Powered By Blogger

Sunday 16 October 2011

ಸೂರಿಲ್ಲದ ಕುಟುಂಬಕ್ಕೆ ಬೇಕಿದೆ ಸಹೃದಯಿ ದಾನಿಗಳ ಸಹಾಯ




ಮಂಗಳೂರು : ಇದೊಂದು ಕಡು ಬಡಕುಟುಂಬದ ಕತೆಯಿದು,ಅಂಬ್ಲಮೊಗರು ಗ್ರಾ. ಪಂ. ವ್ಯಾಪ್ತಿಯ ಎಲಿಯಾರುಪದವು ಸಮೀಪವಿರುವ ಬೀಜಮಾರುವಿನಲ್ಲಿ ಆಶ್ರಯಕ್ಕೆ ಮನೆಯಿಲ್ಲದೆ ಅಂಗಡಿ ಯಲ್ಲಿ ತಾತ್ಕಾಲಿಕವಾಗಿ ವಾಸವಿರುವ ಇಕ್ಬಾಲ್ -ಆಯಿಷಾ ದಂಪತಿಗಳ ದಾರುಣ ಕತೆ.
ಇನ್ನೂ ಬುದ್ಧಿ ಬೆಳೆಯದ ಮಕ್ಕಳು, ಬಡತನದಿಂದ ಕಂಗೆಟ್ಟಿರುವ ಕುಟುಂಬ. ಒಂದು ಹೊತ್ತಿನ ಊಟಕ್ಕೆ ಪರದಾಡುವಂತಹ ಸ್ಥಿತಿಯಲ್ಲಿರುವ ನಡುವೆ ಸೂರು ಕಲ್ಪಿ ಸಿದ್ದ ಹಳೆಯದಾಗಿದ್ದ ಮಣ್ಣಿನ ಗೋಡೆಯ ಮನೆ ಕುಸಿದುಬೀಳುವು ದರಿಂದ ಇಡೀ ಕುಟುಂಬವನ್ನೇ ಬೀದಿ ಪಾಲಾಗಿಸಿದೆ.
ದಂಪತಿಗೆ ಆಯಿಷಾ ಬಾನು(11), ಅಬ್ದುಲ್ ರಾಝೀಕ್(9), ಅಬ್ದುಲ್ ರಹಿಮಾನ್ (6), ಬದ್ರುದ್ದೀನ್ (4), ರಾಫಿಲ್ (1) ಎಂಬ ಐವರು ಮಕ್ಕ ಳಿದ್ದು, ತಾಯಿ ಆಯಿಶಮ್ಮ ಜತೆಗೆ ವಾಸಿಸುವ ಕುಟುಂಬ ಇವರದ್ದು. ಕೂಲಿ ಕೆಲಸ ನಿರ್ವಹಿಸುತ್ತಿರುವ ಇಕ್ಬಾಲ್ ಸಂಸಾರದ ಹೊಣೆಯನ್ನು ಕೆಲಸದಿಂದ ಗಳಿಸಿದ ಆದಾಯದಿಂ ದಲೇ ನಿರ್ವಹಿಸುತ್ತಿದ್ದಾರೆ. ಕೆಲಸವಿಲ್ಲದ ಸಮಯದಲ್ಲಿ ಊಟಕ್ಕೂ ತೊಂದರೆ ಯಾದಂತಹ ಕ್ಷಣವೂ ಇದೆ. ಇಂತಹ ಸಂಕಷ್ಟದ ಸಮಯದಲ್ಲಿ ಬರ ಎಂಬಂತೆ ಇವರಿದ್ದ ಮನೆಗೆ ಅಪ್ಪಳಿ ಸಿದ ಸಿಡಿಲು ಮನೆ ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಆದರೆ ಬಾಡಿಗೆ ಮನೆ ಮಾಡುವ ತಾಕತ್ತಿರದ ಇಕ್ಬಾಲ್ ಮಕ್ಕಳೊಂದಿಗೆ ದೇವರ ದಯೆ ಎಂಬ ಧೈರ್ಯದಿಂದ ಬಿರುಕು ಬಿಟ್ಟ ನಡುವೆ ಅಪಾಯದೊಂದಿಗೆ ಜೀವನ ನಿರ್ವಹಿಸುತ್ತಿದ್ದರು. ಆದರೆ ಮತ್ತೆ ಬಿರುಕು ಜಾಸ್ತಿಯಾಗುತ್ತಿದ್ದಂತೆ ಹೆದರಿದ ಕುಟುಂಬ ಸ್ಥಳೀಯರ ನೆರವಿನಿಂದ ಮನೆ ಸಮೀಪದಲ್ಲಿರುವ ಖಾಲಿಯಿರುವ ಅಂಗಡಿಯಲ್ಲಿ ವಾಸಿಸಲು ಸ್ಥಳಾವಕಾಶವನ್ನು ಪಡೆದುಕೊಂಡಿತು.
ಅಂಗಡಿ ಮಾಲೀಕರು ಮನೆ ದುರಸ್ತಿಗೊಳಿಸುವವರೆಗೆ ಅಂಗಡಿಯಲ್ಲಿ ಸ್ಥಳಾವಕಾಶ ನೀಡುವುದಾಗಿ ಮುಂಚಿತವಾಗಿ ತಿಳಿಸಿದ್ದರು. ಆದರೆ ಮಂಗಳವಾರ ತಡರಾತ್ರಿ ಬಿದ್ದಂತಹ ಭಾರೀ ಮಳೆಗೆ ಬಿರುಕು ಕಾಣಿಸಿಕೊಂಡಿದ್ದಂತಹ ಮನೆ ಸಂಪೂರ್ಣವಾಗಿ ಮಣ್ಣುಪಾಲಾಯಿತು. ಇದರೊಂದಿಗೆ ವಾಸಿಸಲು ಜಾಗವನ್ನು ನೀಡಿದ ಅಂಗಡಿ ಮಾಲೀಕರೂ ತಮ್ಮ ಮನೆ ದುರಸ್ತಿ ಕಾರ‍್ಯವಿರುವುದರಿಂದ ಅಂಗಡಿಯನ್ನು ದಿನಗಳೊಳಗೆ ಖಾಲಿ ಮಾಡಲು ತಿಳಿಸಿರುವುದು ಬಡ ಇಕ್ಬಾಲ್‌ಗೆ ದಿಕ್ಕು ತೋಚದಂತಾಗಿದೆ. ಇದಕ್ಕಾಗಿ ಸ್ಥಳೀಯ ಪಂಚಾಯತ್ ಮೊರೆ ಹೋದರಾದರೂ ಸರಿಯಾದ ದಾಖಲೆಗಳಿಲ್ಲದೆ ಸರಕಾರದ ಯಾವುದೇ ಸವಲತ್ತು ಸಿಗದು ಎಂಬ ಹಾರಿಕೆಯ ಉತ್ತರ ಅಧಿಕೃತರಿಂದ ದೊರೆತಿದೆ. ಹಲವು ವರ್ಷಗಳಿಂದ ಇದ್ದಂತಹ ನಮ್ಮ ಕುಟುಂಬಕ್ಕೆ ರೇಷನ್ ಕಾರ್ಡ್, ಡೋರ್ ನಂಬರ್ ಇದೆ. ಆದರೆ ದಾಖಲೆಗಳಿಲ್ಲವೆಂಬುದು ನಮ್ಮಲ್ಲಿ ಆಶ್ಚರ್ಯವುಂಟು ಮಾಡಿದೆ ವಿದ್ಯೆಯಿಲ್ಲದೆ ನಾವಂತೂ ಬಡತನದಿಂದ ಕಂಗಾಲಾಗಿದ್ದೇವೆ, ಆದ್ದರಿಂದ ಮಕ್ಕಳಿಗಾದರೂ ಸರಿಯಾದ ವಿದ್ಯೆ ನೀಡಬೇಕೆಂಬುದು ನನ್ನ ಆಸೆ ಈ ಮೂಲಕವಾದರೂ ಬಡತನವನ್ನು ಹೋಗಲಾಡಿಸಬಹುದು ಎಂಬ ಧೈರ್ಯ ತನ್ನಲ್ಲಿದೆ ಎನ್ನುತ್ತಾರೆ ಇಕ್ಬಾಲ್. ಅದಕ್ಕಾಗಿ ಮನೆಯೊಂದನ್ನು ನಿರ್ಮಿಸಲು ಸಹೃದಯಿ ದಾನಿಗಳು, ಸಂಘ ಸಂಸ್ಥೆಗಳು ಮುಂದೆ ಬರಬೇಕಿದೆ.

