Saturday, 15 October 2011

ಕಿಂಗ್ ಫಿಷರ್ ವಿಮಾನಕ್ಕೆ ಪೆಟ್ರೋಲ್ ತುಂಬಿಸಲು ಹಣವಿಲ್ಲ. ಬಜ್ಪೆಯಲ್ಲೇ ಉಳಿದ ವಿಮಾನ


ಮಂಗಳೂರು: ನಿನ್ನೆ ಸಂಜೆ ಮುಂಬೈಗೆ ತೆರಳಬೇಕಾದ ವಿಜಯ್ ಮಲ್ಯ ಕಿಂಗ್ ಫಿಷರ್ ವಿಮಾನವು ಇಂಧನದ ಬಾಕಿ ಹಣವನ್ನು ಪಾವತಿಸದ ಕಾರಣ ಬಜಪೆ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿರುವ ಘಟನೆ ನಡೆದಿದೆ.ಕಿಂಗ್‌ಪಿಷರ್ ವಿಮಾನಯಾನ ಸಂಸ್ಥೆಯು ಇಂಧನ ಪೂರೈಕೆದಾರರ ಕಂಪೆನಿಗಳಿಗೆ ದೊಡ್ಡ ಮೊತ್ತದ ಹಣ ವನ್ನು ಬಾಕಿ ಉಳಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಹಲವಾರು ವಿಮಾನ ನಿಲ್ದಾಣಗಳಲ್ಲಿ ಕಿಂಗ್‌ಪಿಷರ್ ವಿಮಾನವು ಇಂಧನ ಕೊರತೆಯ ಕಾರಣ ಸಂಚಾರ ನಡೆಸಲು ಸಾಧ್ಯವಾಗಲಿಲ್ಲ.
 ನಿನ್ನೆ ಸಂಜೆ ಮಂಗಳೂರಿನಿಂದ ಮುಂಬೈಗೆ ತೆರಳಬೇಕಾಗಿದ್ದ  ವಿಮಾನವು ಇಂಧನ ಕಂಪೆನಿಯಾದ ಎಚ್‌ಪಿ ಜೊತೆ ಮಾತುಕತೆ ನಡೆಸಿದ ಬಳಿಕವೂ ಇಂಧನ ತುಂಬಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಹೀಗಾಗಿ ಕಿಂಗ್‌ಪಿಷರ್ ಸಿಬ್ಬಂದಿ ಮುಂಬೈ ಪ್ರಯಾಣಿಕರ ಆಕ್ರೋಶ ಎದುರಿಸಬೇಕಾಯಿತು. ಬಳಿಕ ಹತ್ತಿರದ ಪ್ರಯಾಣಿಕರು ಮರಳಿ ಮನೆಗೆ ಸೇರಿಕೊಂಡರೆ ಕೆಲವರಿಗೆ ಹೋಟೆಲ್‌ಗಳಲ್ಲಿ ವಾಸ್ತವ್ಯ ಕಲ್ಪಿಸಲಾಯಿತು.ಕಿಂಗ್ ಫಿಷರ್  ಎಚ್‌ಪಿಸಿಎಲ್ ಸಂಸ್ಥೆಗೆ ಸುಮಾರು ೬೦೦ ಕೋಟಿ ರೂ. ಹಣ ಬಾಕಿ ಇರಿಸಿದೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಕಿಂಗ್‌ಫಿಷರ್ ವಿಮಾನ ಯಾನ ಸಂಸ್ಥೆಯ ಅಸ್ತಿತ್ವಕ್ಕೆ ಸಂಚಕಾರ ಉಂಟಾಗಿದೆ ಎನ್ನಲಾಗುತ್ತಿದೆ.

No comments:

Post a Comment