Powered By Blogger

Monday 5 September 2011

ಜಗತ್ತು ಕಂಡ ಅದ್ಭುತ ವ್ಯಕ್ತಿ


ಮೋಸೆ, ಯೇಸು, ಝೊರಾಷ್ಟ್ರ, ಅಬ್ರಹಾಮ್ ಮುಂತಾದ ಅನೇಕ ಧಾರ್ಮಿಕ ನಾಯಕರ ಅಸ್ತಿತ್ವ ಮತ್ತು ಅವರ ಬೋಧನೆಗಳ ಕುರಿತು ಇತಿಹಾಸವು ದಾಖಲಿಸಿದೆ. ಮನುಷ್ಯ ಸಮೂಹದ ಮಾರ್ಗದರ್ಶನಕ್ಕಾಗಿ ದೈವಿಕ ಸಂದೇಶಗಳನ್ನು ತಂದಿದ್ದೇವೆಂದು ವಾದಿಸಿದ ಹಲವಾರು ನಕಲಿ ಪ್ರವಾದಿಗಳ ಮತ್ತು ದೇವಮಾನವರ ಕುರಿತು ಕೂಡ ಇತಿಹಾಸವು ಬೆಳಕು ಚೆಲ್ಲುತ್ತದೆ. ಆದರೆ ಇವರೆಲ್ಲರ ಮಧ್ಯೆ ವಿಶೇಷ ವೈಶಿಷ್ಠ್ಯತೆವನ್ನು ಹೊಂದಿರುವ ಅನಕ್ಷರಸ್ಥರಾದ, ದೇವ ಸಂದೇಶಗಳನ್ನು ಮಾನವ ಸಮೂಹಕ್ಕೆ ಪ್ರಾಮಾಣಿಕವಾಗಿ ತಲುಪಿಸಿದ ಮತ್ತು ತನ್ಮೂಲಕ ಮಾನವ ಇತಿಹಾಸದಲ್ಲಿ ಅಭೂತಪೂರ್ವವಾದ ಪರಿವರ್ತನೆಯನ್ನುಂಟುಮಾಡಿದ ಓರ್ವ ವ್ಯಕ್ತಿಯ ಕುರಿತು ಹೆಚ್ಚಿನವರೂ ಅಜ್ಞರಾಗಿದ್ದಾರೆ.

 

ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (Encyclopedia Britannica) ಆ ವ್ಯಕ್ತಿಯನ್ನು ಹೀಗೆ ವರ್ಣಿಸುತ್ತದೆ:

The most successful of all prophets and religious personalities

ಸರ್ವ ಪ್ರವಾದಿಗಳಲ್ಲಿ ಮತ್ತು ಧಾರ್ಮಿಕ ವ್ಯಕ್ತಿತ್ವಗಳಲ್ಲಿ ಅತ್ಯಂತ ಯಶಸ್ವಿಯಾದವರು.

…..a mass of detail in the early sources shows that he was an honest and upright man who had gained the respect and loyalty of others who were likewise honest and upright men. (Encyclopedia Britannica vol. 12)

…ಅವರು ಪ್ರಾಮಾಣಿಕ ಮತ್ತು ಸರಳ ಜನರ ಗೌರವ ಹಾಗೂ ವಿಶ್ವಾಸವನ್ನು ಗೆದ್ದ ಅತ್ಯಂತ ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿಯಾಗಿದ್ದರೆಂದು ಪ್ರಾಥಮಿಕ ಮೂಲಗಳಲ್ಲಿರುವ ವಿಪುಲವಾದ ವಿವರಣೆಗಳು ತೋರಿಸುತ್ತವೆ.

 

ಜಾರ್ಜ್ ಬರ್ನಾರ್ಡ್ ಶಾ (George Bernard Shaw) ಬರೆಯುತ್ತಾರೆ:

He must be called the Saviour of humanity.  I believe that if a man like him were to assume the dictatorship of the modern world, he would succeed in solving its problems in a way that would bring it much needed peace and happiness. (The Genuine Islam, Singapore, Vol. 1, No. X 1936)

ಅವರನ್ನು ಮಾನವೀಯತೆಯ ಸಂರಕ್ಷಕನೆಂದೇ ಕರೆಯಬೇಕು. ಅವರಂತಿರುವ ಒಬ್ಬ ವ್ಯಕ್ತಿ ಆಧುನಿಕ ಜಗತ್ತಿನ ಸರ್ವಾಧಿಕಾರವನ್ನು ವಹಿಸಿದರೆ, ಅದಕ್ಕೆ ಅತ್ಯಂತ ಅಗತ್ಯವಿರುವ ಶಾಂತಿ ಮತ್ತು ಸಂತೋಷವನ್ನು ತರುವಂತಹ ರೀತಿಯಲ್ಲಿ ಅದರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ಯಶಸ್ವಿಯಾಗುವರೆಂದು ನಾನು ನಂಬುತ್ತೇನೆ.

 

ಅವರು ಭೂಮಿಯ ಮೇಲೆ ಕಾಲೂರಿದ ಅತ್ಯಂತ ಗಮನಾರ್ಹ ವ್ಯಕ್ತಿಯಾಗಿದ್ದರು.ಅವರೊಂದು ಧರ್ಮವನ್ನು ಪ್ರಚಾರ ಮಾಡಿದರು, ಒಂದು ರಾಜ್ಯಕ್ಕೆ ಬುನಾದಿ ಹಾಕಿದರು, ಒಂದು ರಾಷ್ಟ್ರವನ್ನು ನಿರ್ಮಿಸಿದರು, ನೀತಿಪೂರ್ವಕವಾದ ನಿಯಮಗಳನ್ನಿಟ್ಟರು, ಅಸಂಖ್ಯ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳನ್ನು ಜಾರಿಗೆ ತಂದರು, ತನ್ನ ಬೋಧನೆಗಳನ್ನು ಪ್ರಾಯೋಗಿಕಗೊಳಿಸಲು ಮತ್ತು ಇತರರಿಗೆ ಪ್ರತಿಬಿಂಬಿಸಲು ಒಂದು ಬಲಿಷ್ಠವಾದ ಮತ್ತು ಕ್ರಿಯಾತ್ಮಕವಾದ ಸಮಾಜವನ್ನು ಸ್ಥಾಪಿಸಿದರು.  ಮಾನವ ವಿಚಾರಗಳ ಮತ್ತು ವರ್ತನೆಗಳ ಜಗತ್ತನ್ನೇ ಶಾಶ್ವತವಾಗಿ, ಪರಿಪೂರ್ಣವಾಗಿ ಕ್ರಾಂತೀಕರಿಸಿದರು.