ಆಡ್ವಾಣಿ ನೇತೃತ್ವದ ರಥಯಾತ್ರೆ 31 ರಂದು ಮಂಗಳೂರಿಗೆ



ಮಂಗಳೂರು : ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಹೊರಟಿರುವ ಎಲ್.ಕೆ.ಆಡ್ವಾಣಿ ನೇತೃತ್ವದ ರಥಯಾತ್ರೆ ಇದೆ ತಿಂಗಳ ೩೧ ರಂದು ಮಂಗಳೂರಿಗೆ ಆಗಮಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಅಕ್ಟೋಬರ್ ೩೧ ರಂದು ಬೆಳಿಗ್ಗೆ ಮಂಗಳೂರಿಗೆ ಆಗಮಿಸಲಿರುವ ಅಡ್ವಾಣಿ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಲಿದ್ದಾರೆ. ೧೦ ಗಂಟೆಗೆ ಸೆಂಟ್ರಲ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ, ಬಳಿಕ ರಥಯಾತ್ರೆ ಉಡುಪಿಯತ್ತ ಸಾಗಲಿದ್ದು, ನವೆಂಬರ್ ಒಂದರಂದು ಕಾರವಾರ ತಲುಪಲಿದೆ ಎಂದು ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರಥಯಾತ್ರೆ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸುಮಾರು ಒಂದು ಸಾವಿರ ಬಿಜೆಪಿ ಕಾರ್ಯಕರ್ತರು ಬೆಳ್ತಂಗಡಿಯಿಂದ ಪಾದಯಾತ್ರೆ ಮೂಲಕ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ `ಅಲ್ಲಾಹು’ ವಿನಲ್ಲಿ ಪ್ರಾರ್ಥಿಸಿ ಎಂದು ಹಜ್ ಯಾತ್ರಿಕರಿಗೆ ಮನವಿ ಮಾಡಿದ ಸಿ.ಎಂ



