಾಗಲು ಸಾಧ್ಯವಾಗುವುದಾದರೆ ಮಹಿಳೆ ನಾಲ್ಕು ಪುರುಷರನ್ನು ಮದುವೆ ಏಕಾಗಬಾರದು ಎಂದು ಈ ಹಿಂದೆ ಈಕೆ ಹೇಳಿದ್ದಳು.  ಸನ್ಮಾರ್ಗದಲ್ಲಿ ನಡೆದ ಪುರುಷರಿಗೆ ಸ್ವರ್ಗದಲ್ಲಿ ಎಪ್ಪತ್ತೆರಡು ಸ್ವರ್ಗವಾಸಿ ಕನ್ಯೆಯರು ಸಿಗುತ್ತಾರೆ ಎಂಬ ವಚನವೊಂದನ್ನು ಹಿಯಾಳಿಸಿದ್ದ ಈಕೆ ಈ ಭಾಗ್ಯ ಮಹಿಳೆಯರಿಗೆ ಇಲ್ಲ. ಆದ ಕಾರಣ ಮಹಿಳೆಯರು ಭೂಲೋಕದಲ್ಲೇ ಎಪ್ಪತ್ತೆರಡು ಪುರುಷರ ಜೊತೆ ಸೆಕ್ಸ್ ಮಾಡಬಹುದು ಎಂದಿದ್ದಳು. ಈ ರೀತಿ ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದ ಈಕೆ ಬಾರಿ ಸಾವಿರಾರು ಮೂಕ ಪ್ರಾಣಿಗಳ  ಬಲಿಪಡೆಯುವ ಅಲ್ಲಾಹ್ ಹೇಗೆ ಮಹಾನ್ ಆಗಲು ಸಾಧ್ಯ. ಈ ಬಲಿಗಾಗಿ ಅಲ್ಲಾಹ್ ಈ ಪ್ರಾಣಿಗಳ ಕ್ಷಮೆ ಕೇಳಬೇಕು ಎಂದಿದ್ದಾಳೆ.