Powered By Blogger

Friday 11 November 2011

ಮುಸ್ಲಿಂ ಯುವಕನ ಮನೆಯಲ್ಲಿ ಹಿಂದೂ ಯುವತಿ : ತುಂಬೆಯಲ್ಲಿ ಆತಂಕದ ಪರಿಸ್ಥಿತಿ


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಹಿಂದೂ ಸಮುದಾಯದ ಯುವತಿಯೋರ್ವಳು ಮುಸ್ಲಿಂ ಸಮುದಾಯದ ಯುವಕನ ಮನೆಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಗುರುವಾರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿದ ಘಟನೆ ತುಂಬೆಯಲ್ಲಿ ನಡೆದಿದ್ದು, ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
ರಾಯಿ ಗ್ರಾಮದ ಯುವತಿ ಸವಿತಾ ಎಂಬಾಕೆ ತುಂಬೆಯ ಅಹಮ್ಮದ್ ಎಂಬವರ ಮನೆಯಲ್ಲಿರುವುದನ್ನು ಅರಿತ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿದ್ದರು. ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಮಂಗಳೂರು ನಿವಾಸಿ ಸಂತೋಷ್ ಎಂಬಾತ ಯುವತಿಯನ್ನು ಆಲ್ಬಂ ತಯಾರಿಕೆಯ ನೆಪದಲ್ಲಿ ಕರೆದುಕೊಂಡು ಹೋಗಿದ್ದು, ಬಳಿಕ ತುಂಬೆಯಲ್ಲಿ ಅಹಮ್ಮದ್ ಎಂಬವರ ಮನೆಯಲ್ಲಿ ಕುಳ್ಳಿರಿಸಿ ಹೋಗಿದ್ದ ಎನ್ನಲಾಗಿದೆ.
- ಪಿ.ಎಂ.ಎ. ಪಾಣೆಮಂಗಳೂರು, (ವರದಿಗಾರರು, ವಿ ಕೆ ನ್ಯೂಸ್).

No comments:

Post a Comment