haj flight (file photo)
 ಬೆಂಗಳೂರು: ಸಮುದಾಯದವರು ಹಜ್ ಯಾತ್ರೆ ಕೈಗೊಂಡಿರುವುದು ತುಂಬಾ ಸಂತೋಷವಾಗಿದೆ. ರಾಜ್ಯವು ಬರಗಾಲ, ವಿದ್ಯುತ್ ಕ್ಷಾಮದಿಂದ ತತ್ತರಿಸಿದೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ `ಅಲ್ಲಾಹು’ ವಿನಲ್ಲಿ ಪ್ರಾರ್ಥಿಸಿ ಎಂದು ಮುಖ್ಯಮಂತ್ರಿ ಡಿ.ವಿ. ಸದಾನದ ಗೌಡ ಇಲ್ಲಿ ಮನವಿ ಮಾಡಿದರು.ಕರ್ನಾಟಕ ರಾಜ್ಯ ಹಜ್ ಸಮಿತಿಯು ನಗರದ ಬೆನ್‌ಸನ್ ಟೌನ್‌ನ ಈದ್ಗಾ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಹಜ್ ಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ನಗರದಲ್ಲಿ ಉದ್ದೇಶಿತ ಹಜ್ ಭವನ ನಿರ್ಮಾಣಕ್ಕೆ ಡಿಸೆಂಬರ್ ಮೊದಲ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು .ಸರ್ಕಾರದ ವತಿಯಿಂದ ಈಗಾಗಲೇ ಯಲಹಂಕ ಹೋಬಳಿಯ ತಿರುಮೇನಹಳ್ಳಿ ಗ್ರಾಮದಲ್ಲಿ 3.17 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭವನ ನಿರ್ಮಾಣದ ಕಾಮಗಾರಿ ಆರಂಭವಾಗಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿದೆ.ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು` ಎಂದು ಹೇಳಿದರು.
ಭವನ ನಿರ್ಮಾಣಕ್ಕಾಗಿ ಸರ್ಕಾರ 40 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈಗಾಗಲೇ 15 ಕೋಟಿ ರೂಪಾಯಿಗಳನ್ನು ನೀಡಿದ್ದು, ಉಳಿದ 25 ಕೋಟಿ ರೂಪಾಯಿಗಳನ್ನು ನಂತರದ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ನಿರ್ಮಾಣಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಎದುರಾದರೆ ಹಣ ನೀಡುವುದಾಗಿಯೂ ಭರವಸೆ ನೀಡಿದರು.ಬಜೆಟ್‌ಗೂ ಮುನ್ನ ಚರ್ಚೆ: ಮುಂದಿನ ಬಜೆಟ್ ವೇಳೆ ಸಮುದಾಯದ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸುತ್ತೇನೆ. ನಂತರ ಸಮುದಾಯಕ್ಕೆ ಅವಶ್ಯಕವಾದ ಅನುದಾನ ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ. ಬಜೆಟ್‌ನಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಮಧ್ಯವರ್ತಿಗಳಿಗೆ ಎಚ್ಚರಿಕೆ: ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುತ್ತಿಲ್ಲ. ಅನುದಾನ ಮಧ್ಯವರ್ತಿಗಳ ಪಾಲಾಗುತ್ತಿರುವುದು ಗಮನಕ್ಕೆ ಬಂದಿದೆ. ಸಮುದಾಯಗಳ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಮಧ್ಯವರ್ತಿಗಳ ಪಾಲಾಗಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಹಣ ಸೋರಿಕೆಯಾಗದಂತೆ ಕಟ್ಟು ನಿಟ್ಟು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ಅವರು, ಈ ಮೂಲಕ ಮಧ್ಯವರ್ತಿಗಳಿಗೆ ಎಚ್ಚರಿಕೆ ನೀಡಿದರು.ಬಕ್ರೀದ್ ಆಚರಣೆಗೆ ರಕ್ಷಣೆ: ಬಕ್ರೀದ್ ಹಬ್ಬದ ಆಚರಣೆ ವೇಳೆ ಮುಸ್ಲಿಂ ಸಮುದಾಯಗಳ ಮೇಲೆ ಹಲ್ಲೆಗಳು ನಡೆಯುತ್ತವೆ. ಈ ಸಂಬಂಧ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂಬ ಶಾಸಕ ಆರ್.ರೋಷನ್ ಬೇಗ್ ಅವರ ಮನವಿಗೆ ಪ್ರತಿಕ್ರಿಯಿಸಿದ ಅವರು, ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಸಮುದಾಯಕ್ಕೆ ರಕ್ಷಣೆ ನೀಡುತ್ತೇವೆ ಎಂದರು.