 

ಅವರಾಗಿದ್ದಾರೆ ಮನುಷ್ಯ ವ್ಯಕ್ತಿತ್ವವು ಕಂಡ ಅತಿಶ್ರೇಷ್ಠ ಮಾನವತಾವಾದಿ, ಜಗತ್ತು ಕಂಡ ಅದ್ಭುತ ವ್ಯಕ್ತಿ, ಅವರ ಹೆಸರೇ ಮುಹಮ್ಮದ್(ಸ).

 

ಕ್ರಿ.ಶ. 570ರಲ್ಲಿ ಅರೇಬಿಯಾದಲ್ಲಿ ಜನಿಸಿದ ಮುಹಮ್ಮದ್‌(ಸ)ರವರು ತಮ್ಮ ನಲ್ವತ್ತನೆಯ ವಯಸ್ಸಿನಲ್ಲಿ ಇಸ್ಲಾಮ್ (ಏಕಮೇವದೇವನಿಗೆ ಸಂಪೂರ್ಣ ವಿಧೇಯತೆ) ಎಂಬ ಸತ್ಯಧರ್ಮದ ಪ್ರಚಾರಕಾರ್ಯವನ್ನು ಆರಂಭಿಸಿ ತಮ್ಮ ಅರುವತ್ತಮೂರನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆಯನ್ನು ಮುಗಿಸಿದರು.

 

ಮುಹಮ್ಮದ್‌(ಸ)ರವರು ಕೇವಲ ಇಪ್ಪತ್ತಮೂರು ವರ್ಷಗಳ ತಮ್ಮ ದೌತ್ಯಜೀವನದ ಅತಿಸಂಕ್ಷಿಪ್ತ ಅವಧಿಯಲ್ಲಿ ಸಂಪೂರ್ಣ ಅರಬಿ ಪರ್ಯಾಯ ದ್ವೀಪವನ್ನು ಬಹುದೇವಾರಾಧನೆ, ಅಂಧವಿಶ್ವಾಸ ಮತ್ತು ಸೃಷ್ಟಿಪೂಜೆಯಿಂದ ಏಕದೇವಾರಾಧನೆಯೆಡೆಗೆ, ಜನಾಂಗೀಯ ಕಲಹ ಮತ್ತು ಸಮರಗಳಿಂದ ರಾಷ್ಟ್ರೀಯ ಒಗ್ಗಟ್ಟು ಮತ್ತು ಭಾವೈಕ್ಯತೆಯೆಡೆಗೆ, ಮದ್ಯಪಾನ ಮತ್ತು ವ್ಯಭಿಚಾರದಿಂದ ಸಮಚಿತ್ತತೆ ಮತ್ತು ದೇವಭಕ್ತಿಯೆಡೆಗೆ, ಅನಿರ್ಬಂಧತೆ ಮತ್ತು ಅರಾಜಕತೆಯಿಂದ ಶಿಸ್ತುಬದ್ಧ ಮತ್ತು ಮಾದರೀಯೋಗ್ಯ ಜೀವನದೆಡೆಗೆ, ಪರಿಪೂರ್ಣ ದಿವಾಳಿತ್ವದಿಂದ ನೈತಿಕ ಉತ್ಕೃಷ್ಟತೆಯ ಪಾರಮ್ಯದೆಡೆಗೆ ಪರಿಪೂರ್ಣವಾಗಿ ಪರಿವರ್ತಿಸಿದರು. ಮಾನವ ಚರಿತ್ರೆಯು ಎಂದೂ ಕಂಡರಿಯದ ಅಥವಾ ಆಲಿಸಿರದ ಇಂತಹ ಅಭೂತಪೂರ್ವ ಮತ್ತು ಅಮೂಲಾಗ್ರ ಬದಲಾವಣೆ! ಮತ್ತೆ ಊಹಿಸಿರಿ! ನಂಬಲಸಾಧ್ಯವಾದ ಈ ಅದ್ಭುತಗಳೆಲ್ಲವೂ ಕೇವಲ ಎರಡು ದಶಕಗಳ ಹೃಸ್ವಾವಧಿಯಲ್ಲಿ ಸಂಭವಿಸಿವೆ. 

 

ಸುಪ್ರಸಿದ್ಧ ಇತಿಹಾಸ ತಜ್ಞರಾದ ಲಾಮರ್‌ಟೈನ್ (Lamartine) ಮಾನವ ಶ್ರೇಷ್ಠತೆಗಿರುವ ಆವಶ್ಯಕತೆಗಳ ಕುರಿತು ವಿವರಿಸುತ್ತಾ ಹೇಳುತ್ತಾರೆ:

If greatness of purpose, smallness of means and astounding results are the three criteria of human genius, who would dare to compare any great man in modern history with Muhammad?  The most famous men created arms, laws and empires only.  They founded if anything at all, no more than material powers which often crumbled away before their eyes.  This man moved not only armies, legislations, empires, peoples and dynasties, but millions of men in one-third of the then inhabited world; and more than that he moved the altars, the gods, the religions, the ideas, the beliefs and souls….his forbearance in victory, his ambition, which was entirely devoted to one idea and in no manner striving for an empire; his endless prayers, his mystic conversations with God, his death and his triumph after death; all these attest not to an imposter but to a firm conviction which gave him the power to restore a dogma.  This dogma was two-fold, the unity of God and the immateriality of God; the former telling what God is, the latter telling what God is not; the one overthrowing false gods with the sword, the other starting an idea with the words.  Philosopher, orator, apostle, legislator, warrior, conqueror of ideas, restorer of rational dogmas, of a cult without images, the founder of twenty terrestrial empires and of one spiritual empire, that is Muhammad.  As regards all the standards by which human greatness may be measured, we may well ask, is there any man greater than he?  (Lamartine, Historie de la Turquie, Paris, 1854, vol. II,  pp. 276-277)

