Powered By Blogger

Sunday 25 December 2011

Who is the best friend of BOOM BOOM SHAHID AFRIDI??????????????? must wa...

ಯಡ್ಡಿಗೆ ಸಿಎಂ ಡಿ.ವಿ ಸದಾನಂದ ಗೌಡರ ತಿರುಗೇಟಿನ ವ್ಯಂಗ್ಯ ರೂಪ


Posted on  by ರಫೀಕ್ ದಲ್ಕಾಜೆ,ಕೋಲ್ಪೆ


ವ್ಯಂಗ್ಯ ಚಿತ್ರಗಾರ : ವಿಶ್ವನಾಥ್ ಬೆಂಗಳೂರು.

ಪಕ್ಷಕ್ಕೆ ಒಬ್ಬನೇ ನಾಯಕ ಇರಬೇಕು – ಮಾಜಿ ಸಿ ಎಂ, ಆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ – ಸಿ ಎಂ


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬೆಂಗಳೂರು : ಒಂದು ಪಕ್ಷಕ್ಕೆ ಒಬ್ಬನೇ ನಾಯಕ ಇರಬೇಕು. ಬಿಜೆಪಿ ಅಂದ್ರೆ ಯಡಿಯೂರಪ್ಪ ಎಂಬ ನಂಬಿಕೆಯನ್ನು ಜನ ಸಾಮಾನ್ಯರಲ್ಲಿ ಮೂಡಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅವರು ದಾವಣಗೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ಪಕ್ಷ, ಒಂದು ಮನೆ, ಒಂದು ಸಂಸ್ಥೆ ಅಂದ ಮೇಲೆ ಅದಕ್ಕೆ ಒಬ್ಬನೇ ಯಜಮಾನ ಇರಬೇಕು. ಹಲವು ಮಂದಿ ಯಜಮಾನರು ಇದ್ದರೆ ಅಲ್ಲಿ ಯಾವುದು ಸರಿಯಾಗಿ ನಡೆಯುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯವರ ಈ ಹೇಳಿಕೆಗೆ ಗ್ರಹ ಕಚೇರಿ `ಕೃಷ್ಣಾ`ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸದಾನಂದಗೌಡ, ರಾಜ್ಯದಲ್ಲಿ ಏಕವ್ಯಕ್ತಿಯ ನಾಯಕತ್ವ ಬೇಕೊ ಅಥವಾ ಸಾಮೂಹಿಕ ನಾಯಕತ್ವ ಬೇಕೊ ಎಂಬುದನ್ನು ಒಬ್ಬ ವ್ಯಕ್ತಿ ನಿರ್ಧರಿಸಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಷಯದಲ್ಲಿ ನಾನು ತಲೆಹಾಕುವುದಿಲ್ಲ ಎಂದು ಹೇಳಿದರು.