Powered By Blogger

Wednesday 26 October 2011

ಉತ್ತರ ಭಾರತೀಯರು ಮತ್ತು ನಿರುಪಮ್ ತಾಕತ್ತಿದ್ದರೆ ಮುಂಬೈ ಬಂದ್ ಮಾಡಿ ತೋರಿಸಲಿ – ಶಿವಸೇನೆ ಸವಾಲು



ಮುಂಬೈ : ಉತ್ತರ ಭಾರತೀಯರು ಮುಂಬೈನ ದಿನನಿತ್ಯದ ಸೇವೆ ನೀಡುವ ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು ಅವರೇನಾದರೂ ವಿಶ್ರಾಂತಿ ಪಡೆಯಲು ಮನಸ್ಸು ಮಾಡಿ ಕೆಲಸ ಸ್ಥಗಿತಗೊಳಿಸಿದರೆ ಮುಂಬೈ ಬಂದ್ ಆಗಲಿದೆ ಎಂಬ ಕಾಂಗ್ರೆಸ್ ಸಂಸದ ಸಂಜಯ್ ನಿರುಪಮ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಕಾರ್ಯಾಧ್ಯಕ್ಷ ಉದ್ಭವ್ ಠಾಕ್ರೆ ಸಂಜಯ್ ನಿರುಪಮ್ ಮತ್ತು ಅವರ ಕಾಂಗ್ರೆಸ್ ಪಕ್ಷ ಮತ್ತು ಉತ್ತರ ಭಾರತೀಯರಿಗೆ ತಾಕತ್ತಿದ್ದರೆ ಮುಂಬೈ ಬಂದ್ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ನಿರುಪಮ್ ಹೇಳಿಗೆ ಖಂಡನೆ ವ್ಯಕ್ತಪಡಿಸಿದ ಅವರು ನಿರುಪಮ್ ಏನಾದರೂ ಮುಂಬೈ ಬಂದ್ ಮಾಡಲು ಯತ್ನಿಸಿದರೆ ಅವರಿಗೆ ಶಿವಸೇನೆ ತಕ್ಕ ಪಾಠ ಕಲಿಸಲಿದೆ ಎಂದೂ ಸಹ ಎಚ್ಚರಿಸಿದ್ದಾರೆ. ನಿರುಪಮ್ ಹೇಳಿಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಆಕ್ಷೇಪ ವ್ಯಕ್ತಪಡಿಸಿದೆ

No comments:

Post a Comment