ಉದ್ದೇಶದ ಪ್ರಾಧಾನ್ಯತೆ, ಉಪಕರಣಗಳ ಮಿತತ್ವ ಮತ್ತು ದಿಗಿಲುಗೊಳಿಸುವಂತಹ ಫಲಿತಾಂಶಗಳು ಓರ್ವ ವ್ಯಕ್ತಿಯ ಶ್ರೇಷ್ಠತೆಯನ್ನು ಅಳೆಯಲು ಮೂರು ಮಾನದಂಡಗಳಾಗಿದ್ದರೆ, ಮುಹಮ್ಮದ್‌ರೊಂದಿಗೆ ಆಧುನಿಕ ಇತಿಹಾಸದ ಯಾವುದೇ ಶ್ರೇಷ್ಠ ವ್ಯಕ್ತಿಯನ್ನು ಹೋಲಿಸಲು ಧೈರ್ಯಪಡುವವರಾರು? ಅತಿಪ್ರಸಿದ್ಧ ವ್ಯಕ್ತಿಗಳು ಕೇವಲ ಶಸ್ತ್ರಾಸ್ತ್ರ, ಕಾನೂನು ಮತ್ತು ಸಾಮ್ರಾಜ್ಯಗಳನ್ನಷ್ಟೇ ನಿರ್ಮಿಸಿದರು.  ಕೊನೆಗೆ ಅವರು ಏನನ್ನಾದರೂ ಸಾಧಿಸಿದ್ದರೆ ಅದು ಅವರ ಕಣ್ಣುಗಳ ಮುಂದೆಯೇ ನಿರಂತರವಾಗಿ ಹೊಸಕಿ ಹಾಕಲ್ಪಡುತ್ತಿದ್ದ ಭೌತಿಕ ಅಧಿಕಾರಗಳಲ್ಲದೆ ಬೇರೇನೂ ಆಗಿರಲಿಲ್ಲ. ಆದರೆ ಈ ವ್ಯಕ್ತಿ (ಮುಹಮ್ಮದ್) ಸೈನ್ಯಗಳನ್ನೂ, ಶಾಸನಗಳನ್ನೂ, ಸಾಮ್ರಾಜ್ಯಗಳನ್ನೂ, ಜನರನ್ನೂ, ರಾಜವಂಶಗಳನ್ನೂ ಮುನ್ನಡೆಸಿದ್ದು ಮಾತ್ರವಲ್ಲದೆ ಅಂದಿನ ಜಾಗತಿಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿದ್ದ ಕೋಟ್ಯಂತರ ಜನತೆಯನ್ನು ಮುನ್ನಡೆಸಿದ್ದರು. ಅದಕ್ಕಿಂತ ಮಿಗಿಲಾಗಿ ಅವರು (ಜನರಲ್ಲಿ ಮನೆಮಾಡಿದ್ದ) ಬಲಿಪೀಠಗಳು, ದೇವರುಗಳು, ಧರ್ಮಗಳು, ಪರಿಕಲ್ಪನೆಗಳು, ನಂಬಿಕೆಗಳು ಮತ್ತು ಆತ್ಮಗಳೆಲ್ಲವನ್ನೂ ಬದಲಾಯಿಸಿದರು.ಗೆದ್ದಾಗ ಅವರಿಗಿದ್ದ ಆತ್ಮಸಂಯಮ, ಅವರ ಮಹತ್ವಾಕಾಂಕ್ಷೆ, ಎಲ್ಲವನ್ನೂ ಸಂಪೂರ್ಣವಾಗಿ ಒಂದೇ ಗುರಿಯತ್ತ ಸಮರ್ಪಿಸಲಾಗಿತ್ತು. ಇದು ಯಾವುದೇ ರೀತಿಯಲ್ಲೂ ಒಂದು ಸಾಮ್ರಾಜ್ಯ ಸ್ಥಾಪನೆಯತ್ತ ನಡೆಸಿದ ಹೋರಾಟವಾಗಿರಲಿಲ್ಲ. ಅವರ ಕೊನೆಯಿಲ್ಲದ ಪ್ರಾರ್ಥನೆಗಳು, ತನ್ನ ದೇವನೊಡನೆ ನಡೆಸುವ ನಿಗೂಢ ಸಂಭಾಷಣೆಗಳು, ಅವರ ಮರಣ ಮತ್ತು ಮರಣಾನಂತರದ ವಿಜಯ, ಎಲ್ಲವೂ ಅವರೊಬ್ಬ ವಿಶಿಷ್ಠ ವ್ಯಕ್ತಿಯಾಗಲು ಬಯಸಿದ ನಯವಂಚಕನೆಂದು ದೃಢೀಕರಿಸುವುದಿಲ್ಲ. ಬದಲಾಗಿ ಒಂದು ಸಿದ್ಧಾಂತವನ್ನು ಸಂರಕ್ಷಿಸುವುದಕ್ಕಾಗಿ ಅವರಿಗೆ ಶಕ್ತಿ ನೀಡುತ್ತಿರುವ ಒಂದು ಬಲಿಷ್ಠವಾದ ವಿಶ್ವಾಸದಾರ್ಢ್ಯತೆಯು ಅವರಲ್ಲಿತ್ತೆಂಬುದನ್ನು ದೃಢೀಕರಿಸುತ್ತದೆ. ಈ ಸಿದ್ಧಾಂತವು ಎರಡೆಸಲಿನಂತಿದೆ.ದೇವನ ಏಕತ್ವ ಮತ್ತು ದೇವನ ಅಭೌತಿಕತೆ. ಮೊದಲನೆಯದು ದೇವನು ಏನು ಎಂಬುದನ್ನು ಸೂಚಿಸುತ್ತದೆ ಮತ್ತು ಎರಡನೆಯದು ದೇವನು ಏನು ಅಲ್ಲ ಎಂಬುದನ್ನು ಸೂಚಿಸುತ್ತದೆ. ಒಂದು ಖಡ್ಗದೊಂದಿಗೆ ಮಿಥ್ಯ ದೇವರುಗಳನ್ನು ಕಿತ್ತೊಗೆಯುವಾಗ ಮತ್ತೊಂದು ಮಾತುಗಳ ಮೂಲಕ ಚಿಂತನೆಗಳಿಗೆ ಚಾಲನೆ ನೀಡುತ್ತದೆ. ತತ್ವಜ್ಞಾನಿ, ವಾಗ್ಮಿ, ಧರ್ಮಪ್ರಚಾರಕ, ಶಾಸನಕಾರ, ಯೋಧ, ಊಹೆಗಳನ್ನು ದಮನಿಸಿದವನು, ವೈಚಾರಿಕ ಸಿದ್ಧಾಂತಗಳ, ಪ್ರತಿಮೆಗಳಿಲ್ಲದ ಉಪಾಸನಾ ಪದ್ಧತಿಯ ಸಂರಕ್ಷಕ, ಇಪ್ಪತ್ತು ಭೂಸಾಮ್ರಾಜ್ಯಗಳ ಮತ್ತು ಒಂದು ಆಧ್ಯಾತ್ಮಿಕ ಸಾಮ್ರಾಜ್ಯದ ಸ್ಥಾಪಕ, ಅವರೇ ಮುಹಮ್ಮದ್. ಮನುಷ್ಯ ಶ್ರೇಷ್ಠತೆಯನ್ನಳೆಯುವ ಸರ್ವ ಮಾನದಂಡಗಳನ್ನು ಬಳಸಿ ಪರಿಶೋಧಿಸಿದ ನಂತರ ಖಂಡಿತವಾಗಿಯೂ ನಾವು ಕೇಳುವೆವು. ಮುಹಮ್ಮದ್‌ರಿಗಿಂತಲೂ ಶ್ರೇಷ್ಠವಾದ ವ್ಯಕ್ತಿ ಯಾರಾದರೂ ಇದ್ದಾರೆಯೇ?

