Powered By Blogger

Tuesday 8 November 2011

“ಬಿಗ್ ಬಾಸ್ ” ಪ್ರಪಂಚಕ್ಕೆ ಇಂದು ಸ್ವಾಮಿ ಅಗ್ನಿವೇಶ್ ಪ್ರವೇಶ


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

 
ಮುಂಬೈ :ಸಾಮಾಜಿಕ  ಕಾರ್ಯಕರ್ತ  ಹಾಗೂ  ಅಣ್ಣಾ  ಟೀಮ್  ನಿಂದ ಹೊರಬಿದ್ದ  ಕಾವಿಧಾರಿ   ಸ್ವಾಮಿ ಅಗ್ನಿವೇಶ್   ಇಂದು  ಬಿಗ್ ಬಾಸ್   ರಿಯಾಲಿಟಿ  ಕಾರ್ಯಕ್ರಮಕ್ಕೆ  ಪ್ರವೇಶ  ಮಾಡಲಿದ್ದಾರೆ . ಅಣ್ಣಾ  ಟೀಮ್  ವಿರುದ್ದ  ಸಿಡಿದೆದ್ದ   ಅಗ್ನಿವೇಶ್   ಈ  ಕಾರ್ಯಕ್ರಮದ ಮೂಲಕ ತಾನು ಯುವ ಜನತೆಗೆ ಅಣ್ಣ ತಂಡದ ಸದಸ್ಯರ ಕುರಿತು  ಮಾಹಿತಿ ನೀಡುವುದರ ಜೊತೆಗೆ ಯುವಜನತೆಗೆ ಸಾಮಾಜಿಕ ಪಿಡುಗುಗಳ ಬಗ್ಗೆಯೂ ಜಾಗೃತಿ ಮೂಡಿಸಲು ಯತ್ನಿಸುವುದಾಗಿ ಹೇಳಿದ್ದಾರೆ .
 ಮಾಡೆಲ್  , ನಟಿಯರಿಂದ  ಕೂಡಿರುವ ಈ  ಕಾರ್ಯಕ್ರಮದಲ್ಲಿ  ಈ ಕಾವಿಧಾರಿ   ಯಾವ ರೀತಿಯ ಸಂದೇಶ  ನೀಡುತ್ತಾರೋ  ದೇವರೇ  ಬಲ್ಲ . ಈ ಕಾರ್ಯಕ್ರಮದಲ್ಲಿ  ೫ ನೇ   ಪುರುಷ ಸ್ಪರ್ಧಿ  ಅಗ್ನಿವೇಶ್ .  ಈ ಕಾರ್ಯಕ್ರಮದ  ವಿಶೇಷ ಅಂದರೆ  ಹೆಂಗಳೆಯರ  ಜಗಳ,  ಹೊಡೆದಾಟ, ಅಸಭ್ಯ   ನಡವಳಿಕೆ , ಅಸಭ್ಯ   ಶಬ್ದಗಳ  ಬಳಕೆ  ಇದರ  ನಡುವೆ ಈ ಅಗ್ನಿವೇಶ್  ಸಿಕ್ಕಿ  ಏನಾಗುತ್ತಾರೋ  ?   ಎಷ್ಟು ದಿನ ಈ ಬಿಗ್  ಬಾಸ್  ಮನೆ ಯಲ್ಲಿ  ಇರ್ತಾರೋ ? ಕಾದು ನೋಡೋಣ..ಏನೇ  ಇರಲಿ  ಅಗ್ನಿವೇಶ್   ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಣ್ಣಾ  ಕೆಲವೊಂದು  ಬಾಂಬ್  ಗಳನ್ನು   ಸಿಡಿಸುವುದಂತೂ  ಖಂಡಿತ  .
- ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

No comments:

Post a Comment