 

ಈ ಜಗತ್ತು ಅದೆಷ್ಟೋ ಶ್ರೇಷ್ಠ ವ್ಯಕ್ತಿಗಳನ್ನು ಹೊರತಂದಿದೆ. ಆದರೆ ಅವರೆಲ್ಲರೂ ಧಾರ್ಮಿಕ ಚಿಂತನೆ ಅಥವಾ ಸೇನಾ ನಾಯಕತ್ವದಂತಹ ಒಂದೆರಡು ಕ್ಷೇತ್ರಗಳಲ್ಲಿ ಮಾತ್ರ ತಮ್ಮನ್ನು ಪರಿಚಯಿಸಿದ ಏಕಮುಖಿಗಳಾಗಿದ್ದರು. ಜಗತ್ತಿನ ಇಂತಹ ಶ್ರೇಷ್ಠ ವ್ಯಕ್ತಿಗಳ ಜೀವನಶೈಲಿ ಮತ್ತು ಉಪದೇಶಗಳು ಕಾಲಗರ್ಭದಲ್ಲಿ ಮರೆಯಾಗಿ ಹೋಗಿವೆ. ಅವರ ಜನ್ಮ ಸಮಯದಲ್ಲಿ ಮತ್ತು ಸ್ಥಳದಲ್ಲಿ, ಅವರ ಜೀವನದ ರೀತಿನೀತಿಗಳಲ್ಲಿ, ಅವರ ಮತಪ್ರಚಾರಕಾರ್ಯಗಳ ಸ್ವರೂಪ ಮತ್ತು ವಿವರಣೆಗಳಲ್ಲಿ, ಅವರ ಸೋಲು ಗೆಲುವಿನ ಶ್ರೇಣಿ ಮತ್ತು ಪ್ರಮಾಣಗಳಲ್ಲಿ ನೈಜ ಸಂಗತಿಗಳಿಗಿಂತಲೂ ಅಧಿಕವಾಗಿ ಊಹಾಪೋಹಗಳೇ ತುಂಬಿಕೊಂಡಿವೆ. ಮಾತ್ರವಲ್ಲದೆ ಅವರ ಜೀವನಶೈಲಿ ಮತ್ತು ಮತಪ್ರಚಾರ ಕಾರ್ಯಗಳನ್ನು ಸಮಗ್ರವಾಗಿ ಅಥವಾ ನಿಖರವಾಗಿ ಚಿತ್ರೀಕರಿಸುವುದು ಕೂಡ ಅಸಾಧ್ಯವಾಗಿದೆ.  ಆದರೆ ಮುಹಮ್ಮದ್‌(ಸ)ರವರು ಇದಕ್ಕೆ ಭಿನ್ನವಾಗಿದ್ದಾರೆ. ಮನುಷ್ಯ ಕಲ್ಪನೆ ಮತ್ತು ವರ್ತನೆಗಳ ವಿವಿಧ ಸ್ತರಗಳಲ್ಲಿ ಮಾನವೇತಿಹಾಸದ ಪುಟಗಳಲ್ಲಿ ಪೂರ್ಣಚಂದ್ರನಂತೆ ಪ್ರಜ್ವಲಿಸುವವರಾಗಿದ್ದಾರೆ ಅವರು. ಅವರ ಚಿತ್ರವನ್ನಾಗಲಿ ಪ್ರತಿಮೆಯನ್ನಾಗಲಿ ಜಗತ್ತಿನ ಯಾವ ಮೂಲೆಯಲ್ಲೂ ದರ್ಶಿಸಲಸಾಧ್ಯ!

 

ಅವರ ಅತ್ಯಂತ ವೈಯುಕ್ತಿಕವಾದ ಕರ್ಮಗಳಿಂದ ತೊಡಗಿ ಅವರ ಸಾರ್ವಜನಿಕ ಸಂಭಾಷಣೆಗಳ ವರೆಗಿನ ಸರ್ವವನ್ನೂ ಅತಿಸುರಕ್ಷಿತವಾಗಿ ಮತ್ತು ಅತ್ಯಂತ ಪ್ರಾಮಾಣಿಕವಾಗಿ ಇಂದಿನವರೆಗೂ ಸಂರಕ್ಷಿಸಿಡಲಾಗಿದೆ. ಈ ರೀತಿ ಸಂರಕ್ಷಿಸಿಡಲಾದ ದಾಖಲೆಗಳು ಅಧಿಕೃತವಾದುದೆಂದು ಅವರ ವಿಶ್ವಾಸಾರ್ಹ ಅನುವರ್ತಿಗಳು ಮಾತ್ರವಲ್ಲದೆ ಅವರ ಕಟುಟೀಕಾಕಾರರು ಕೂಡ ದೃಢೀಕರಿಸುತ್ತಾರೆ.  ಮನುಷ್ಯ ಸ್ವಭಾವದ ಸರ್ವ ಅನುಕರಣೀಯ ಮಾದರಿಗಳೂ ಅವರಲ್ಲಿ ಪ್ರಚಂಡ ವೈಭವದೊಂದಿಗೆ ಹೊಳೆಯುತ್ತಿದ್ದವು.

 

ಮುಹಮ್ಮದ್‌(ಸ)ರವರು ಓರ್ವ ಧಾರ್ಮಿಕ ಶಿಕ್ಷಕ, ಸಮಾಜ ಸುಧಾರಕ, ನ್ಯಾಯ ನೀತಿಯ ಮಾರ್ಗದರ್ಶಕ, ಆಡಳಿತಾಧಿಕಾರಿ, ಪ್ರಾಮಾಣಿಕ ಗೆಳೆಯ, ಅದ್ಭುತ ಸಹಚರ, ತ್ಯಾಗ ಮನೋಭಾವದ ಪತಿ, ಪ್ರೀತಿವಾತ್ಸಲ್ಯ ತುಂಬಿದ ತಂದೆ ಎಲ್ಲವೂ ಆಗಿದ್ದರು. ಜೀವನದ ಈ ವಿಭಿನ್ನ ಮಗ್ಗಲುಗಳಲ್ಲಿ ಅವರನ್ನು ಮೀರಿದ ಅಥವಾ ಅವರಿಗೆ ಸರಿಸಮಾನರಾದ ಇನ್ನೋರ್ವ ವ್ಯಕ್ತಿ ಮಾನವ ಚರಿತ್ರೆಯಲ್ಲಿಲ್ಲ. ಇಂತಹ ನಂಬಲಸಾಧ್ಯವಾದ ಸಮಗ್ರತೆಯನ್ನು ಸಾಧಿಸಲು ಅವರಿಗಿದ್ದ ನಿಸ್ವಾರ್ಥ ಮನೋಭಾವವೇ ಪ್ರಮುಖ ಕಾರಣವಾಗಿತ್ತು.

 

ಮಹಾತ್ಮಾ ಗಾಂಧಿ (Mahatma Gandhi), ಮುಹಮ್ಮದ್‌(ಸ)ರವರ ವ್ಯಕ್ತಿತ್ವದ ಕುರಿತು ಮಾತನಾಡುತ್ತಾ ಯಂಗ್ ಇಂಡಿಯಾದಲ್ಲಿ ಹೇಳುತ್ತಾರೆ:

I wanted to know the best of one who holds undisputed sway over the hearts of millions of mankind…… I became more than convinced ever that it was not the sword that won a place for Islam in those days in the scheme of life.  It was the rigid simplicity, the utter self-effacement of the Prophet, the scrupulous regard for his pledges, his intense devotion to his friends and followers, his intrepidity, his fearlessness, his absolute trust in God and in his own mission.  These and not the sword carried everything before them and surmounted every obstacle.  When I closed the second volume (of the Prophet’s biography), I was sorry there was not more for me to read of that great life.

ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದರಹಿತವಾಗಿ ಪ್ರಭುತ್ವವನ್ನು ಸ್ಥಾಪಿಸಿದ ಓರ್ವ ಅತ್ಯುನ್ನತ ವ್ಯಕ್ತಿಯ ಕುರಿತು ತಿಳಿಯಬಯಸಿದ್ದೆ…. ಅಂದಿನ ಜೀವನ ರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟದ್ದು ಖಡ್ಗವಲ್ಲ ಬದಲಾಗಿ ಪ್ರವಾದಿಯ ತೀವ್ರ ನಿರಾಡಂಬರತೆ, ಪರಿಪೂರ್ಣ ನಿಷ್ಕಾಪಟ್ಯತೆ, ವಾಗ್ದಾನಗಳ ಕುರಿತು ಆತ್ಯಂತಿಕವಾದ ನಿಷ್ಠೆ, ತನ್ನ ಸ್ನೇಹಿತರು ಮತ್ತು ಅನುವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಮತಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಎಂಬ ವಾಸ್ತವಿಕತೆಯನ್ನು ನಾನು ಚೆನ್ನಾಗಿ ಮನದಟ್ಟುಮಾಡಿಕೊಂಡೆ. ಇವುಗಳಾಗಿದ್ದವು ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು ನಿವಾರಿಸಿದ ಅಸ್ತ್ರವೇ ಹೊರತು ಖಡ್ಗವಾಗಿರಲಿಲ್ಲ. ನಾನು (ಪ್ರವಾದಿ ಜೀವನಚರಿತ್ರೆಯ) ಎರಡನೇ ಭಾಗವನ್ನು ಓದಿ ಮುಚ್ಚಿದಾಗ ಆ ಶ್ರೇಷ್ಠ ಜೀವನದ ಕುರಿತು ಇನ್ನೇನೂ ಓದಲು ಉಳಿದಿಲ್ಲವೆಂದು ಮರುಕಪಟ್ಟಿದ್ದೆ.

 

ಥಾಮಸ್ ಕಾರ್ಲೈಲ್ (Thomas Carlyle) ತನ್ನ Heroes and Hero Worship ನಲ್ಲಿ ಬರೆಯುತ್ತಾರೆ:

how one man single handedly, could weld warring tribes and wandering bedouins into a most powerful and civilized nation in less than two decades?

ಯುದ್ಧನಿರತ ಜನಾಂಗಗಳನ್ನೂ, ಅಲೆಮಾರಿ ಅರಬಿಗಳನ್ನೂ ಎರಡು ದಶಕಗಳಿಗಿಂತಲೂ ಹೃಸ್ವಾವಧಿಯಲ್ಲಿ ಓರ್ವ ವ್ಯಕ್ತಿ ಏಕಾಂಗಿಯಾಗಿ ಒಂದು ಸುದೃಢ ಮತ್ತು ಸುಸಂಸ್ಕೃತ ರಾಷ್ಟ್ರವನ್ನಾಗಿ ಪರಿವರ್ತಿಸಿದ್ದಾದರೂ ಹೇಗೆ?

 

ಕಾರ್ಲೈಲ್ ಮುಂದುವರಿಯುತ್ತಾ ಮುಹಮ್ಮದ್‌(ಸ)ರವರ ವ್ಯಕ್ತಿತ್ವದ ಕುರಿತು ಬರೆಯುತ್ತಾರೆ:

He visited the sick, followed any bier he met, accepted the invitation of slave of dinner, mended his own clothes, milked goats and waited upon himself, relates summarily another tradition: He never withdrew his hand of another man’s palm and turned not before the other hand turned. His household was of the frugalest; his common diet barley, bread and water; sometimes for months there was not a fire once lighted on his hearth.  They recorded with just pride that he would mend his own cloth, his own shoes, patch his own cloak.  A poor, hard toiling, ill provided man; careless of what vulgar men toil for……No emperor with his tiaras was obeyed as this man in a cloak of his own clothing.

ಮುಹಮ್ಮದ್ ರೋಗಿಗಳನ್ನು ಸಂದರ್ಶಿಸುತ್ತಿದ್ದರು, ಯಾರಾದರೂ ಮೃತದೇಹವನ್ನು ಹೊತ್ತೊ ಯ್ಯುವುದನ್ನು ಕಂಡರೆ ಅದನ್ನು ಹಿಂಬಾಲಿಸುತ್ತಿದ್ದರು, ಗುಲಾಮರ ಔತಣದೂಟದ ಆಮಂತ್ರಣಗಳನ್ನು ಸ್ವೀಕರಿಸುತ್ತಿದ್ದರು, ತಮ್ಮ ವಸ್ತ್ರಗಳನ್ನು ತಾವೇ ಹೊಲಿಯುತ್ತಿದ್ದರು, ಆಡುಗಳನ್ನು ತಾವೇ ಸ್ವತಃ ಹಾಲು ಹಿಂಡುತ್ತಿದ್ದರು, ಮತ್ತು ಅವುಗಳನ್ನು ತಾವೇ ಸ್ವತಃ ಮೇಯಿಸುತ್ತಿದ್ದರು. ಇನ್ನೊಂದು ಚರ್ಯೆಯು (ಹದೀಸ್) ಹೀಗೆನ್ನುತ್ತದೆ: ಯಾರಾದರೂ ಹಸ್ತಲಾಘವ ಮಾಡಿದರೆ ಆ ವ್ಯಕ್ತಿ ತನ್ನ ಕೈಯನ್ನು ಹಿಂದಕ್ಕೆಳೆಯುವವರೆಗೆ ಅವರು ತಮ್ಮ ಕೈಯನ್ನು ಹಿಂದೆಳೆಯುತ್ತಿರಲಿಲ್ಲ. ಆ ವ್ಯಕ್ತಿ ತಮ್ಮ ಬಳಿಯಿಂದ ಹೊರಡುವವರೆಗೆ ಅವರು ಅಲ್ಲಿಂದ ಕದಲುತ್ತಿರಲಿಲ್ಲ.  ಅವರ ಕುಟುಂಬವು ಅತ್ಯಂತ ಮಿತವ್ಯಯಿಯಾಗಿತ್ತು, ಅವರ ದೈನಂದಿನ ಆಹಾರ ಗಂಜಿ, ರೊಟ್ಟಿ ಮತ್ತು ನೀರಾಗಿದ್ದವು.  ಕೆಲವೊಮ್ಮೆ ಅವರ ಮನೆಯ ಒಲೆಯಲ್ಲಿ ತಿಂಗಳುಗಳವರೆಗೆ ಬೆಂಕಿಯುರಿಸಲ್ಪಡುತ್ತಿರಲಿಲ್ಲ, ಅವರು ತಮ್ಮ ಬಟ್ಟೆಗಳನ್ನು ತಾವೇ ಸ್ವತಃ ಹೊಲಿಯುತ್ತಿದ್ದರು, ತಮ್ಮ ಚಪ್ಪಲಿಗಳನ್ನು ತಾವೇ ಸ್ವತಃ ಸರಿಪಡಿಸುತ್ತಿದ್ದರು, ತಮ್ಮ ಹರಿದ ಅಂಗಿಯನ್ನು ತಾವೇ ಸ್ವತಃ ತೇಪೆಹಚ್ಚುತ್ತಿದ್ದರೆಂದು ಅವರು (ಅನುಯಾಯಿಗಳು) ಅತ್ಯಂತ ಹೆಮ್ಮೆಯಿಂದ ದಾಖಲಿಸಿದ್ದಾರೆ. ಸಾಮಾನ್ಯ ಜನರು ಪರಿಶ್ರಮಿಸುವಂತೆ ಪರಿಶ್ರಮಿಸುವ ಓರ್ವ ಬಡವ, ಓರ್ವ ಕಠಿಣ ಪರಿಶ್ರಮಿ ಮತ್ತು ಸವಲತ್ತುಗಳಿಲ್ಲದ ವ್ಯಕ್ತಿಯಾಗಿದ್ದರು ಅವರು….. ತಾನೇ ಸ್ವತಃ ತೇಪೆ ಹಚ್ಚಿದ ವಸ್ತ್ರಗಳನ್ನು ಧರಿಸಿದ ಈ ವ್ಯಕ್ತಿಯನ್ನು ಅನುಸರಿಸಿದಂತೆ ಜಗತ್ತಿನ ಯಾವುದೇ ಮಹಾನ್ ಸಾಮ್ರಾಟನನ್ನೂ ಜನರು ಅನುಸರಿಸಿಲ್ಲ.

 

ದೀವಾನ್ ಚಂದ್ ಶರ್ಮಾ (Diwan Chand Sharma) ಬರೆಯುತ್ತಾರೆ:

Muhammad was the soul of kindness, and his influence was felt and never forgotten by those around him.  (D. C. Sharma, The Prophets of the East, Calcutta, 1935.  pp. 12)

ಮುಹಮ್ಮದ್ ಕರುಣೆಯ ಆತ್ಮವಾಗಿದ್ದರು. ಅವರ ಸುತ್ತಮುತ್ತಲ ಜನರು ಅವರ ಪ್ರಭಾವವನ್ನು ಅನುಭವಿಸಿದರು ಮತ್ತು ಅವರದನ್ನು ಮರೆಯಲೇ ಇಲ್ಲ.

 

ಎಡ್ವರ್ಡ್ ಗಿಬ್ಬನ್ ಮತ್ತು ಸೈಮನ್ ಓಕ್ಲಿ (Edward Gibbon & Simon Ockley) ಬರೆಯುತ್ತಾರೆ:

I believe in one God, and Muhammad, apostle of God is the simple and invariable profession of Islam

ನಾನು ಏಕದೇವನಲ್ಲಿ ವಿಶ್ವಾಸವಿಟ್ಟಿದ್ದೇನೆ ಮತ್ತು ಮುಹಮ್ಮದ್ ದೇವನ ಸಂದೇಶವಾಹಕರೆಂದು ವಿಶ್ವಾಸವಿಟ್ಟಿದ್ದೇನೆ, ಇದು ಇಸ್ಲಾಮಿನ ಸರಳ ಮತ್ತು ಸುಸ್ಥಿರವಾದ ಪ್ರಕಟನೆಯಾಗಿದೆ.

The intellectual image of the deity has never been degraded by any visible idol; the honour of the Prophet have never transgressed the measure of human virtues; and his living precepts have restrained the gratitude of this disciples within the bounds of reason and religion. (Edward Gibbon and Simon Ockley, History of the Saracen Empires, London, 1870. p. 54)

ದೇವನ ಬೌದ್ಧಿಕ ರೂಪವನ್ನು ಯಾವುದೇ ಪ್ರತ್ಯಕ್ಷ ಪ್ರತಿಮೆಗಳ ರೂಪದಲ್ಲಿ ಹೀನಾಯಿಸಲಾಗಿಲ್ಲ.  ಪ್ರವಾದಿಯ ಗೌರವವು ಮಾನವ ಸಂಪನ್ನತೆಯ ಮಿತಿಯನ್ನು ಮೀರಿಲ್ಲ. ಅವರ ಜೀವಂತ ನಿಯಮ ನಿರ್ದೇಶನಗಳು ವಿವೇಚನಾಶಕ್ತಿ ಮತ್ತು ಧರ್ಮದ ಚೌಕಟ್ಟಿನೊಳಗೆ ಅವರ ಶಿಷ್ಯರ ಕೃತಜ್ಞತೆಯನ್ನು ಸಂರಕ್ಷಿಸಿದೆ.

 

ಮುಹಮ್ಮದ್‌(ಸ)ರವರು ಓರ್ವ ಮನುಷ್ಯರಲ್ಲದೆ ಬೇರೇನೂ ಆಗಿರಲಿಲ್ಲ. ಅವರೊಂದು ಉದಾತ್ತವಾದ ಧರ್ಮದ ಪ್ರಚಾರಕರಾಗಿದ್ದರು. ಬಹುಜನರೂ ಅಪಾರ್ಥಮಾಡಿಕೊಂಡಿರುವಂತೆ ಅದು ಅವರು ಸ್ವಯಂ ನಿರ್ಮಿಸಿದ ಧರ್ಮವಲ್ಲ. ಬದಲಾಗಿ ಅವರಿಗಿಂತ ಮೊದಲು ನಿಯುಕ್ತರಾಗಿದ್ದ ಪ್ರವಾದಿಗಳೆಲ್ಲರೂ ಬೋಧಿಸಿದ ಅದೇ ಧರ್ಮವಾಗಿತ್ತು.  ಎಲ್ಲಾ ಪ್ರವಾದಿಗಳೂ ತಮ್ಮ ಸಮೂಹಗಳಿಗೆ ಬೋಧಿಸಿದಂತೆ ಅವರೂ ಕೂಡ ಏಕೈಕನಾದ ದೇವನನ್ನು ಮಾತ್ರ ಆರಾಧಿಸಬೇಕು, ಅವನೊಂದಿಗೆ ಮಾತ್ರ ಪ್ರಾರ್ಥಿಸಬೇಕು, ಅವನ ನಿಯಮನಿರ್ದೇಶನಕ್ಕನುಸೃತವಾಗಿ ಜೀವನವನ್ನು ಸರಿಪಡಿಸಿ ಮುನ್ನಡೆಸಬೇಕು ಎಂದು ಬೋಧಿಸಿದ್ದರು. 

 

ಭಾರತದ ಪ್ರಸಿದ್ಧ ಕವಯಿತ್ರಿಯಾದ ಸರೋಜಿನಿ ನಾಯ್ಡು (Sarojini Naidu) ಇಸ್ಲಾಮಿನಲ್ಲಿ ದೇವನ ಮುಂದೆ ನಿಲ್ಲುವ ಸಮಾನತೆಯ ನೋಟವನ್ನು ವೀಕ್ಷಿಸುತ್ತಾ ಹೇಳುತ್ತಾರೆ:

It was the first religion that preached and practiced democracy for, in the mosque, when the call for prayer is sounded and worshippers are gathered together, the democracy of Islam is embodied five times a day when the peasant and the king kneel side by side and proclaim: “God Alone is Great.”  I have been struck over and over again by this indivisible unity of Islam that makes man instinctively a brother.  (S. Naidu, Ideals of Islam, vide speeches & writings, Madras, 1918, p 169)

ಪ್ರಜಾಪ್ರಭುತ್ವವನ್ನು ಬೋಧಿಸಿ ಪ್ರಾಯೋಗಿಕಗೊಳಿಸಿದ ಪ್ರಪ್ರಥಮ ಧರ್ಮವಾಗಿದೆ ಇಸ್ಲಾಮ್.  ಮಸೀದಿಯಿಂದ ಪ್ರಾರ್ಥನೆಗಾಗಿ ಕರೆಯಲ್ಪಟ್ಟಾಗ ಭಕ್ತರೆಲ್ಲರೂ ಸಾಲುಸಾಲಾಗಿ ಸೇರಿ, ರೈತ ರಾಜನೆಂಬ ವ್ಯತ್ಯಾಸವಿಲ್ಲದೆ ಭುಜಕ್ಕೆ ಭುಜ ಸೇರಿಸಿ, ದೇವನ ಮುಂದೆ ಸಾಷ್ಟಾಂಗವೆರಗುತ್ತಾ ದೇವನೊಬ್ಬನೇ ದೊಡ್ಡವನು ಎನ್ನುವಾಗ ಇಸ್ಲಾಮಿನ ಪ್ರಜಾಪ್ರಭುತ್ವ ದೈನಿಕವಾಗಿ ಐದು ಬಾರಿ ಗೋಚರಿಸುತ್ತದೆ.  ಮನುಷ್ಯನನ್ನು ಜನ್ಮತಃ ಸಹೋದರನಾಗಿ ಪರಿಗಣಿಸುವ ಇಸ್ಲಾಮಿನ ಈ ಅವಿಭಾಜಿತ ಐಕ್ಯತೆಯು ನನ್ನನ್ನು ಬಾರಿಬಾರಿಗೂ ದಿಗ್ಭ್ರಮೆಗೊಳಿಸುತ್ತಿದೆ.

 

ಪ್ರೊ. ಹರ್‌ಗ್ರೋಂಜೆ (Prof. Hurgronje)ಯವರ ಮಾತುಗಳಲ್ಲಿ:

the league of nations founded by the Prophet of Islam put the principle of international unity and human brotherhood on such universal foundations as to show candle to other nations…… the fact is that no nations of the world can show a parallel to what Islam has done towards the realization of the idea of the League of Nations

ಇಸ್ಲಾಮಿನ ಪ್ರವಾದಿಯಿಂದ ಶೋಧಿಸಲ್ಪಟ್ಟ ರಾಷ್ಟ್ರಗಳ ಒಕ್ಕೂಟವು ಇತರ ರಾಷ್ಟ್ರಗಳಿಗೆ ಬೆಳಕು ತೋರಿಸುವ ಅಂತಹ ಜಾಗತಿಕ ಪ್ರತಿಷ್ಠಾನಗಳಿಗೆ ಅಂತರಾಷ್ಟ್ರೀಯ ಐಕ್ಯತೆ ಮತ್ತು ಮಾನವ ಭಾತೃತ್ವದ ತತ್ವವನ್ನು ಕಲಿಸಿಕೊಟ್ಟಿತ್ತು… ರಾಷ್ಟ್ರಗಳ ಒಕ್ಕೂಟದ ಕಲ್ಪನೆಯನ್ನು ಸಾಧಿಸಲು ಇಸ್ಲಾಮ್ ಮಾಡಿದ್ದಕ್ಕೆ ಸಮಾನಾಂತರವಾದ ಒಂದು ಪ್ರಯತ್ನ ಮಾಡಲು ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಸಾಧ್ಯವಿಲ್ಲವೆಂಬುದು ವಾಸ್ತವಿಕತೆಯಾಗಿದೆ.

 

ತಮ್ಮ ಜೀವನಶೈಲಿ ಮತ್ತು ಬೋಧನೆಗಳು ಇತಿಹಾಸದ ಗರ್ಭಗಳಲ್ಲಿ ಹುದುಗಿಹೋದಂತಹ ವ್ಯಕ್ತಿಗಳನ್ನು ದೈವತ್ವಕ್ಕೇರಿಸಲು ಜಗತ್ತು ಒಮ್ಮೆಯೂ ನಿರಾಕರಿಸಿಲ್ಲ. ಈ ಎಲ್ಲಾ ವ್ಯಕ್ತಿಗಳು ಮುಹಮ್ಮದ್‌(ಸ)ರವರು ಸಾಧಿಸಿದ ಒಂದಂಶವನ್ನಾದರೂ ಸಾಧಿಸಿಲ್ಲವೆಂಬುದು ಐತಿಹಾಸಿಕವಾಗಿ ರುಜುವಾತಾಗಿದೆ.  ಮುಹಮ್ಮದ್‌(ಸ)ರವರ ಪ್ರತಿಯೊಂದು ಶ್ರಮವೂ ಮನುಷ್ಯರನ್ನು ಏಕದೇವಾರಾಧನೆಯೆಡೆಗೆ ಮತ್ತು ದೈವಿಕ ಶಾಸನಗಳಿಗೆ ವಿಧೇಯರಾಗಿ ಪರಸ್ಪರ ಸಹೋದರರಾಗಿ ಜೀವಿಸುವಂತೆ ಮಾಡುವ ಏಕೈಕ ಉದ್ದೇಶದಿಂದಾಗಿತ್ತು. ಅವರೆಂದೂ ತಮ್ಮನ್ನು ದೇವಪುತ್ರರೆಂದಾಗಲಿ, ದೇವಾವತಾರವೆಂದಾಗಲಿ, ದೇವಮಾನವನೆಂದಾಗಲಿ ವಾದಿಸಿಲ್ಲ. ಅವರ ಅನುಚರರೂ ಅವರನ್ನು ಆ ರೀತಿ ಪರಿಗಣಿಸಿಲ್ಲ. ಅವರು ಅಂದೂ ಇಂದೂ ದೇವಸಂದೇಶವಾಹಕ (Messenger of God) ಎಂದೇ ಪರಿಗಣಿಸಲ್ಪಟ್ಟಿದ್ದಾರೆ.

 

ಮೈಕಲ್ ಎಚ್ ಹಾರ್ಟ್ (Michael H Hart), ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದವರನ್ನು ಪರಸ್ಪರ ತುಲನೆಗೊಳಿಸಿ, ಮುಹಮ್ಮದ್‌(ಸ)ರವರಿಗೆ ಮೊಟ್ಟಮೊದಲ ಸ್ಥಾನವನ್ನು ನೀಡುತ್ತಾರೆ.  ನಂತರ ಅದಕ್ಕಿರುವ ಕಾರಣವನ್ನು ವಿಶದೀಕರಿಸುತ್ತಾರೆ:

My choice of Muhammad to lead the list of the world’s most influential persons may surprise some readers and may be questioned by others, but he was the only man in history who was supremely successful on both the religious and secular levels.  (M. H. Hart, The 100: A Ranking of the Most Influential Persons in History, New York, 1978, pp. 33)

ಜಗತ್ತಿನ ಅತಿಪ್ರಭಾವಶಾಲಿ ವ್ಯಕ್ತಿಗಳ ಯಾದಿಯಲ್ಲಿ ನಾನು ಮುಹಮ್ಮದ್‌ರವರ ಹೆಸರನ್ನು ಮೊಟ್ಟಮೊದಲು ಸೂಚಿಸಿರುವುದು ಅನೇಕರನ್ನು ವಿಸ್ಮಯಗೊಳಿಸಬಹುದು ಮತ್ತು ಇನ್ನಿತರರನ್ನು ಪ್ರಶ್ನಿಸುವಂತೆ ಮಾಡಬಹುದು.  ಆದರೆ ಇತಿಹಾಸದಲ್ಲಿ ಧಾರ್ಮಿಕ ಮತ್ತು ಧರ್ಮಾತೀತ ಮಟ್ಟಗಳಲ್ಲಿ ಪೂರ್ಣ ಯಶಸ್ಸು ಸಾಧಿಸಿದವರು ಅವರೊಬ್ಬರೇ ಆಗಿದ್ದಾರೆ.

 

ಇಂದು ಹದಿನಾಲ್ಕು ಶತಮಾನಗಳ ಬಳಿಕ ಮುಹಮ್ಮದ್‌(ಸ)ರವರ ಜೀವನಶೈಲಿ ಮತ್ತು ಬೋಧನೆಗಳು ಯಾವುದೇ ಮಾರ್ಪಾಟುಗಳಿಲ್ಲದೆ, ತಿದ್ದುಪಡಿಗೊಳಗಾಗದೆ ಅಂದಿನ ಅದೇ ರೂಪದಲ್ಲಿ ಸಂರಕ್ಷಿಸಲ್ಪಟ್ಟಿದೆ.  ಅವರು ಜೀವಂತವಿದ್ದಾಗ ಆ ಬೋಧನೆಗಳಿಂದ ಮನುಷ್ಯಕಾಯಿಲೆಗಳು ದೂರವಾದಂತೆ ಇಂದೂ ಸಹ ಅದು ಅಷ್ಟೇ ಭರವಸೆಯನ್ನು ಹೊಂದಿದೆ.  ಇದು ಮುಹಮ್ಮದ್‌(ಸ)ರವರ ಅನುಯಾಯಿಗಳ ವಾದವಲ್ಲ.  ಬದಲಾಗಿ ಇತಿಹಾಸದಿಂದ ರುಜುವಾತಾದ ವಾಸ್ತವಿಕ ಸಂಗತಿಯಾಗಿದೆ. 

 

ಕಳೆದ ಹದಿನಾಲ್ಕು ನೂರು ಸಂವತ್ಸರಗಳಿಂದ ಕೋಟ್ಯಂತರ ಜನರ ಹೃದಯಗಳ ಮೇಲೆ ಪರಿವರ್ತನೆಯ ಪ್ರಭಾವವನ್ನು ಬೀರಿದ ಆ ಮಹಾನ್ ವ್ಯಕ್ತಿಯ ಕುರಿತು ತಿಳಿದುಕೊಳ್ಳುವ ಸರದಿ ಈಗ ನಿಮ್ಮದಾಗಿರಲೂಬಹುದು. ನೀವದಕ್ಕೆ ಸನ್ನದ್ಧರಾಗಿದ್ದೀರೆಂದಾದರೆ ಖಂಡಿತವಾಗಿಯೂ ಅದು ನಿಮ್ಮ ಬದುಕನ್ನೇ ಪರಿವರ್ತಿಸಲು ಪರ್ಯಾಪ್ತವಾಗಿದೆ.

No comments:

Post a Comment